Sunday, October 6, 2024
Sunday, October 6, 2024

Health camp ಬೆಳೆಯುವ ಮಕ್ಕಳನ್ನ ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕು

Date:

Health camp ಹುಟ್ಟಿದ ಮಗುವಿನಿಂದ ವಯಸ್ಸಿನ ಹಂತದವರೆಗೂ ಬೆಳೆಯುವ ಮಕ್ಕಳಿಗೆ ಅತ್ಯಂತ ಸೂಕ್ಷ್ಮ ತನದಿಂದ ಗಮನಹರಿಸುವ ಮೂಲಕ ಪೋಷಕರು ಮಹತ್ತರವಾದ ಜವಾಬ್ದಾರಿ ಹೊರಬೇಕು ಎಂದು ನಗರಸಭಾ ಸದಸ್ಯ ಮುನೀರ್ ಅಹ್ಮದ್ ಹೇಳಿದರು.
ನಗರದ ಉಪ್ಪಳ್ಳಿ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಶಾಂತಿನಗರ, ಉಪ್ಪಳ್ಳಿ ವಾರ್ಡಿನ 0-18 ವರ್ಷದ ಮಕ್ಕಳಿಗೆ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೆಲವು ಆಕಸ್ಮಿಕ ಹಾಗೂ ವಂಶಪರಂಪಾರ್ಯವಾಗಿ ವಿವಿಧ ತೊಂದರೆಗೀಡಾಗುವ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ತಪಾಸಣೆ ಸೇರಿದಂತೆ ಆಪರೇಷನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ನಿವಾಸಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಮಕ್ಕಳಿಗೆ ಸಣ್ಣವಯಸ್ಸಿನಿಂದ ಕೆಲವು ಕಿಡ್ನಿ, ಕೈಕಾಲು ಅಥವಾ ಮೆದುಳಿನ ಶಕ್ತಿಹೀನತೆಯಿಂದ ಬಳಲುತ್ತಿರು ತ್ತಾರೆ. ಚಿಕಿತ್ಸೆಗೆ ತೆರಳಿದರೆ ಸಾವಿರಾರು ರೂ.ಗಳ ವ್ಯಯಿಸಲು ಶಕ್ತಿ ಹೊಂದಿರದ ಹಿನ್ನೆಲೆಯಲ್ಲಿ ಸರ್ಕಾರ ಅಂತಹ ಆರ್ಥಿಕದಿಂದ ಹಿಂದುಳಿದಿರುವ ಕುಟುಂಬದವರಿಗೆ ಅನುಕೂಲವಾಗಲು ಇಂತಹ ಶಿಬಿರ ಆಯೋಜಿಸಿದೆ ಎಂದರು.
ವೈದ್ಯೆ ಡಾ. ಪಾವನ ಮಾತನಾಡಿ 0-18ವರ್ಷ ಒಳಪಟ್ಟ ಮಕ್ಕಳಿಗೆ ಶೀತ, ಜ್ವರ ಅಥವಾ ಸಣ್ಣಪುಟ್ಟ ಸಮಸ್ಯೆ ಗಳಿಗೆ ಸ್ಥಳದಲೇ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಮಟ್ಟದ ಚಿಕಿತ್ಸೆ ಹೊಂದಬೇಕಾದರೆ ಜಿಲ್ಲಾ ಆರಂಭೀಕ ಮದ್ಥಸ್ಥಿಕೆ ಕೇಂದ್ರಕ್ಕೆ ಕಳುಹಿಸಿ ಉಚಿತವಾಗಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ಹೇಳಿದರು.

Health camp ಈ ಸಂದರ್ಭದಲ್ಲಿ ವೈದ್ಯೆ ಡಾ. ಕೋಮಲ, ಸಿಬ್ಬಂದಿಗಳಾದ ರೇಣುಕಾ, ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರದ ಅಧಿಕಾರಿ ದಿವ್ಯಾ, ಆಶಾ ಸುಗಮಕಾರರೆ ಶೋಭಾ, ಕಾರ್ಯಕರ್ತೆಯರಾದ ರೇಣುಕಾ, ಸುಶೀಲ, ಮಾಲ, ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಅಕ್ಟೋಬರ್ 7 ರಂದು ಆಲ್ಕೊಳ‌ ಸುತ್ತಮುತ್ತ ವಿದ್ಯುತ್ ಸರಬರಾಜು ಇರುವುದಿಲ್ಲ

MESCOM ಶಿವಮೊಗ್ಗ ಅಕ್ಟೋಬರ್ 05 (ಕರ್ನಾಟಕ ವಾರ್ತೆ): ಶಿವಮೊಗ್ಗ...

Nehru Stadium Shimoga ಪ್ರಾಥಮಿಕ ಶಾಲಾಮಕ್ಕಳ ಕ್ರೀಡಾಕೂಟ ಉದ್ಘಾಟನೆ

Nehru Stadium Shimoga ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ...

Shimoga Dasara 2024 ಶಿವಮೊಗ್ಗ ರಂಗದಸರಾದಲ್ಲಿ ಅ.5 ರಿಂದ ನಾಟಕ ಪ್ರದರ್ಶನಗಳ ಸುಗ್ಗಿ

Shimoga Dasara 2024 ಈ ಬಾರಿ ಶಿವಮೊಗ್ಗ ಮಹಾನಗರ ಪಾಲಿಕೆಯು ಆಯೋಜನೆ...

Shivamogga News ಕೆರೆ,ಕಟ್ಟೆ,ಹಳ್ಳ ಜಮೀನು ಇತರೆ ಸರ್ಕಾರದ ಸ್ವತ್ತು ಒತ್ತುವರಿ ಗಮನಕ್ಕೆ ಬಂದಾಕ್ಷಣ ಕ್ರಮ ಕೈಗೊಳ್ಳಿ-ನ್ಯಾ.ಬಿ.ಎ.ಪಾಟೀಲ್

Shivamogga News ಸರ್ಕಾರದ ಸ್ವತ್ತಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು...