Sunday, August 23, 2026
Sunday, August 23, 2026

ಕುಸ್ಮೇಶ್ವರ ( ಘೃಷ್ಣೇಶ್ವರ):

Date:

ಕುಸ್ಮೇಶ್ವರ ( ಘೃಷ್ಣೇಶ್ವರ):

ಇದಕ್ಕೆ ಶಿವಮಹಾಪುರಾಣದ

ಕಥೆಯ ಹಿನ್ನೆಲಯಿದೆ. ಮಹಾರಾಷ್ಟ್ರದ ಭಾರದ್ವಾಜ ಗ್ರಾಮದಲ್ಲಿ ಸುರ‍್ಮ- ಸುದೇಕಾ ದಂಪತಿಗಳು ವಾಸವಾಗಿದ್ದರು.

ಶಿವಭಕ್ತ ದಂಪತಿಗಳಿಗೆ ಮಕ್ಕಳಾಗಲಿಲ್ಲ. ಸುದೇಕಾ ತನಗೆ ಸಂತಾನ ಭಾಗ್ಯವಿಲ್ಲ ಎಂದು ಆಕೆಯ ತಂಗಿಯನ್ನ ಮದುವೆಯಾಗಲು ಗಂಡನಿಗೆ ಒತ್ತಾಯಿಸುವಳು.ಸುರ‍್ಮ ಒಪ್ಪವುದೇ ಇಲ್ಲ.ಕೊನೆಗೆ ಪತ್ನಿಯ ಒತ್ತಾಯಕ್ಕೆ ಕಟ್ಟುಬಿದ್ದು ಸುದೇಕಾಳ ತಂಗಿ ಕುಸುಮಳನ್ನ ಮದುವೆಯಾಗುತ್ತಾನೆ.

ಅವಳೂ ಪರಮ ಶಿವಭಕ್ತೆ. ನಿತ್ಯವೂ ಮಣ್ಣಿನಿಂದ 101 ಶಿವಲಿಂಗವನ್ನ ಸ್ಮರಿಸಿ
ಪೂಜಿಸಿ ಹತ್ತಿರದ ಕೊಳದಲ್ಲಿ ಬಿಡುತ್ತಿದ್ದಳು.ಹೀಗೆ ಒಂದು ಲಕ್ಷ ಶಿವಲಿಂಗಗಳು
ಆದಾಗ ಶಿವನು ಆಕೆಗೆ ಪುತ್ರ ಸಂತಾನವನ್ನ ಕರುಣಿಸುವನು.ಜನಿಸಿದ ಆ ಮಗುವಿಗೆ ಶುಭಪ್ರಿಯ ಎಂದು ನಾಮಕರಣ ಮಾಡುತ್ತಾರೆ. ಮಗುವಿನ ಆಟಪಠಗಳಲ್ಲಿ ಸುದೇಕಾಳಲ್ಲಿ ಗಂಡ ಮತ್ತು ತಂಗಿ ತನ್ನನ್ನು ದೂರ ಮಾಡುತ್ತಿದ್ದಾರೆ ಎಂಬ ಸಂದೇಹ ಹೊಕ್ಕುಬಿಡುತ್ತದೆ.ಇದಕ್ಕೆಲ್ಲ ಶುಭಪ್ರಿಯನೇ ಕಾರಣ ಎಂದು ಒಳಗೇ ವ್ಯಗ್ರಳಾಗಿರುತ್ತಾಳೆ.

ಶುಭಪ್ರಿಯ ದೊಡ್ಡವನಾದ ಮೇಲೆ ವಿವಾಹವನ್ನೂ ಮಾಡುತ್ತಾರೆ.ಇಷ್ಟೆಲ್ಲದರ ನಡುವೆ ತನ್ನನ್ನು ಅಸಡ್ಡೆ ಮಾಡುತ್ತಿದ್ದಾರೆ ಎಂಬ ಸಿಟ್ಟಿನಿಂದ ಒಂದು ರಾತ್ರಿ
ಶುಭಪ್ರಿಯ ತನ್ನ ಪತ್ನಿಯೊಂದಿಗೆ ನಿದ್ರೆಯಲ್ಲಿದ್ದಾಗ ಹರಿತವಾದ ಖಡ್ಗದಿಂದ
ಶುಭಪ್ರಿಯನ ದೇಹವನ್ನ ಹೋಳಾಗಿ ತುಂಡರಿಸಿ ಕೊಳದಲ್ಲಿ ಬಿಸುಟಿ ಏನೂ ಆಗಿಲ್ಲವೆಂಬಂತೆ ನಿದ್ರೆ ಮಾಡುತ್ತಾಳೆ. ಶುಭಪ್ರಿಯನ ಪತ್ನಿ ಬೆಳಿಗ್ಗೆ ರಕ್ತಸಿಕ್ತವಾದ ಹಾಸಿಗೆ ಮತ್ತು ಪತಿ ಶುಭಪ್ರಿಯ ಇಲ್ಲದ್ದು ನೋಡಿ ಆಕ್ರಂದನ ಗೈಯುವಳು.

ಆಕೆಯ ಜೊತೆ ಸುದೇಕಾಳೂ ದುಃಖಿಸುತ್ತಾಳೆ.

ಶಿವಪೂಜೆ ಮುಗಿಸಿ ಬಂದ ಸುರ‍್ಮ ಎಲ್ಲಾ ಶಿವನ ಲೀಲೆಯೆಂದು ಎಲ್ಲರಿಗೂ
ಸಮಾಧಾನಪಡಿಸುವನು. ಇತ್ತ ಎಂದಿನಂತೆ ಕುಸುಮ ಶಿವಲಿಂಗ ಮಾಡಿ ಫೂಜಿಸಿ ಕೊಳದಲ್ಲಿ ಬಿಟ್ಟು ಬರುತ್ತಾಳೆ.ಹಿಂದೆಯೇ ಅಚ್ಚರಿ ಕಾದಿರುತ್ತದೆ.
ಅಮ್ಮಾ..! ಎಂದು ಶುಭಪ್ರಿಯ ಕೊಳದಿಂದೆದ್ದು ನಡೆದು ಬರುತ್ತಾನೆ. ಕುಸುಮಳಿಗೆ ತನ್ನ ಕಣ್ಣನ್ನ ನಂಬಲಾಗಲೇ ಇಲ್ಲ!

ಆ ಕಡೆ ಕೊಳದಲ್ಲಿ ಜ್ಯೋತಿರ್ಲಿಂಗದ ಪ್ರಕಾಶ ಕಾಣಿಸುತ್ತದೆ. ಅದರಿಂದ ಬಂದ ತ್ರಿಶೂಲಧಾರಿಯಾದ ಪರಶಿವ ಇವರಿಗೆ ರ‍್ಶನ ಕೊಡುವನು.ನಿನ್ನ ಭಕ್ತಿಯಿಂದ ನಿನ್ನ ಮಗ ಬದುಕಿದ ಈ ಸುದೇಕಾಳು ಅವನ
ಕೊಂದಿದ್ದಳು ಎಂದು ಕೋಪದಿಂದ ತ್ರಿಶೂಲ ಎತ್ತಿದ. ಆಗ ಕುಸುಮಳು ಅವಳ
ಈ ಹೀನಕೃತ್ಯದಿಂದ ಶಿವ ನಿನ್ನ ಭಾಗ್ಯವಾಗಿದೆ.ಅಕ್ಕನನ್ನನು ಕ್ಷಮಿಸು ಎನ್ನುತ್ತಾಳೆ.
ಕೊನೆಗೆ ಶಿವನು ಸುಮ್ಮನಾಗುವನು.ಅವಳ ಅಪೇಕ್ಷೆಯಂತೆ ಅಲ್ಲಿ ಭಕ್ತರಿಗೆ ಸರ್ವ ಕಷ್ಟಗಳನ್ನು ಪರಿಹರಿಸುವ ಶಕ್ತಿ ಶಿವಲಿಂಗವಾಗಿ ನೆಲೆಸುತ್ತಾನೆ.ಅಲ್ಲದೇ ಸುಷ್ಮೇಶ್ವರನೆಂಬ ಅಭದಾನದಿಂದ ಈ ಕ್ಷೇತ್ರ ಪ್ರಸಿದ್ದಿ ಪಡೆಯುತ್ತದೆ ಎಂದು ಆಶೀರ್ವದಿಸುತ್ತಾನೆ.

ಈ ಕ್ಷೇತ್ರವು ಎಲ್ಲೋರಾದ ವೇರುಲ್ ಗ್ರಾಮದ ಸಮೀಪವಿದೆ. ಎಲಿ ಎಂಬ ನದಿಯ ತೀರದಲ್ಲಿದೆ..ಕ್ರಿ.ಪೂ 1730ರಲ್ಲಿ ಮಾಧವರಾವ್ ಹೋಳ್ಕರ್ ಅವರ ಪತ್ನಿ ಗೌತಮಿಬಾಯಿ ಅವರಿಂದ
ದೇವಾಲಯದ ಜೀರ್ಣೋದ್ಧಾರವಾಗಿದೆ.ಅಲ್ಲಿರುವ ಪುಷ್ಕರಿಣಿಗೆ ಶಿವಾಲಯ ತರ‍್ಥವೆಂಬ ಹೆಸರಿದೆ. ದೇವಾಲಯದ ಗೋಡೆಗಳಲ್ಲಿ ಚಿತ್ರಕಲೆ ಬಿಡಿಸಲಾಗಿದೆ.

ದಶಾವತಾರದ ಕೆತ್ತನೆಯೂ ಕಂಡುಬರುತ್ತದೆ.

ಶ್ರೀ ಶಂಕರಾಚಾರ್ಯರು ಕುಸ್ಮೇಶ್ವರ ಸ್ತುತಿ ಹೀಗಿದೆ
ಏಲಾಪುರಿ ರಮೈ ಶಿವಾಲಯೇಸ್ಮಿನ್
ಸಮುಲ್ಲ ಸಂತಂ ತ್ರಿಜಗದ್ವರೇಣ್ಯಂ |
ವಂದೇ ಮಹೋದರತರ ಸ್ವಭಾವಂ
ಸದಾಶಿವಂ ತಂ ಧಿಷಣೇಶ್ವರಾಖೈಮ್ ||

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಮುಂದಿನ ಎರಡುವರ್ಷಗಳಲ್ಲಿ 500 ಕೆಪಿಎಸ್ ಶಾಲೆಗಳ ನಿರ್ಮಾಣದ ಉದ್ದೇಶವಿದೆ- ಮಧು ಬಂಗಾರಪ್ಪ.

Madhu Bangarappa ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ...

Breaking News ತೀರ್ಥಹಳ್ಳಿಯ ಘಂಟೆಹಕ್ಲು ಬಳಿ ಬಸ್ ಮತ್ತು ಗೂಡ್ಸ್ ವಾಹನ ಢಿಕ್ಕಿ:ಚಾಲಕ ಗಾಯಾಳು

Breaking News ತೀರ್ಥಹಳ್ಳಿ - ಉಡುಪಿ ಮಾರ್ಗ ಮಧ್ಯೆಯ ಘಂಟೆಹಕ್ಲು...

B.Y. Raghavendra ಶಿವಮೊಗ್ಗ ಗ್ರಾಮಾಂತರ ರೈತರ ನೀರಿನ ಬವಣೆಗೆ ದೀರ್ಘಕಾಲೀನ ಪರಿಹಾರ ಕಲ್ಪಿಸಿ- ಬಿ.ವೈ.ರಾಘವೇಂದ್ರ.

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಅವರ ನೇತೃತ್ವದ...