Wednesday, December 17, 2025
Wednesday, December 17, 2025

BJP Karnataka ಬಂಜಾರ ಮತ್ತು ಬೋವಿ ಬಗ್ಗೆ ಸಲ್ಲದ ಹೇಳಿಕೆ ಖಂಡನೆ

Date:

BJP Karnataka ಇತ್ತೀಚೆಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ. ಅಶೋಕ ನಾಯ್ಕ ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಂಜಾರ ಹಾಗೂ ಭೋವಿ ಸಮಾಜದವರು ಅಪ್ರಬುದ್ಧರು ಎಂದು ಹೇಳಿಕೆ ನೀಡುವ ಮೂಲಕ ಈ ಸಮಾಜಗಳನ್ನು ಅಪಮಾನಿಸಿರುವುದಕ್ಕೆ ಭೋವಿ ಸಮಾಜದ ಮುಖಂಡ ಎಸ್. ಗಿರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆ.ಬಿ. ಅಶೋಕ ನಾಯ್ಕ ಭೋವಿ ಮತ್ತು ಲಂಬಾಣಿ (ಬಂಜಾರ) ಸಮುದಾಯಗಳ ಮತ ಪಡೆದು, ಮೀಸಲಾತಿ ಕ್ಷೇತ್ರದಿಂದಲೇ ಆಯ್ಕೆಯಾಗಿದ್ದು, ಈಗ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಉಂಡ ಮನೆಗೆ ದ್ರೋಹ ಬಗೆಯುವಂತೆ ಮನಸ್ಸಿಗೆಬಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಅಕ್ಷಮ್ಯ ಎಂದಿದ್ದಾರೆ.

BJP Karnataka ಸಂವಿಧಾನ ಮೀಸಲಾತಿಗೆ ಅವಕಾಶ ನೀಡಿರದಿದ್ದರೆ ಕೆ.ಬಿ. ಅಶೋಕನಾಯ್ಕ ಶಾಸಕನಾಗುವುದು ಅಸಾಧ್ಯವಾಗಿತ್ತು. ನಮ್ಮ ಸಮುದಾಯಗಳಿಗೆ ಅನ್ಯಾಯವಾದಾಗ ಅನ್ಯಾಯಕ್ಕೊಳಗಾದವರ ಬೆಂಬಲಕ್ಕೆ ನಿಲ್ಲಬೇಕಿತ್ತು. ಆದರೆ, ಹಾಗೆ ಮಾಡದ ಶಾಸಕ ಭೋವಿ ಮತ್ತು ಲಂಬಾಣಿ ಸಮುದಾಯಗಳನ್ನು ಅಪಮಾನಿಸಿದ್ದಾರೆ ಎಂದಿದ್ದಾರೆ.

ಭೋವಿ ಕಾಲೋನಿಗಳಲ್ಲಿ ಹಾಗೂ ಬಂಜಾರ ತಾಂಡಾಗಳಲ್ಲಿ ಅಶೋಕನಾಯ್ಕ ಮತಯಾಚನೆಗೆ ಬಂದಾಗ ಯಾರೂ ತಾಂಡಾ-ಕಾಲೋನಿಗಳಿಗೆ ಪ್ರವೇಶ ನೀಡಬಾರದು. ಬಿಜೆಪಿ ಅಭ್ಯರ್ಥಿಯಾದ ಇವರನ್ನು ಚುನಾವಣೆಯಲ್ಲಿ ತಿರಸ್ಕರಿಸಬೇಕು ಎಂದು ಎಸ್.ಗಿರೀಶ್ ಕರೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 18. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ,...

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...