Thursday, June 18, 2026
Thursday, June 18, 2026

Artist Bhadravati Guru Created Voter Awareness ಸುಂದರ ಅಕ್ಷರಗಳಲ್ಲಿ ಮತದಾರರ ಜಾಗೃತಿ ಮೂಡಿಸಿದ ಕಲಾವಿದ ಭದ್ರಾವತಿ ಗುರು

Date:

Artist Bhadravati Guru Created Voter Awareness ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಯಾವುದೇ ಧಕ್ಕೆ ಆಗದಂತೆ ಮತದಾನದ ದಿನ ಎಲ್ಲರೂ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಮತದಾನವು ಪ್ರಜಾಪ್ರಭುತ್ವದ ಒಂದು ಧ್ವನಿ. ನಮ್ಮ ನಾಯಕರನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಒಂದು ಪ್ರಕ್ರಿಯೆ. ಜನರಲ್ಲಿ ಮತದಾನದ ಕುರಿತು ಅರಿವು ಮೂಡಿಸುವಂತಹ ಕೆಲಸಗಳು ನಡೆಯುತ್ತಿವೆ.

ಜನರಲ್ಲಿ ಮತದಾನದ ಜಾಗೃತಿ ಕುರಿತು ಅನೇಕ ಅಭಿಯಾನಗಳು ನಡೆಯುತ್ತದೆ. ಅದೇ ರೀತಿ ನೂರು ಕಿಲೋಮೀಟರ್ ಮತದಾನ ಜಾಗೃತಿ ಅಭಿಯಾನದ ಬೋರ್ಡ್ ಬರವಣಿಗೆ ಶಿವಮೊಗ್ಗದ ಗ್ರಾಮೀಣ ಪ್ರದೇಶದಲ್ಲಿ ನಡೆಸಲಾಗಿದೆ.

Artist Bhadravati Guru Created Voter Awareness ನಿಮ್ಮ ಮತ ನಿಮ್ಮ ಹಕ್ಕು. ನಿಮ್ಮ ನಡೆ ಮತಗಟ್ಟೆ ಕಡೆ. ಥಿಂಕ್ ಮಾಡಿ ವೋಟ್ ಮಾಡಿ. ನಮ್ಮ ಮತ ಮಾರಾಟಕ್ಕಿಲ್ಲ ಹೀಗೆ ಅನೇಕ ಸಾಲುಗಳನ್ನು ಕಟ್ಟಡಗಳ ಮೇಲೆ ಬರೆಯಲಾಗಿದೆ. ಈ ಮೂಲಕ ಜನರಲ್ಲಿ ಮತದಾನದ ಅರಿವು ಮೂಡಿಸುವಂತಹ ಕೆಲಸ ನಡೆದಿದೆ. ಈ ಶ್ಲಾಘನೀಯ ಕೆಲಸ ಮಾಡಿರುವುದು ಭದ್ರಾವತಿಯ ಪ್ರಖ್ಯಾತ ಕಲಾವಿದ ಭದ್ರಾವತಿ ಗುರು. ಮತದಾರ ಜಾಗೃತಿಯನ್ನು ತಮ್ಮ ಸುಂದರ ಬರವಣಿಗೆಯಲ್ಲಿ ಮೂಡಿಸಿ ಕಲಾ ಮಾಧ್ಯಮವನ್ನು ಬೆಳಗಿದ ಭದ್ರಾವತಿ ಗುರು ಅವರ ಈ ಕಲವಂತಿಕೆ ಬೆಳೆಯಲಿ ಎಂದು ಆಶಿಸೋಣ…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...