Doddapete Police Station ಶಿವಮೊಗ್ಗ ನಗರ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಾನಗರ ವಾಸಿ ಹಯಾತುಲ್ಲಾಖಾನ್ ಅಲಿಯಾಸ್ ಬಚ್ಚಾ ಎಂಬುವವನ ಕೊಲೆ ಕೇಸಿನಲ್ಲಿ ಆರೋಪಿಗಳಾಗಿದ್ದ ಅರ್ಬಾಜ್ ಬಿನ್ ರಷೀದ್ಕಾನ್, ಶಾರುಖಾನ್ ಬಿನ್ ಸೈಯದ್ ಮುನಾಫ್, ಸದಾಬ್ ಬಿನ್ ಹಿದಾಯತ್ ಮತ್ತು ಅಲ್ಯಾಜ್ಅಶು ಬಿನ್ ಸೈಯದ್ ಜಮೀಲ್ ಎಂಬುವವರಿಗೆ ಭಾ.ದಂ. ಸಂಹಿತೆ ಕಲಂ: 143,144,147,148,202,114 ರೆ:ವಿ 149ರ ಅಡಿಯಲ್ಲಿ ಎಸಗಿರುವ ಆರೋಪಗಳು ದೃಢಪಟ್ಟಿರುತ್ತದೆ ಎಂದು ಪರಿಗಣಿಸಿ ದೋಷಿಗಳು ಎಂದು ತೀರ್ಮಾನಿಸಿ 1ನೇ ಮತ್ತು 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್.ಮಾನು ಇವರು ಜೀವಾವಧಿ ಕಾರಾಗೃಹ ವಾಸ ಶಿಕ್ಷೆ ಹಾಗೂ ತಲಾ ರೂ. 50ಸಾವಿರ ರೂ .ದಂಡವನ್ನು ವಿಧಿಸಿ ಆದೇಶಿಸಿ ಜುಲೈ 5 ರಂದು ತೀರ್ಪು ನೀಡಿರುತ್ತಾರೆ.
Doddapete Police Station ಅಭಿಯೋಜನೆಯ ಪರವಾಗಿ ಸರ್ಕಾರಿ ಅಭಿಯೋಜಕರಾದ ಜೆ. ಶಾಂತರಾಜ್ ಇವರು ವಾದ ಮಂಡಿಸಿದ್ದರು.
