ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಧಾರ್ಮಿಕ ಕ್ಷೇತ್ರ ತಿರುಪತಿಯು ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿಯೇ ಈಗ ಆಂಧ್ರಪ್ರದೇಶದಲ್ಲಿ ಅತಿ ದೊಡ್ಡ ಅಣೆಕಟ್ಟೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ.
ಅಣೆಕಟ್ಟೆಯ ಏರಿಗಳಲ್ಲಿನ ಕೆಲವು ಬಿರುಕುಗಳಿಂದ ನೀರು ಸೋರಿಕೆ ಆಗುತ್ತಿರುವುದನ್ನು ಗಮನಿಸಿದ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.
ತಿರುಪತಿ ಬಳಿ ಇರುವ ರಾಮಚಂದ್ರಪುರಂನಲ್ಲಿನ ರಾಯಲಚಿರುವು ಅಣೆಕಟ್ಟಿನಲ್ಲಿ ಬಿರುಕುಗಳು ಕಂಡುಬಂದಿವೆ. ಇದರಿಂದ ಭಾರಿ ಮಳೆ ನಡುವೆ ಮತ್ತೊಂದು ಅನಾಹುತದ ಆತಂಕ ಎದುರಾಗಿದೆ.
ತಕ್ಷಣ ಕ್ರಮ ಕೈಗೊಂಡ ಜಿಲ್ಲಾಡಳಿತವು, ಅಣೆಕಟ್ಟೆ ಕೆಳಭಾಗದಲ್ಲಿರುವ ಸುಮಾರು 100 ಗ್ರಾಮಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ದಾಖಲೆಗಳು ಹಾಗೂ ಅಗತ್ಯ ಪದಾರ್ಥಗಳ ಜೊತೆ ಆದಷ್ಟು ಶೀಘ್ರ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗುತ್ತಿದೆ.
ಚೆನ್ನೈ ಹಾಗೂ ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಮಳೆಯಿಂದ ರಸ್ತೆ ತೀವ್ರ ಹಾನಿಯಾದ ಹಿನ್ನೆಲೆಯಲ್ಲಿ ಪಡುಗು ಪಡುವಿನಲ್ಲಿ ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಪರಿಣಾಮ ನೂರಾರು ಲಾರಿಗಳು ರಸ್ತೆಬದಿ ಸಾಲಾಗಿ ನಿಂತು, ವಾಹನ ದಟ್ಟಣೆ ಉಂಟಾಗಿದೆ. ಕಡಪ ಅನಂತಪುರ ಸಂಪರ್ಕಿಸುವ ಪಾಪ ಗಣಿ ನದಿ ಸೇತುವೆ ಕುಸಿದಿದ್ದು, ಚೆನ್ನೈ- ವಿಜಯವಾಡ ರೈಲ್ವೆ ಮಾರ್ಗದ 17 ಎಕ್ಸ್ ಪ್ರೆಸ್ಸ್ ರೈಲುಗಳ ಸಂಚಾರ ರದ್ದು ಪಡಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಸಂಭವಿಸಿದ ದುರಂತಗಳಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.