Saturday, September 28, 2024
Saturday, September 28, 2024

Klive news Special Article ಮಳೆಗಾಲದಲ್ಲೊಂದು ಕವಿತೆಯ ಧಾರೆ

Date:

Klive news Special Article ಇದು ಕಲ್ಪನೆಯ ಕಾವ್ಯವಲ್ಲ. ಅಕ್ಷರಶಃ ಕಣ್ಣೆದುರಿನ ದೃಶ್ಯಕ್ಕೆ ಬರೆದ ಭಾವಭಾಷ್ಯ. ಕಳೆದ 10 ದಿನಗಳಿಂದ ಬಾನಿಗೆ ತೂತು ಬಿದ್ದಂತೆ ಹಗಲಿರುಳು ಒಂದೇ ಸಮನೆ ಭೋರ್ಗರೆಯುತ್ತಿರುವ ವರ್ಷಧಾರೆಯ ಅನಾವರಣ. ನಿನ್ನೆ ಮಧ್ಯಾಹ್ನ 1 ಗಂಟೆಗೆ ಡ್ಯೂಟಿಗೆ ಹೋಗುವಾಗ ರಾತ್ರಿ 11 ಕ್ಕೆ ಮರಳುವಾಗ, 20 ಕಿ.ಮೀ. ದೂರದ ಸಹ್ಯಾದ್ರಿ ಕಾನನದ ನಡುವಿನ, ಕಾಳಿ ದಂಡೆಯ ಹಾದಿಯುದ್ದಕ್ಕೂ ಕಂಡ ದೃಶ್ಯಗಳ ಕವಿ ಕಂಗಳ ಚಿತ್ರಣ. ಒಪ್ಪಿಸಿಕೊಳ್ಳಿ..” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಮಳೆಗಾಲದ ಹಾದಿ..!

ಮೋಡಕವಿದ ಮಬ್ಬು ಬೆಳಕಲಿ
ನಿದ್ದೆಗಣ್ಣಲಿ ಒದ್ದೆ ಮೈಯಲಿ ರಸ್ತೆ
ಇಕ್ಕೆಲಗಳಲೂ ನಡುಗುತ ನಿಂತ
ಗಿಡಮರಗಳೊಂದಿಗೆ ಕೋರುತಿದೆ
ಸ್ವಾಗತವನು ಮಳೆಹನಿ ನಡುವಲಿ.!

ಹಾದಿಯುದ್ದಕ್ಕೂ ಅಕ್ಕ ಪಕ್ಕಗಳಲಿ
ಹಳ್ಳ ಕೊಳ್ಳ ನದಿ ಭೋರ್ಗರೆದು
ಉಕ್ಕುಕ್ಕಿ ಹರಿಯುತಿವೆ ರಭಸದಲಿ
ಧಾರಾಕಾರ ವರ್ಷಧಾರೆಗೆ ನೆನೆದು
ಮಾರುತ ಹಾಡಿದೆ ಮಂದಸ್ತರದಲಿ.!

ನಡುಗುವ ಮರಗಳ ಕೊಂಬೆಗಳಲಿ
ಮುದುರಿ ಕುಳಿತ ಹಕ್ಕಿಪಕ್ಷಿ ಸಂಕುಲ
ಮೌನತಂತಿ ಮೀಟಿವೆ ನಿಶ್ಶಬ್ದರಾಗದಲಿ
ಪೆÇಠರೆಗಳಲಡಗಿದ ಅಳಿಲು ಮೊಲ
ಬಿರುಮಳೆಗೆ ವಟಗುಟ್ಟಿವೆ ಬೆಚ್ಚುತಲಿ.!

ಮೇಘಗಳ ತಾಡನಕೆ ಹೆದರಿ ಆದಿತ್ಯ
ಉಸಾಬರಿ ಬೇಡವೆಂದು ಬೆಚ್ಚಹೊದ್ದು
ಮಲಗಿಹನು ಮುಗಿಲಿನ ಮನೆಯಲಿ
ಅವನಿಗಿಲ್ಲದ ಜವಾಬ್ಧಾರಿ ನನಗೇಕೆಂದು
ಚಂದ್ರನೂ ಕಾಣೆಯಾಗಿಹನು ಕತ್ತಲಲಿ.!

Klive news Special Article ಜಗದ ಜೀವ ಜೀವನಗಳ ಅರಿವಿಲ್ಲದೆ
ಯಾವ್ಯಾವುದರ ಪರಿವೆಯೂ ಇಲ್ಲದೆ
ನರ್ತಿಸುತಿಹನು ವರುಣ ರೌದ್ರತೆಯಲಿ
ಬಾನು ಭೂಮಿ ಏಕವಾದ ಘಳಿಗೆಗಳಿಗೆ
ಮೂಕಸಾಕ್ಷಿಯಾಗಿದೆ ರಸ್ತೆ ಮೌನದಲಿ.!

ಎ.ಎನ್.ರಮೇಶ್.ಗುಬ್ಬಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...