Monday, February 2, 2026
Monday, February 2, 2026

Indian Medical Association ಯೋಗದಿಂದ ದೇಹ ಮತ್ತು ಮನಸ್ಸಿಗೆ ಸಾಮರಸ್ಯ ಬೆಸೆಯುತ್ತದೆ-ಡಾ.ಅರುಣ್

Date:

9 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾರತೀಯ ವೈದ್ಯಕೀಯ ಸಂಘ , ಶಿವಮೊಗ್ಗ ಶಾಖೆಯಲ್ಲಿ ಆಚರಿಸಲಾಯಿತು .

ವೈದ್ಯ ಸಮೂಹಕ್ಕೆ ಯೋಗ ದಿನದ ಪಠ್ಯದ ಪ್ರಕಾರ ಅಷ್ಟಾಂಗ ಯೋಗ ಪಟುಗಳು , ಅಮೃತ ಯೋಗ ಕೇಂದ್ರದ ಶ್ರೀ . ಆದಿತ್ಯ ಹಾಗು ಕುಮಾರಿ ಅನನ್ಯ ಅವರು ಯೋಗ ಕಾರ್ಯಕ್ರಮ ನಡೆಸಿದರು .

Indian Medical Association ಯೋಗವು 6,000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದ್ದು ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ . ಯೋಗದ ಪ್ರಾಮುಖ್ಯತೆ ಅರಿತ ಜನ ತಮ್ಮ ಉತ್ತಮ ಆರೋಗ್ಯಕ್ಕಾಗಿ ಯೋಗ ಅಭ್ಯಸಿಸಲು ಮುಂದಾಗಿದ್ದಾರೆ. ಅಂತೆಯೇ ಹಲವಾರು ವೈದ್ಯರೂ ಕೂಡ ತಮ್ಮ ದಿನಚರಿಯಲ್ಲಿ ಯೋಗದ ಅಭ್ಯಾಸ ಮಾಡಿ, ಪ್ರಾಮುಖ್ಯತೆ ತಿಳಿಯದವರಿಗೆ ಅದರ ಲಾಭದ ಬಗ್ಗೆ ತಿಳಿ ಹೇಳಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ .

ಇದರಿಂದ ಮನಸ್ಸು, ದೇಹ ಮತ್ತು ಮನುಷ್ಯ ಮತ್ತು ಪ್ರಕೃತಿಯ ನಡುವೆ ಪರಿಪೂರ್ಣ ಸಾಮರಸ್ಯವನ್ನು ಬೆಸೆಯುತ್ತದೆ ಎಂದು ಐಎಂಎ ಅಧ್ಯಕ್ಷರಾದ ಡಾ . ಅರುಣ್ ಎಂ . ಎಸ್ ನುಡಿದರು .

ಯೋಗ ದಿನದ ಆಚರಣೆಯಲ್ಲಿ ಸುಮಾರು 25 ಜನ ವೈದ್ಯರು ಪಾಲ್ಗೊಂಡಿದ್ದರು . ಕಾರ್ಯದರ್ಶಿ ಡಾ. ರಕ್ಷಾ ರಾವ್ , ಖಜಾಂಚಿ ಡಾ. ಶಶಿಧರ್ , ಡಾ. ರಮೇಶ್ , ಡಾ. ಶಂಭುಲಿಂಗ ಸೇರಿದಂತೆ ಹಲವಾರು ವೈದ್ಯರು ನೆರೆದಿದ್ದರು .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...