Wednesday, October 2, 2024
Wednesday, October 2, 2024

BJP karnataka ಸಾಗರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಿಂದ ಮೀಟ್ ದಿ ಪ್ರೆಸ್ ಕಾರ್ಯಕ್ರಮ

Date:

BJP karnataka ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ 07 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವ ಮೂಲಕ ಹೊಸ ಭಾಷ್ಯ ಬರೆಯುತ್ತೇವೆ ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಸಾಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಸಂವಾದದಲ್ಲಿ ಪತ್ರಕರ್ತರುಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ಜಿಲ್ಲೆಯ 06 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, 06 ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಜೊತೆಗೆ ಭದ್ರಾವತಿಯಲ್ಲಿಯೂ ತ್ರಿಕೋನ ಸ್ಪರ್ಧೆಯ ಪರಿಣಾಮ ಬಿಜೆಪಿ ಗೆಲ್ಲುವ ಮೂಲಕ ಜಿಲ್ಲೆಯ 07 ಸ್ಥಾನಗಳಲ್ಲಿಯೂ ಬಿಜೆಪಿ ವಿಜಯದ ಪತಾಕೆಯನ್ನು ಹಾರಿಸುತ್ತದೆ ಎಂದರು.

ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕಿಂತ ಹೈಕಮಾಂಡಿನ ಹೇರಿಕೆಯ ಕುರಿತು ಆರೋಪಗಳು ಕೇಳಿಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇದೊಂದು ತಪ್ಪು ತಿಳುವಳಿಕೆಯಾಗಿದೆ. ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿಯೇ ಗುಪ್ತ ಮತದಾನ ನಡೆಸಲಾಗಿದೆ. ಹೆಚ್ಚು ಮತಗಳ ಲಭ್ಯತೆಯ ಆಧಾರದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ವಿಧಾನಸಭೆ ಚುನಾವಣೆಗೆ ಟಿಕೇಟ್ ನೀಡಿರುವ ಮಾದರಿ ನಿಜವಾದ ಪ್ರಜಾಪ್ರಭುತ್ವಕ್ಕೆ ಬಿಜೆಪಿಯಿಂದ ಸಂದ ಗೌರವ ಎಂದು ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಕುರಿತು ವಿವರಿಸಿದರು.

ಆಡಳಿತದ ವಿರೋಧಿ ಅಲೆ ಮತ್ತು ಜನಪರ ಯೋಜನೆಗಳ ತುಲನೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಪಡೆಯಲು ಸಾಧ್ಯವೇ?ಎಂಬ ಪ್ರಶ್ನೆಗೆ ಆಡಳಿತದ ವಿರೋಧಿ ಅಲೆ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ,ಬಿಜೆಪಿಗೆ ಆಡಳಿತದ ಪರವಾದ ಅಲೆಯಿದೆ.

ಅಬಿವೃದ್ಧಿಯ ಹಾಗೂ ಜನಪರ ಯೊಜನೆಗಳ ಅಲೆಯಿದೆ.ಕೊರೋನಾ ಕಾಲದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನಪರ ಜೀವಪರ ಆಡಳಿತದಿಂದ ಔಷಧಿ,ಆಹಾರ,ಮಾಸ್ಕ್ ಸೇರಿದಂತೆ ಸಮರೋಪಾದಿಯಲ್ಲಿ ಸ್ಪಂದಿಸಿ ಕೊರೋನಾ ನಿರ್ವಹಣೆ ಮೂಲಕ ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

BJP karnataka ಆದಾಯವೇ ಇಲ್ಲದ ಕೊರೋನಾ ಕಾಲದಲ್ಲಿ ಇರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಯೂ ದೇಶದಲ್ಲಿ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಂಡಿರುವ ದೇಶ ಪ್ರಧಾನಿ ನರೇಂದ್ರಮೋದಿಯವರ ಸಮರ್ಥ ಆಢಳಿತವನ್ನು ಹೊಂದಿರುವ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದ್ದರಿಂದ ಬಿಜೆಪಿ ಆಡಳಿತದ ಪರವಾದ ಅಲೆ ಚುನಾವಣೆಯಲ್ಲಿ ಬೀಸತೊಡಗಿದೆ ಎಂದರು.

ರಾಜಕೀಯ ಪಕ್ಷದಲ್ಲಿ ನಿಯಮಗಳಿರುತ್ತವೆ.ಅಂತಹ ನಿಯಮಗಳಿಗೆ ಬದ್ದರಾಗಿ ದೇಶಕ್ಕೆ ಮಾದರಿಯಾದ ನಿಲುವು ಪ್ರಕಟಿಸುವ ಮೂಲಕ ರಾಷ್ಟ್ರೀಯ ನಾಯಕರ ಮೆಚ್ಚುಗೆಗೆ ಪಾತ್ರವಾಗಿರುವ ಪಕ್ಷ ನಿಷ್ಠೆಯ ಜೊತೆಗೆ ನಮಗೆಲ್ಲ ಮಾದರಿ ಆದರ್ಶ ವ್ಯಕ್ತಿ ಶಿವಮೊಗ್ಗದ ಹಿರಿಯ ಮುತ್ಸದ್ದಿ ಕೆ.ಎಸ್.ಈಶ್ವರಪ್ಪನವರು. ಅವರು ಚುನಾವಣೆಗೆ ನಿಲ್ಲಬೇಕು ಎಂಬುದು ನಮ್ಮೆಲ್ಲರ ಆಶಯವಾಗಿತ್ತು.

ಅವರು ಸ್ಪರ್ಧಿಸಿದ್ದರೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಶಕ್ತಿಯಿತ್ತು.ಅಂತಹ ಧೀಮಂತ ನಾಯಕ ಈಶ್ವರಪ್ಪನವರು ರಾಜಕೀಯ ವ್ಯಕ್ತಿಗಳಿಗೆ ಮೇಲ್ಪಂಕ್ತಿ ಹಾಕಿದ್ದಾರೆ ಎಂದು ಮೇಘರಾಜ್ ಮೆಚ್ಚುಗೆಯ ಮಾತುಗಳನ್ನಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಭದ್ರಾವತಿಯ ಜೀವಾಳ ವಿ.ಎಸ್.ಐ.ಎಲ್ ಕಾರ್ಖಾನೆ ಮುಚ್ಚುವ ಅಂತಿಮ ಹಂತದಲ್ಲಿದ್ದಾಗ ಲೋಕಸಭಾ ಸದಸ್ಯರುಗಳಾದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಗಮನಸೆಳೆಯುವ ಮೂಲಕ ಭದ್ರಾವತಿಯ ಕಾರ್ಖಾನೆಯನ್ನು ಪುನಶ್ಚೇತನಕ್ಕೆ ಅವಕಾಶ ಕಲ್ಪಿಸಿಸದ್ದಾರೆ. ದೇಶದ ದೊಡ್ಡ ಸೇತುವೆಗಳ ಸಾಲಿನಲ್ಲಿ ನಿಲ್ಲುವ ತುಮರಿ ಸೇತುವೆ ಕಾಮಗಾರಿ ಚುರುಕಿನಿಂದ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಪ್ರಗತಿಯಲ್ಲಿದೆ ಎಂದರು.

ವಿಮಾನ ನಿಲ್ದಾಣ ಲೋಕರ್ಪಣೆಗೊಂಡಿದ್ದು,ಕೈಗಾರಿಕೆಗಳು ಶಿವಮೊಗ್ಗದತ್ತ ದೃಷ್ಟಿ ಹರಿಸಲು ಸುವರ್ಣಾವಕಾಶ ಕಲ್ಪಿಸಿರುವುದು ಬಿಜೆಪಿಯ ಸಾಧನೆಯಲ್ಲವೇ?ಶಿವಮೊಗ್ಗ ಗ್ರಾಮಾಂತರದಲ್ಲಿ ಮತ್ತು ಶಿಕಾರಿಪುರದಲ್ಲಿ ಏತ ನೀರಾವರಿ ಯೋಜನೆಯ ಮೂಲಕ ನಾಲೆಗಳ ನಿರ್ಮಿಸಿ ನೀರು ಹರಿಸಿರುವುದು ಬಿಜೆಪಿ ಸಾಧನೆಯಾಗಿದೆ.

ಪ್ರವಾಸಿ ತಾಣಗಳಾಗಿರುವ ಗುಡವಿ,ಅಕ್ಕಮಹಾದೇವಿ ಜನ್ಮಸ್ಥಳ,ಕೆಳದಿ-ಇಕ್ಕೇರಿ ಹಾಗೂ ಜೋಗ ಮತ್ತು ಸಿಗಂಧೂರು,ವರದಹಳ್ಳಿ ಸೇರಿದಂತೆ ಪ್ರವಾಸಿ ತಾಣಗಳಿಗೆ ಸಂಪರ್ಕ ರಸ್ತೆಗಳ ಅಭಿವೃದ್ಧಿಗಳು ಬಿಜೆಪಿ ಪಕ್ಷದ ಸಾಧನೆಯ ಸಾಲಿನಲ್ಲಿ ನಿಲ್ಲುತ್ತವೆ.ಕರ್ನಾಟಕದ ಇತಿಹಾಸದಲ್ಲಿ ಹೊಸ ರೈಲ್ವೇ ಮರ್ಗ ರಾಣೆಬೆನ್ನೂರಿನಿಂದ ಶಿಕಾರಿಪುರದ ಸಂಪರ್ಕದ ಯೋಜನೆ ಐತಿಹಾಸಿಕವಾಗಿದೆ. ಆದ್ದರಿಂದ ಬಿಜೆಪಿ ಪಕ್ಷಕ್ಕೆ ಇಂತಹ ಜಿಲ್ಲೆಯ ಸಮಗ್ರ ಅಬಿವೃದ್ಧಿ ಕಾರ್ಯಗಳೇ ಶ್ರಿರಕ್ಷೆಯಾಗಿವೆ ಎಂದರು.
ಬಿಜೆಪಿಗೆ ಲಿಂಗಾಯಿತ ಮತ್ತು ಬ್ರಾಹ್ಮಣ ವಿರೋಧಿ ಆರೋಪಗಳು ಕೇಳಿಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಘರಾಜ್ ಅಂತಹ ಯಾವ ಆರೊಪಗಳು ಇಲ್ಲ.ವಿರೋಧಿಗಳ ಸೃಷ್ಟಿಯಾಗಿದೆ. ಧನಾತ್ಮಕ ಚಿಂತನೆಯಿಲ್ಲದವರು ವಿಪಕ್ಷದವರು ಜಾತಿ-ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತಿ ವಿರೋಧಿ ಅಲೆ ಸೃಷ್ಟಿಸುವ ಷಡ್ಯಂತ್ರವನ್ನು ಹೆಣೆಯುತ್ತಾರೆ. ಆದರೇ ಬಿಜೆಪಿ ಅಭಿವೃದ್ಧಿ-ಸುಧಾರಣೆ-ಪ್ರಗತಿಯ ಅಜೆಂಡದಿಂದ ಮತದಾರರ ಮನಸ್ಸನ್ನು ಗೆಲ್ಲುತ್ತದೆ ಎಂದರು.

ಬಿಜೆಪಿ ಸರ್ಕಾರ ಮಾಡಿದ ಮೀಸಲಾತಿ ವರ್ಗೀಕರಣದ ವಿರುದ್ಧ ಹಿಂದುಳಿದ ವರ್ಗಗಳ ಅಸಮಾಧಾನ ಬಿಜೆಪಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೇ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಘರಾಜ್ ಮೀಸಲಾತಿ ವರ್ಗೀಕರಣ ಬಿಜೆಪಿ ಸರ್ಕಾರದ ಐತಿಹಾಸಿಕ ನಿರ್ಣಯ ಮಾಡಿದೆ. ಸದಾಶಿವ ಆಯೋಗದ ವರದಿಯಲ್ಲಿ ಬಂಜಾರ,ಭೋವಿ,ಕೊರಮ-ಕೊರಚ ಸಮುದಾಯಗಳಿಗೆ ಮೀಸಲಾತಿಯಿರಲಿಲ್ಲ.ಅಂತಹ ನೀತಿಯನ್ನು ಬದಲಾಯಿಸಿ ಬಂಜಾರ,ಭೋವಿ,ಕೊರಮ-ಕೊರಚ ಸಮುದಾಯಗಳಿಗೆ ಮೀಸಲಾತಿಯ ಲಾಭ ದೊರೆಯುವಂತೆ ಮಾಡಿರುವುದನ್ನು ಹಂತ ಹಂತವಾಗಿ ಅರ್ಥ ಮಾಡಿಕೊಂಡು ಬಿಜೆಪಿ ನಿರ್ಣಯವನ್ನು ಬೆಂಬಲಿಸುತ್ತಿವೆ ಎಂದರು.

ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವಂತಿಲ್ಲ.ಅಂತಹ 5.5% ಮೀಸಲಾತಿಯನ್ನು ಕೊರತೆ ಇರುವ ಸಮುದಾಯಗಳಿಗೆ ವರ್ಗೀಕರಿಸಲಾಗಿದೆ ಎಮದು ಮೀಸಲಾತಿಯ ಕುರಿತು ಬಿಜೆಪಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಎಲ್ಲಾ ಸಮುದಾಯಗಳ ಹಿತ ಬಯಸುವ ಬಿಜೆಪಿ ಸರ್ಕಾರವನ್ನು ಮತ್ತೊಮೆ ರಾಜ್ಯದ ಮತದಾರರು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಪ್ರಮುಖ ಅಜೆಂಡಾ ಹಿಂದುತ್ವಾನಾ..? ಅಬಿವೃದ್ದಿನಾ..?ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಘರಾಜ್ ಹಿಂದುತ್ವ ಜೀವನ ಕ್ರಮ,ಆದ್ದರಿಂದ ಬಿಜೆಪಿ ರಾಷ್ಟ್ರೀಯತೆ,ದೇಶದ ಏಕತೆ, ಅಖಂಡತೆಗಳ ನಡುವೆ ಭದ್ರತೆ ಜೊತೆಗೆ ಅಭಿವೃದ್ದಿಯ ಅಜೆಂಡಗಲ ಮೂಲಕ ರಾಜ್ಯದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.

ಸಾಗರದಲ್ಲಿ ಬಿಜೆಪಿ ಶಾಸಕ ಹಾಲಪ್ಪನವರು 20 ಸಾವಿರ ಮತಗಳ ಅಂತರದಿಂದ ಜಯಗಳಿಸುತ್ತಾರೆ ಎಂದ ಅವರು ಸಾಗರದಲ್ಲಿ ಅಬಿವೃದ್ಧಿಯ ಮಹಾಪೂರವೇ ಹರಿದಿದೆ. ಕ್ಷೇತ್ರದಲ್ಲಿ 888 ರಸ್ತೆಗಳ ಅಬಿವೃದ್ದಿಯಾಗಿವೆ. ಚತುಷ್ಪಥ ರಸ್ತೆಗಳು ಮತ್ತು ದ್ವಪಥ ರಸ್ತೆಗಳ ಅಬಿವೃದ್ಧಿ ಕಾರ್ಯಗಳು ನಡೆದಿವೆ.ಸಾಗರಕ್ಕೆ ಸೇರುವ ಎಲ್ಲಾ ಸಂಪರ್ಕ ರಸ್ತೆಗಳು ಅಭಿವೃದ್ಧಿಯಗಿವೆ. ಸಾಗರವನ್ನು ಆರೋಗ್ಯ ಸಾಗರವನ್ನಾಗಿ ಆಸ್ಪತ್ರೆಗಳ ಸುಧಾರಣೆ,ವಿದ್ಯಾಸಾಗರದ ಪ್ರಯುಕ್ತ ಕಾಲೇಜುಗಳ ಕಟ್ಟಡಗಳ ಸಹಿತ ಮೂಲಭೂತ ಸೌಲಭ್ಯಗಳ ಸುಧಾರಣೆ,ಪ್ರವಾಸಿ ಸಾಗರವನ್ನಾಗಿಸಲು ಜೋಗ ಸೇರಿದಂತೆ ಸಮಗ್ರ ಅಬಿವೃದ್ಧಿಗೆ ಆರಂಭ ಮಾಡಿರುವ ಕಾರಣ ಅಬಿವೃದ್ಧಿಯೇ ಬಿಜೆಪಿಯನ್ನು ಆಕಷಿಸುತ್ತಿದೆ ಎಂದರು.

ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎ.ಡಿ.ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ವಿ.ಹಿತಕರ ಜೈನ್,ಬಿಜೆಪಿ ಮಾದ್ಯಮ ಪ್ರಮುಖ್ ಹು.ಬಾ.ಅಶೋಕ್ ಉಪಸ್ಥಿತರಿದ್ದು, ಪತ್ರಕರ್ತ ಧರ್ಮರಾಜ್ ಸ್ವಾಗತಿಸಿ,ಪತ್ರಕರ್ತರ ಸಂಘದ ಖಜಾಂಚಿ ರಮೇಶ್ ಎನ್ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...