Tuesday, May 5, 2026
Tuesday, May 5, 2026

Kateel Ashok Pai Memorial College ವಿದ್ಯಾರ್ಥಿಗಳಿಗೆ ಔದ್ಯೋಗಿಕ ಪೂರ್ವ ತಯಾರಿ ಕಾರ್ಯ ಕ್ರಮ

Date:

Kateel Ashok Pai Memorial College ಶಿವಮೊಗ್ಗದ ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ‘ದಿಶಾ’ ಕೆರಿಯರ್ ಗೈಡೆನ್ಸ್ & ಪ್ಲೇಸ್‌ಮೆಂಟ್ ಸೆಲ್ ಹಾಗೂ ಶಿವಮೊಗ್ಗ ಛೇಂಬರ್ ಆಫ್ ಕಾಮರ್ಸ್ನ ಸಹಯೋಗದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಎಂ.ಎಸ್ಸಿ ಸೈಕಾಲಜಿ ವಿದ್ಯಾರ್ಥಿಗಳಿಗೆ ಪ್ರಿ ಪ್ಲೇಸ್‌ಮೆಂಟ್ ಟ್ರೈನಿಂಗ್ (ಔದ್ಯೋಗಿಕ ಪೂರ್ವತಯಾರಿ) ಕಾರ್ಯಕ್ರಮವನ್ನು ಆಗಸ್ಟ್ 05 & 06 ರಂದು ಛೇಂಬರ್ ಆಫ್ ಕಾಮರ್ಸ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಎರಡು ದಿನಗಳ ತರಬೇತಿಯನ್ನು ಬೆಂಗಳೂರಿನ ನುರಿತ ತರಬೇತುದಾರರಾದ ಶ್ರೀ ವೇದಮೂರ್ತಿಯವರು ನಡೆಸಿಕೊಡಲಿದ್ದಾರೆ. ಈ ತರಬೇತಿಯ ಉದ್ಘಾಟನೆಯನ್ನು ನಮ್ಮ ಹೆಮ್ಮೆಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್. ಅರುಣ್ ರವರು ನಡೆಸಿಕೊಡಲಿದ್ದಾರೆ.

Kateel Ashok Pai Memorial College ಡಾ.ರಜನಿ ಎ ಪೈ, ಡಾ.ರಾಜೇಂದ್ರ ಚೆನ್ನಿ, ಛೇಂಬರ್ ಆಫ್ ಕಾಮರ್ಸ್ನ ಶ್ರೀ ಗೋಪಿನಾಥ್, ಶ್ರೀಮತಿ ಸವಿತಾ ಮಾಧವ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಕೆ ಈ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿರುವರು.

ಈ ಉದ್ಘಾಟನಾ ಸಮಾರಂಭವು ದಿನಾಂಕ 05/08/2023 ರಂದು ಬೆಳಿಗ್ಗೆ 09:30 ಕ್ಕೆ ಸರಿಯಾಗಿ ಛೇಂಬರ್ ಆಫ್ ಕಾಮರ್ಸ್ ಹಾಲ್‌ನಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department Of Skill Development ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರದಲ್ಲಿ ವಿವಿಧ ಡಿಪ್ಲೊಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನ

Department Of Skill Development ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (ಜಿಟಿಟಿಸಿ)...

Shivamogga City Water Supply  ಶಿವಮೊಗ್ಗ ನಗರಕ್ಕೆ ಮೇ 5 ಮತ್ತು 6 ರಂದು‌ ಕುಡಿಯುವ ನೀರಿನ ಸರಬರಾಜು ವ್ಯತ್ಯಯ.

Shivamogga City Water Supply ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ಕ್ಲಾರಿಪ್ಲೋಕ್ಯೂಲೇಟರ್ ದುರಸ್ಥಿ ಕಾಮಗಾರಿ...

Canara Bank ಕೆನರಾ ಬ್ಯಾಂಕ್ ಸ್ವ- ಉದ್ಯೋಗ ತರಬೇತಿ ಕೇಂದ್ರದಿಂದ ಉಚಿತ ತರಬೇತಿ ಪ್ರಕಟಣೆ.

Canara Bank ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರಿನಲ್ಲಿ...

Sharavati ಬೇಸೂರು ಅಣುಸ್ಥಾವರ ಬೇಡ. ವೃಕ್ಷಲಕ್ಷ ಆಂದೋಲನದ ಪರವಾಗಿ ಒತ್ತಾಯ.

Sharavati ಇತ್ತೀಚೆಗೆ ಬಹಿರಂಗಗೊಂಡ ವ್ಯಾಪಕ ಚರ್ಚೆಗೆ, ವಿವಾದಕ್ಕೆ ಕಾರಣವಾದ ಶಿವಮೊಗ್ಗಾ ಜಿಲ್ಲೆ ಸಾಗರ...