Saturday, December 6, 2025
Saturday, December 6, 2025

Ugadi Festival ಶೋಭಾಯಮಾನವಾಗಲಿ ಬದುಕು

Date:

Ugadi Festival  ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ…


ಯುಗಾದಿ ಹಬ್ಬ ಬಂತು ಅಂದ್ರೆ, ಏನೋ,ಖುಷಿ…
ನಮಗೆ ಯುಗಾದಿ ಹಬ್ಬ ಅಂತ ಬಂದಾಗ ಮೊದಲು ನೆನಪಾಗುವುದು, ಬೇವು – ಬೆಲ್ಲ , ಜೊತೆಗೆ ಒಬ್ಬಟ್ಟಿನ ಊಟ.

ಚಂದ ಚಂದ ಬಟ್ಟೆಗಳನ್ನ ತೊಟ್ಟುಕೊಂಡು, ದೇವರ ಪೂಜೆಯನ್ನು ಮಾಡಿ ಬೇವು ಬೆಲ್ಲವನ್ನು ಸಮಾನವಾಗಿ ಸ್ವೀಕರಿಸುತ್ತೇವೆ. ನಂತರದಲ್ಲಿ ಮನೆ ಮಂದಿ ಎಲ್ಲಾ ಕುಳಿತು ಒಬ್ಬಟ್ಟಿನ ಊಟ ಮಾಡೋದ್ರಲ್ಲಿ ಇರೋ ಮಜಾನೇ ಬೇರೆ ಅಲ್ವಾ…!


ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ಯುಗಾದಿ ಹಬ್ಬ ವನ್ನು ಹೊಸ ವರ್ಷ ಅರ್ಥಾತ್ ಹೊಸ ಸಂವತ್ಸರದ ಆರಂಭ ಎಂದು ಸಂಭ್ರಮದಿಂದ ಆಚರಿಸುತ್ತೇವೆ. ಈ ದಿನ ವರ್ಷದ ಮೊದಲ ದಿನ. ಶೋಭಕೃತ ನಾಮ ಸಂವತ್ಸರ ಇಂದಿನಿಂದ ಆರಂಭಗೊಳ್ಳುತ್ತದೆ. ಬೇವು-ಬೆಲ್ಲವನ್ನ ಸಮಾನವಾಗಿ ಸ್ವೀಕರಿಸುತ್ತೇವೆ. ಯಾಕೆ ಬೇವುಬೆಲ್ಲವನ್ನ ಸಮಾನವಾಗಿ ಸ್ವೀಕರಿಸುತ್ತೇವೆ ಎಂದರೆ…?

ನಮ್ಮ ಜೀವನದಲ್ಲಿ ಕಷ್ಟ- ಸುಖ ಎರಡು ಸಮಾನವಾಗಿ ಬರಲಿ ಎಂಬ ಸಂಕೇತವನ್ನು ಬೇವು ಬೆಲ್ಲ ಸೂಚಿಸುತ್ತದೆ.


ಯುಗಾದಿ ಎಂಬುದು ಹೊಸತನದ ಸಂಕೇತ. ಗಿಡ ಮರಗಳಲ್ಲಿ ಒಣಗಿರುವ ಎಲೆಗಳು ಉದುರಿ, ಹೊಸ ಚಿಗುರಿನ ಆಗಮನದ ಸಂದರ್ಭ. ಈ ಸಂದರ್ಭದಲ್ಲಿ ಪ್ರಕೃತಿಯನ್ನು ನೋಡಿದರೆ ಪ್ರಕೃತಿ ಮಾತೆ ತನ್ನ ಹಸಿರು ಸೆರಗನ್ನ ಊರು ತುಂಬಾ ಹಾಸು ಹೊಂದಿದ್ದಾಳೆ ಎಂದೆನಿಸುತ್ತದೆ ಅಲ್ಲವೇ…!

 

Ugadi Festival  ದ .ರಾ ಬೇಂದ್ರೆ ಅವರು ಹೇಳಿರುವ ಹಾಗೆ,
ಯುಗ ಯುಗಾದಿ ಕಳೆದರು, ಯುಗಾದಿ ಮರಳಿ ಬರುತಿದೆ…
ಹೊಸ ವರುಷವ ಹೊಸ ಹರುಷವ ತರುತಿದೆ…
ಆಹಾ…! ಎಂಥ ಅದ್ಭುತ ಸಾಲುಗಳು ಅಲ್ಲವೇ… ಈ ಸಾಲುಗಳು ಎಂದೆಂದಿಗೂ ಅಜರಾಮರ…

ಹೊಸ ವರುಷ, ಹೊಸ ಸಂವತ್ಸರದ ಹೊಸ ದಿನ, ಹೊಸ ಕನಸುಗಳೆಲ್ಲ ಹೊಸದುಕೊಳ್ಳಲಿ, ಈ ಯುಗಾದಿ ಹಬ್ಬ ನಿಮ್ಮ ಕನಸುಗಳು ನನಸಾಗಲಿ ಎಂದು ಕೆ ಲೈವ್ ಬಳಗ ಹಾರೈಸುತ್ತದೆ…

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...