Wednesday, February 26, 2025
Wednesday, February 26, 2025

ಇಳಿಕೆಯಾಗದ ತರಕಾರಿ ಬೆಲೆ. ಗ್ರಾಹಕರ ಪರದಾಟ.

Date:

ಇಂಧನದ ದರ ಇಳಿಮುಖ ವಾಗುತ್ತಿದ್ದಂತೆ, ತರಕಾರಿ ಬೆಲೆ ಕೂಡ ಕಡಿಮೆಯಾಗಬಹುದು ಎಂದುಕೊಂಡಿದ್ದ ಗ್ರಾಹಕರಿಗೆ ನಿರಾಸೆ ಎದುರಾಗಿದೆ.

ಈ ಬಾರಿಯ ವರುಣನ ಆರ್ಭಟದಿಂದ ರೈತರ ಹೊಲದಲ್ಲಿರುವ ಬೆಳೆ ನಾಶವಾಗಿದೆ. ಅಲ್ಲದೆ, ತಾವು ಬೆಳೆದ ಎಲ್ಲಾ ತರಕಾರಿ, ಇತರೆ ಬೆಳೆಗಳು ನೀರುಪಾಲಾಗಿದೆ. ರೈತರು ಹೊಲದಲ್ಲಿ ಅಳಿದುಳಿದ ತರಕಾರಿಗಳನ್ನು ಮಾರುಕಟ್ಟೆಗೆ ತಂದರೂ ಸಹ , ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆದರೆ, ಅದೇ ತರಕಾರಿ ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರಿ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದ ಕಷ್ಟಪಟ್ಟು ಬೆಳೆ ಬೆಳೆದ ರೈತರು ಹಾಗೂ ತರಕಾರಿ ಕೊಳ್ಳುವ ಗ್ರಾಹಕರಿಗೆ ಪ್ರಯೋಜನವಾಗುತ್ತಿಲ್ಲ.

‘ಕಳೆದ 15ದಿನಗಳಿಂದ ತರಕಾರಿ ದರ ಏರಿಕೆಯಾಗುತ್ತಲೇ ಇದೆ. ಗುಣಮಟ್ಟದಲ್ಲೂ ಕೊರತೆ ಇದೆ. ಹೀಗಾಗಿ, 1ಕೆಜಿ ಖರೀದಿಸುವ ಗ್ರಾಹಕರು ಅರ್ಧ ಕೆಜಿ ಕಾಲು ಕೆಜಿ ಖರೀದಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಟೊಮೋಟೊ ಕೆಜಿಗೆ 80 ರೂ. ಇತ್ತು. ಆದರೆ ಈಗ 65 ರೂಪಾಯಿಗಳಿಗೆ ಇಳಿದಿದೆ ಎಂದು ಶಿವಮೊಗ್ಗ ಪ್ರಮುಖ ತರಕಾರಿ ಮಾರಾಟಗಾರರು ತಿಳಿಸಿದ್ದಾರೆ.

ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಜೀವನ ಕಷ್ಟವಾಗಿದೆ. ತರಕಾರಿ ಬೆಲೆ ಗಗನಕ್ಕೇರಿರುವುದರಿಂದ ಜನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ತರಕಾರಿ ಸ್ಟಾಲ್, ಅಂಗಡಿಗಳಲ್ಲಿ ಮುಂಚಿನಂತೆ ತಾಜಾ ತರಕಾರಿಗಳು ದೊರೆಯುತ್ತಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Hemant CEO ವಿದ್ಯಾರ್ಥಿಗಳೇ ಪರೀಕ್ಷೆಯನ್ನು ಪರಿ ಶ್ರಮದೊಂದಿಗೆ ಎದುರಿಸು.ಕಾಪಿ ಮಾಡಬೇಡಿ- ಎನ್.ಹೇಮಂತ್

Hemant CEO ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ...

Lok Adalat ಮಾರ್ಚ್ 8. ಜಿಲ್ಲೆಯಲ್ಲಿನ ಲೋಕ ಅದಾಲತ್ ಬಗ್ಗೆ ‌ಪೂರ್ವಭಾವಿ ಸಭೆ

Lok Adalat ಮಾರ್ಚ್ 08ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆಸಲು ಉದ್ದೇಶಿಸಿರುವ...

Rangayana shimoga ವರ್ತಮಾನದ ತಲ್ಲಣಗಳನ್ನ ಕಟ್ಟಿಕೊಡುವ ನಾಟಕ”ಮೈ ಫ್ಯಾಮಿಲಿ” -ಡಾ.ಮೈತ್ರೇಯಿ ಆದಿತ್ಯ ಪ್ರಸಾದ್.

Rangayana shimoga ಇಂತಹದೊಂದು ನಾಟಕ ನಮ್ಮ ಮಕ್ಕಳಿಂದ ಒಡಗೂಡಿ ಪೋಷಕರವರೆಗೂ ಈಗಿನ...