Thursday, March 19, 2026
Thursday, March 19, 2026

Dr. Satyanarayana HS ಕನ್ನಡ ಕವಿಗಳ‌ ಋತು ವಿಲಾಸ ಅಭ್ಯಾಸ ಮಾಡುವುದೇ ಒಂದು ಸೊಗಸು- ಡಾ.ಸತ್ಯನಾರಾಯಣ

Date:

Dr. Satyanarayana HS ಮಳೆಯಿಲ್ಲದೆ ಇಳೆಯುಂಟೆ? ಭೂಮಿಯ ಮೇಲಿನ ಜೀವಕೋಟಿ ಬದುಕುಳಿಯಲು ಮಳೆ ಬೇಕು. ಹಾಗೆಂದೇ ಕನ್ನಡ ಕವಿಗಳು ವರ್ಷ ಋತುವನ್ನು ಬಣ್ಣಿಸಿರುವ ಪರಿ ಅನನ್ಯವಾಗಿದೆ. ಪಂಪ ರನ್ನ ಹರಿಹರ ಕುಮಾರವ್ಯಾಸ, ರತ್ನಾಕರವರ್ಣಿಯಿಂದ ಮೊದಲ್ಗೊಂಡು ಆಧುನಿಕ ಕವಿಗಳು ಮಳೆಯನ್ನಿ ಜೀವನಾಡಿಯಾಗಿ ಕಂಡಿರುವ ಬಗೆಯನ್ನು ವಿಮರ್ಶಕ ಡಾ.ಎಚ್.ಎಸ್. ಸತ್ಯನಾರಾಯಣ ವಿವರಿಸಿದರು.

ಭೂಮಿಕಾ ಆಯೋಜಿಸಿದ್ದ ಈ ಸಂಜೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಬಿಎಂಶ್ರೀ ಬೇಂದ್ರೆ ಕುವೆಂಪು ಪುತಿನ ಕೆ ಎಸ್ ನರಸಿಂಹಸ್ವಾಮಿ, ಜಿಎಸ್ ಶಿವರುದ್ರಪ್ಪ, ಕಣವಿ, ನಿಸಾರ್, ಸು ರಂ ಎಕ್ಕುಂಡಿ ಕಂಬಾರ, ಎಂ ಆರ್ ಕಮಲ, ಪ್ರತಿಭಾ ನಂದಕುಮಾರ್ ಮುಂತಾದವರ ಕವಿತೆಗಳಲ್ಲಿ ಚಿತ್ರಿತವಾಗಿರುವ ಮಳೆಯ ವರ್ಣನೆಯನ್ನು ಸಭೆಗೆ ಪರಿಚಯಿಸಿದರು.

Dr. Satyanarayana HS ಜನಪದರ ಅನೇಕ ಮಳೆಯ ಹಾಡುಗಳನ್ನು ಉಲ್ಲೇಖಿಸುತ್ತಾ ಕನ್ನಡದ ಸುಪ್ರಸಿದ್ಧ ಕವಿಗಳ ರಚನೆಗಳನ್ನು ಚರ್ಚಿಸಿದರು. ಅಧ್ಯಕ್ಷತೆ ವಹಿಸಿದ್ದ ಭೂಮಿಕಾ ಅಧ್ಯಕ್ಷ ಡಾ. ಕೃಷ್ಣ ಭಟ್ ಮಾತನಾಡಿ ಕನ್ನಡ ಕವಿಗಳು ಕಂಡ ಋತು ವಿಲಾಸವನ್ನು ಅಭ್ಯಸಿಸುವುದೇ ಒಂದು ಸೊಗಸೆಂದು ಬಣ್ಣಿಸಿದರು.

ಈ ಬಗೆಯ ಕಾರ್ಯಕ್ರಮದಿಂದಲಾದರೂ ವರುಣ ದೇವ ಮಳೆಯನ್ನು ಕರುಣಿಸಲೆಂದು ಆಶಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...