Saturday, December 6, 2025
Saturday, December 6, 2025

Putrajakavi Gawai ಶಿವಮೊಗ್ಗದಲ್ಲಿ ಏಪ್ರಿಲ್ 20 ರಂದು ಎಂಭತ್ತೇಳನೆ ಅಮಾವಾಸ್ಯೆ ಸಂಗೀತ ಸಂಜೆ

Date:

Putrajakavi Gawai ಸಾಗರ ರಸ್ತೆಯ ಡಾ. ಪಂಡಿತ ಪುಟ್ಟರಾಜಕವಿ ಗವಾಯಿಗಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮ ಉಚಿತ ಸಂಸ್ಕೃತ ಪಾಠಶಾಲೆಯಲ್ಲಿ ಏ. 20ರ ಸಂಜೆ 6:30ಕ್ಕೆ ಗಾನಲಹರಿ ಎಂಭತ್ತೇಳನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ಪಂ. ಆರ್.ಬಿ. ಸಂಗಮೇಶ್ವರ ಗವಾಯಿ ಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಹರೀಶ್ ಪರಮೇಶ್ವರ ಹೆಗಡೆ ಮತ್ತು ಆಶ್ರಮದ ಅಂಧ ಮಕ್ಕಳಿಂದ ಸಂಗೀತ ಸಂಯೋಜಿತ ಪ್ರಾರ್ಥನೆ ನಡೆಯಲಿದೆ. ಸಂಗೀತ ಮಹಾ ಪೋಷಕ ಸುರೇಶ್ ಅರಸಾಳು ಅತಿಥಿಗಳಾಗಿ ಆಗಮಿಸಲಿದ್ದಾರೆ.

Putrajakavi Gawai ವಿನೋಬನಗರ ಭಕ್ತಿ ಸಂಗಮ ಕಲಾವೃಂದದಿಂದ ಭಜನಾ ಸೇವೆ ಮತ್ತು ಜಯಶ್ರೀ ಶ್ರೀಧರ್ ಅವರಿಂದ ಭಕ್ತಿ ಸಂಗೀತ ಸೇವೆ ನಡೆಯಲಿದೆ. ಬಳ್ಳಾರಿಯ ಶರಣ್ ಕುಮಾರ್ ಕೊತ್ತಲಜಿಂತ ಅವರಿಂದ ಅತಿಥಿ ಗಾಯನ ನಡೆಯಲಿದೆ. ರಾಮಣ್ಣ ಭಜಂತ್ರಿ, ವೀರಭದ್ರಯ್ಯ ಶಾಸಿ, ಆರ್. ತುಕಾರಾಮ್ ರಂಗಧೋಳ್, ವಿನಾಯಕ ಭಟ್ ಶಿವರಾಜಪ್ಪ, ಸಿದ್ದಣ್ಣ ಬಡಿಗೇರ್, ವೀರಣ್ಣ ಮಾಳೇನಹಳ್ಳಿ ಅವರು ವಿವಿಧ ವಾದ್ಯಗಳೊಂದಿಗೆ ಸಾಥ್ ನೀಡಲಿದ್ದಾರೆ. ಉಸ್ತಾದ್ ಹುಮಾಯೂನ್ ಹರ್ಲಾಪುರ್ ನಿರೂಪಿಸಲಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...