Thursday, December 18, 2025
Thursday, December 18, 2025

Dr.BR Ambedkar ಅಂಬೇಡ್ಕರ್ ನಾಮಕರಣವಾದ ರಸ್ತೆಗೆ ಹಳೇ ಹೆಸರು ಬಳಸದಿರಲು ಆಗ್ರಹ

Date:

Dr.BR Ambedkar ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯನ್ನು ಸಾರ್ವಜನಿಕರು ಎಂದಿನಂತೆ ಹಿಂದಿನ ಹೆಸರನ್ನು ಬಳಸದೇ ನಾಮಕರಣಗೊಂಡಿರುವ ಅಂಬೇಡ್ಕರ್ ರಸ್ತೆ ಎಂದು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ನಗರಸಭಾ ಆಯುಕ್ತ ಡಿ.ಉಮೇಶ್ ಆಗ್ರಹಿಸಿದ್ದಾರೆ.

Dr.BR Ambedkar ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಮೂಲ ಹೆಸರು ಡಾ|| ಬಿ.ಆರ್.ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು. ನಂತರ ದಿನಗಳಲ್ಲಿ ಸಂತೆಮಾರ್ಕೆಟ್ ಆ ರಸ್ತೆಯಲ್ಲಿ ಸ್ಥಳಾಂತರಗೊಂಡ ಬಳಿಕ ಮಾರ್ಕೆಟ್ ರಸ್ತೆ ಎನ್ನಲಾಗುತ್ತಿದ್ದು ಇದನ್ನು ಬದಲಿಸಿ ಅಂಬೇಡ್ಕರ್ ರಸ್ತೆ ಎಂದು ಬಳಕೆ ಮಾಡುವ ಮೂಲಕ ಮಹತ್ಮರಿಗೆ ಗೌರವಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಂಬೇಡ್ಕರ್ ರಸ್ತೆಯಲ್ಲಿ ಇರುವಂತಹ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಮಾರ್ಕೆಟ್ ರಸ್ತೆ ಎಂಬುದರ ಬದಲಾಗಿ ಅಂಬೇಡ್ಕರ್ ರಸ್ತೆ ಬದಲಿಸಿಕೊಂಡು ಮುನ್ನೆಡೆದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಅಂಬೇಡ್ಕರ್ ರಸ್ತೆ ಹೇಳುವ ಮೂಲಕ ಅಭ್ಯಾಸವಾಗಲಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಬಿಜೆಪಿಯವರ ದ್ವೇಷ ರಾಜಕಾರಣ‌ ನ್ಯಾಯದೇವತೆಯೆದುರು ಸೋತಿದೆ- ಸಿದ್ಧರಾಮಯ್ಯ

CM Siddharamaih ಬಿಜೆಪಿಯವರ ದ್ವೇಷ ರಾಜಕಾರಣ ನ್ಯಾಯ ದೇವತೆಯ ಎದುರು ಸೋತಿದೆ....

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...