Shivamogga Police ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತ್ತು ಗಣ್ಯ ವ್ಯಕ್ತಿಗಳ ಬಂದೋಬಸ್ತ್ ಸಂದರ್ಭದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಶಿವಮೊಗ್ಗ ಡಿಎಆರ್ ಘಟಕದ ಅಧಿಕಾರಿ ಮತ್ತು ಸಿಬ್ಬಂಧಿಗಳಾದ 1)ಶ್ರೀ ವೆಂಕಟೇಶ್ ಎಆರ್.ಎಸ್.ಐ, 2)ಶ್ರೀ ಚಂದ್ರು ಹೆಚ್.ಪಿ ಎಹೆಚ್.ಸಿ, 3)ಶ್ರೀ ಮಾರುತಿ ಕೆ.ಇ, ಎಹೆಚ್.ಸಿ ಮತ್ತು 4)ಶ್ರೀ ಜಗದೀಶ್ ತಿರುಕಣ್ಣನವರ್ ಎಪಿಸಿ ರವರಿಗೆ ಈ ದಿನ ದಿನಾಂಕ: 09-06-2023 ರಂದು ಬೆಳಗ್ಗೆ ಶ್ರೀ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಶಿವಮೊಗ್ಗ ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದರು.
Shivamogga Police ಈ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಬಾಲರಾಜ್ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಎ ಉಪ ವಿಭಾಗ, ಶ್ರೀ ನಿಶೀಮಪ್ಪ ಹನಕನಹಳ್ಳಿ, ಪೊಲೀಸ್ ಉಪಾಧೀಕ್ಷರು ಡಿಎಆರ್, ಶಿವಮೊಗ್ಗ, ಕು. ಬಿಂದುಮಣಿ, ಐಪಿಎಸ್ (ಪ್ರೊ), ಶ್ರೀ ಹರೀಶ್ ಪಟೇಲ್, ಪೊಲೀಸ್ ನಿರೀಕ್ಷಕರು, ಕುಂಸಿ ಪೊಲೀಸ್ ಠಾಣೆ, ಶ್ರೀ ದೀಪಕ್, ಪೊಲೀಸ್ ನಿರೀಕ್ಷಕರು, ಸಿಇಎನ್ ಪೊಲೀಸ್ ಠಾಣೆ ಶಿವಮೊಗ್ಗ, ಶ್ರೀ ಮಾದಪ್ಪ, ಪೊಲೀಸ್ ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆ, ಶ್ರೀ ಅಂಜನ್ ಕುಮಾರ್ ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ, ಶ್ರೀ ಸಂತೋಷ್ ಕುಮಾರ್, ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ, ಶ್ರೀ ಶಿವಾನಂದ ಗುಣದಾಳ್ ಆರ್.ಪಿ.ಐ ಶಿವಮೊಗ್ಗ ಡಿಎಆರ್, ಮತ್ತು ಶ್ರೀ ಸತೀಶ್ ಕುಮಾರ್ ಕೆ. ವಿ ಪೊಲೀಸ್ ನಿರೀಕ್ಷಕರು, ಜಿಲ್ಲಾ ನಿಸ್ತಂತು ಘಟಕ ಶಿವಮೊಗ್ಗ ರವರು ಉಪಸ್ಥಿತರಿದ್ದರು