Saturday, December 6, 2025
Saturday, December 6, 2025

Indian Medical Association Shivamogga ಸಿಪಿಆರ್ ಮಾಹಿತಿಯಿಂದ ಹೃದಯಾಘಾತವಾದವರನ್ನ ಬದುಕಿಸಬಹುದು- ಡಾ.ಎಂ.ಎಸ್.ಅರುಣ್

Date:

Indian Medical Association Shivamogga ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ . ಮನುಷ್ಯನ ಹೃದಯ ಬಡಿತ ನಿಲ್ಲುತ್ತಿದ್ದಂತೆ ಕುಟುಂಬಸ್ಥರು ಭಯಭೀತರಾಗುತ್ತಾರೆ , ಏನು ಮಾಡಬೇಕೆಂಬುದು ಗೊತ್ತಾಗುವುದಿಲ್ಲ. ಆ ಸಮಯದಲ್ಲಿ , ತಕ್ಷಣ ಸಿಪಿಆರ್ ಮಾಡಿದರೆ ,ಜೀವ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯ ಅಧ್ಯಕ್ಷರಾದ ಡಾ . ಅರುಣ್ ಎಂ ಎಸ್ ನುಡಿದರು .

ಐಎಂಎ ಶಿವಮೊಗ್ಗದಿಂದ 15.6.2023 ರಂದು ಐಎಂಎ ಸಭಾಂಗಣದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಹ್ಯಾಂಡ್ಸ್ ಓನ್ಲಿ ಸಿಪಿಆರ್ ತರಬೇತಿ ಕಾರ್ಯಕ್ರಮದ ಚಾಲನೆ ನೀಡುತ್ತಾ ಹೇಳಿದರು .

ಸಿಪಿಆರ್ ತರಬೇತಿಯನ್ನು ಐಎಂಎ ಸಹ ಕಾರ್ಯದರ್ಶಿ ಹಾಗು ಸಿಪಿಆರ್ ಪ್ರಮಾಣೀಕೃತ ತರಬೇತುದಾರರಾದ ಡಾ. ಅನುಪ್ ರಾವ್ ಅವರು ಅತ್ಯುತ್ತಮ ಪಿಪಿಟಿ ಪ್ರಸ್ತುತಿ ಮೂಲಕ ಮತ್ತು ಲೈವ್ ಡೆಮೊ ಮತ್ತು ಸಂವಾದದ ಮೂಲಕ ನಡೆಸಿಕೊಟ್ಟರು .

ಮಾನಸ ಟ್ರಸ್ಟ್ ಸಹಯೋಗದೊಂದಿಗೆ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬ್ಯಾಚ್ಗಳ ಮೂಲಕ ಈ ಪ್ರಮಾಣೀಕೃತ ತರಭೇತಿಯನ್ನು ನೀಡುವ ಜವಾಬ್ದಾರಿಯನ್ನು ಐಎಂಎ ಹೊತ್ತಿಕೊಂಡಿದ್ದು ತಿಂಗಳಲ್ಲಿ 2-3 ಬಾರಿ ಈ ಕಾರ್ಯಾಗಾರ ನಡೆಯಲಿದೆ .

Indian Medical Association Shivamogga ಸಿಪಿಆರ್ ಸಹಾಯದಿಂದ, ಒಬ್ಬ ವ್ಯಕ್ತಿಗೆ ಹೊಸ ಜೀವ ಸಿಗಬಹುದು. ಕಾರ್ಡಿಯೋ ಅರೆಸ್ಟ್ ಆದ ಮೊದಲು ಐದು ನಿಮಿಷದಲ್ಲಿ ಸಿಪಿಆರ್ ಸಿಕ್ಕಲ್ಲಿ ಬದುಕುವ ಸಾಧ್ಯತೆ 2-3 ಪಟ್ಟು ಹೆಚ್ಚಿರುತ್ತದೆ.ಕಾರ್ಡಿಯೋ ಅರೆಸ್ಟ್ ಆದ ವ್ಯಕ್ತಿಯನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಿಪಿಆರ್ ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ.

ಹಾಗಾಗಿ ತರಬೇತಿ ಪಡೆದ ವಿದ್ಯಾರ್ಥಿಗಳು ಅವಕಾಶ ಸಿಕ್ಕಾಗ ಧೈರ್ಯದಿಂದ ಈ ತುರ್ತು ಚಿಕಿತ್ಸೆ ನೀಡಬಹುದು ಎಂದು ಕಾರ್ಯದರ್ಶಿ ಡಾ . ರಕ್ಷಾ ರಾವ್ ವಿವರಿಸಿದರು.

ಐಎಂಎ ಹಿರಿಯ ಸದಸ್ಯರಾದ ಡಾ ರಜನಿ ಪೈ , ಡಾ ಭಾರತಿದೇವಿ , ಡಾ . ಎಚ್ . ಜಿ . ಭಾರತಿ ಅವರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...