ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಗೆ ಐಸಿಸಿ ಕಾಶ್ಮೀರ ಉಗ್ರ ಸಂಘಟನೆಯಿಂದ ಕೊಲೆ ಬೆದರಿಕೆ ಬಂದಿದೆ.
ರಾತ್ರಿಯ ವೇಳೆ ಅಧಿಕೃತ ಇಮೇಲ್ ಗೆ ಜೀವ ಬೆದರಿಕೆ ಮೇಲ್ ಬಂದಿದೆ. ” ನಿಮ್ಮನ್ನು ಮತ್ತು ಕುಟುಂಬಸ್ಥರನ್ನು ಕೊಂದು ಹಾಕುತ್ತೇವೆ” ಎಂದು ಐಸಿಸ್ ಸಂಘಟನೆಯ ಹೆಸರಿನಲ್ಲಿ ಬೆದರಿಕೆ ಬಂದಿದೆ.
ದೆಹಲಿಯಲ್ಲಿನ ಗಂಭೀರ್ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ. ಪೊಲೀಸ್ ಸಿಬ್ಬಂದಿ ವರ್ಗದವರು ಮೇಲ್ ಕಳುಹಿಸುವವರು ನಿಖರ ಸ್ಥಳದ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದ್ದಾರೆ. ಇದಕ್ಕಾಗಿ ಗೂಗಲ್ ಕಂಪನಿಯಲ್ಲಿ ಗೆ ಸಂಪರ್ಕವನ್ನು ಸಾಧಿಸಿದ್ದಾರೆ.
ಗಂಭೀರ ಅವರ ಖಾಸಗಿ ಕಾರ್ಯದರ್ಶಿ ಗೌರವ್ ಅರೋರ. ಇವರು ಡಿಸಿಪಿ ಶ್ವೇತಾ ಚೌಹಾಣ್ ಅವರನ್ನು ಭೇಟಿ ಮಾಡಿ ಬೆದರಿಕೆ ಸಂಬಂಧ ದೂರು ನೀಡಿದ್ದಾರೆ. ಸೈಬರ್ ಸೆಲ್ ನಲ್ಲಿ ಎಫ್ಐಆರ್ ದಾಖಲಿಸಿ ಕೊಂಡು ತನಿಖೆ ನಡೆಸಲಾಗುತ್ತಿದೆ.