Sunday, August 23, 2026
Sunday, August 23, 2026

Bhagirath Jayanti ಭಗೀರಥ ಮಹಾನ್ ತಪಸ್ವಿ

Date:

Bhagirath Jayanti ರಾಜ್ಯ ಭಗೀರಥ ಜಯಂತಿ ಉಪ್ಪಾರ ಸಮಾಜದ ಕುಲ ಗುರುಗಳು, ಮೂಲ ತಪಸ್ವಿ ಋಷಿಗಳಾದಂತಹ ಶ್ರೀ ಶ್ರೀ ಭಗೀರಥ ಮಹರ್ಷಿಗಳ ಜಯಂತಿಯನ್ನು ಶಿವಮೊಗ್ಗ ಜಿಲ್ಲಾ ಉಪ್ಪಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯಿಂದ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಅವರು ಮಾತನಾಡಿ, ನಿರಂತರ ತಪಸ್ಸಿನಿಂದ ದೇವಗಂಗೆ ಭೂಮಿಗಿಳಿಸಿದ ಮಹಾನ್ ತಪಸ್ವಿ ಭಗೀರಥ ವಂಶಸ್ಥರು. ಪುಣ್ಯಾತ್ಮರು ಇಂದೂ ಕೂಡ ಉಪ್ಪಾರ ಸಮಾಜದವರು ಬಹಳ ಸ್ವಾಭಿಮಾನಿಗಳಾಗಿ ಬದುಕುತ್ತಿದ್ದು, ನಿಜವಾದ ಶ್ರಮಿಕರು. ಅವರ ಸೇವೆ ಸ್ಮರಣೀಯವಾದದ್ದು ಈಶ್ವರನ ಪತ್ನಿಯಾದ ದೇವಗಂಗೆಯನ್ನೇ ಭೂಮಿಗೆ ಇಳಿದಂತಹ ಮಹಾನ್ ತಪಸ್ವಿಯ ಜನ್ಮ ಭೂಮಿಯಲ್ಲಿ ನಾವು ಹುಟ್ಟಿ ಪುನೀತರಾಗಿದ್ದೇವೆ. ಈ ಪುಣ್ಯ ಮಹಾಪುರುಷರ ಪುಣ್ಯಾದ ದಿನ. ಭಗಿರಥ ಜಯಂತಿಯ ದಿನಾಚರಣೆಯನ್ನು ಸರ್ಕಾರಿ ಎಲ್ಲಾ ಕಚೇರಿಗಳನ್ನು ಕೂಡ ಆಚರಿಸುವ ಭಾಗ್ಯವನ್ನು ತಂದುಕೊಟ್ಟದ್ದು ಸನ್ಮಾನ್ಯ ಶ್ರೀ ಮಾಜಿ ಮುಖ್ಯಮಂತ್ರಿಗಳಂತ ಸಿದ್ದರಾಮಯ್ಯನವರು ಅವರಿಗೆ ಧನ್ಯವಾದಗಳು ಹೇಳಿದರು.

Bhagirath Jayanti ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಿಗೆ ಸೇರಿ ಮಹಾಪುರುಷನ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುವ ದಿನಗಳು ಬಹಳ ಉಳಿದಿಲ್ಲ ಎಂದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಉಪ್ಪರ ಸಂಘದ ಅಧ್ಯಕ್ಷರಾದ.ಎಸ್ . ಟಿ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಕೆ.. ದೇವೇಂದ್ರಪ್ಪ, ಖಜಾಂಚಿ ಕಂಕರಿ ನಾಗರಾಜ್ ,ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಂಎಸ್ ಶಿವಕುಮಾರ್, ರಾಘವೇಂದ್ರ ಆರ್, ಉಪ್ಪಾರ ಸಮಾಜ ಮುಖಂಡರಾದ ಪ್ರಸನ್ನ ಕುಮಾರ್.,ಮುರಳಿ ಸಣ್ಣಕ್ಕಿ, ಎಸ್ ಕೆ ಭಾಸ್ಕರ್.. ಹಾಗೂ ಜನಪರ ನಾಯಕ ವೈ. ಹೆಚ್. ನಾಗರಾಜ್ ಅವರು ಶಿವಮೊಗ್ಗ ಜಿಲ್ಲಾಧ್ಯಕ್ಷರು ಎನ್. ಮಾಲತೇಶ್ ಕರ್ನಾಟಕ ರಾಜ್ಯ ಪತ್ರಿಕ ವಿಕಾರ ಒಕ್ಕೂಟ ಹಾಗೂ ಉಪ್ಪಾರ್ ಅಣ್ಣಪ್ಪ ಭಾಗವಹಿಸಿದ್ದರು. ಶಿವಮೊಗ್ಗ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಉಮೇಶ್ ರವರು ಸರ್ವರನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...