Thursday, October 3, 2024
Thursday, October 3, 2024

ರಾಜ್ಯದಲ್ಲೊಂದು ಸಿನಿಮಾ ಸ್ಕೂಲ್ ಸ್ಥಾಪನೆಯಾಗಲಿ- ಚಿತ್ರ ನಿರ್ದೇಶಕ ಸತ್ಯಪ್ರಕಾಶ್

Date:

ಶಿವಮೊಗ್ಗ:
ಕರ್ನಾಟಕದಲ್ಲಿ ಸಿನಿಮಾ ಸ್ಕೂಲ್ ಆಗಬೇಕು ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಸತ್ಯಪ್ರಕಾಶ್‌ಆಶಯ ವ್ಯಕ್ತಪಡಿಸಿದರು.

ಶಿವಮೊಗ್ಗ ಬೆಳ್ಳಿ ಮಂಡಲ, ಯುಗ ಧರ್ಮಜಾನಪದ ಸಮಿತಿ ಹಾಗೂ ಸಿನಿಮೊಗೆ ಚಿತ್ರಸಮಾಜಗಳ ಆಶ್ರಯದಲ್ಲಿ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಂಬೆಗಾಲು-5: ಕಿರುಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಪೂನಾದಲ್ಲಿ ಸಿನಿಮಾ ಸ್ಕೂಲ್‌ ಇದೆ. ಅಲ್ಲಿ ಬೆರವಣಿಗೆಯನ್ನೇ ಪ್ರತ್ಯೇಕ, ನಿರ್ದೇಶನವನ್ನೇ ಪ್ರತ್ಯೇಕ. ಹೀಗೆ ಸಿನಿಮಾದ ಪ್ರತಿಯೊಂದು ವಿಭಾಗವನ್ನೂ ಪ್ರತ್ಯೇಕವಾಗಿ ಕಲಿಸುತ್ತಾರೆ.ಅಲ್ಲಿಂದ ಬಂದ ಹುಡುಗರು ಮಾಡುವ ಸಿನಿಮಾಗಳು ಅಮೆಜಾನ್, ನೆಟ್ ಫ್ಲಿಕ್ಸ್ ಹೀಗೆ ಒಟಿಟಿ ವೇದಿಕೆಯಲ್ಲಿ ಸುಲಭವಾಗಿ ಸ್ಥಾನ ಗಿಟ್ಟಿಸುತ್ತವೆ ಎಂದರು.
ಆದರೆ ಕನ್ನಡದ ಸಿನಿಮಾಗಳು ಡಿಜಿಟಲ್ ವೇದಿಕೆಯಲ್ಲಿ ರಾರಾಜಿಸುವಲ್ಲಿ ವಿಫಲ ಆಗುತ್ತಿವೆ. ಅಲ್ಲಿ ಅವಕಾಶವನ್ನೇ ಪಡೆಯಲು ಆಗುತ್ತಿಲ್ಲ. ಇಲ್ಲಿ ಗುಣಮಟ್ಟದ ಕೊರತೆ ಇದೆ.ಅದರಲ್ಲಿ ಸುಧಾರಣೆ ತಂದುಕೊಳ್ಳಬೇಕು ಎಂದ ಅವರು, ಡಿಜಿಟಲ್ ವೇದಿಕೆಯಲ್ಲಿ ಕನ್ನಡ ಸಿನಿಮಾ ವೀಕ್ಷಣೆ ಮಾಡುವವರ ಸಂಖ್ಯೆ ಕೂಡಾ ಕಡಿಮೆ ಇದೆ. ಚಿತ್ರದಲ್ಲಿ ಗುಣಮಟ್ಟ ಇದ್ದರೆ ವೀಕ್ಷಕರು ಸಿಗುತ್ತಾರೆ. ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿಯಾದರೂ ಒಂದು ಸಿನಿಮಾ ಸ್ಕೂಲ್ ಮಾಡಬೇಕು. ವಾರದಲ್ಲಿ ಎರಡು ದಿನ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಕೊಡಿಸಬಹುದು ಎಂದರು.

ಶಿವಮೊಗ್ಗದಲ್ಲಿ ಗಿಡ ಇದೆ. ನೀರು ಹಾಕುವವರೂ ಇದ್ದಾರೆ. ಹಾಗಾಗಿ, ಒಳ್ಳೆಯ ಹೂವು, ಹಣ್ಣು ನಿರೀಕ್ಷೆ ಮಾಡಬಹುದು. ಅದಕ್ಕೆ ಸಿನಿಮಾ ಸ್ಕೂಲ್ ನೆರವಾಗುತ್ತದೆ ಎಂದ ಅವರು, ರಾಜ್ಯದಲ್ಲಿ ಎಲ್ಲೂ ಸಿಗದ ಅವಕಾಶಗಳು ಶಿವಮೊಗ್ಗೆಯಲ್ಲಿ ಲಭ್ಯವಿದೆ.ಅಂಬೆಗಾಲು ನಿಜಕ್ಕೂ ಒಂದು ಪರಿಣಾಮಕಾರಿಯಾದ ವೇದಿಕೆ. ಇದನ್ನು ಸಮರ್ಥವಾಗಿ ಬಳಸಿಕೊಂಡು, ಗಂಭೀರವಾದ ಚಲನಚಿತ್ರಗಳ ನಿರ್ಮಾಣಗಳ ಮೂಲಕ ಸಾರ್ಥಕ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇತ್ತೀಚಿನ ಕನ್ನಡ ಚಿತ್ರಗಳಲ್ಲಿ ಬರವಣಿಗೆಅಷ್ಟೊಂದು ಶಕ್ತಿದಾಯಕ ಆಗಿಲ್ಲ. ಬರವಣಿಗೆ ಇಲ್ಲದೇ ಹೋದರೆ ಸಿನಿಮಾ ಸೋಲುತ್ತದೆ.ಕಥೆಗಳನ್ನು ಬಾಯಲ್ಲಿ ಹೇಳುವುದು ಬೇರೆ.ಸಿನಿಮಾದಲ್ಲಿ ಚಿತ್ರದ ಮೂಲಕವೇ ಕಥೆ ಹೇಳಬೇಕು.ಆರಂಭ ಹೇಗೆ, ಕೊನೆ ಹೇಗೆ ಎಂಬುದು ಗೊತ್ತಿರಬೇಕು.ಕಥೆ ಏನು ಹೇಳುತ್ತದೆ ಎಂಬುದೂ ನಮಗೆ ಅರಿವಿರಬೇಕು ಎಂದ ಅವರು, ಸಿನಿಮಾ ಪ್ರೇಕ್ಷಕನ ಎದುರು ಎರಡರಿಂದ ಮೂರು ಗಂಟೆ ಇದ್ದರೂ, ಅದರ ಹಿಂದೆ ಅಗಾಧವಾದ ಕೆಲಸ ಇರುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಹಾಗೂ ಅಂಬೆಗಾಲು ಕಿರುಚಿತ್ರ ಸ್ಪರ್ಧೆ ಸಂಚಾಲಕ ಡಿ.ಎಸ್. ಅರುಣ್ ಪ್ರಾಸ್ತಾವಿಕ ಮಾತನಾಡಿ, ಸಿನೆಮಾಗಾಗಿ ಕಷ್ಟ ಪಡುತ್ತಿರುವ ಸಾವಿರಾರು ಯುವಕರಿದ್ದಾರೆ. ಆದರೆ ವರ್ಷದಲ್ಲಿಗೆಲ್ಲುವುದು ನಾಲ್ಕು – ಐದುಚಿತ್ರ ಮಾತ್ರ.ಯುವಕರಿಗೆ ಮಾರ್ಗದರ್ಶನ, ಪ್ರೋತ್ಸಾಹ ನೀಡಲು ಈ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಶಿವಮೊಗ್ಗ ಬೆಳ್ಳಿ ಮಂಡಲದ ವೈದ್ಯ, ನಿರ್ಮಾಪಕ ಡಿ. ಮಂಜುನಾಥ್, ಡಾ.ರಜನಿ ಪೈ, ಡಾ.ಶುಭ್ರತಾ, ಒಗ್ಗರಣೆಡಬ್ಬಿಕೃಷ್ಣಪ್ಪ, ಡಾ.ಧನಂಜಯ ಸರ್ಜಿ, ಜಿ. ವಿಜಯಕುಮಾರ್, ಜಿ. ಅನಂತ, ಡಾ. ನಾಗರಾಜ ಪರಿಸರ, ಕಿರಣ್‌ಇನ್ನಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್, ಬೆಳ್ಳಿಮಂಡಲದ ಹಿರಿಯ ಸದಸ್ಯ ಸಿ.ಎನ್. ಶ್ರೀನಿವಾಸ್‌ರವರಿಗೆ ಪುಷ್ಟ ನಮನ ಸಲ್ಲಿಸಲಾಯಿತು.

ಅಂಬೆಗಾಲು ಕಿರುಚಿತ್ರ ಸ್ಪರ್ಧೆ-5ರಲ್ಲಿ ಎಚ್.ಜಿ.ಸಂತೋಷ್ ನಿರ್ದೇಶನದ ಮಲೆನಾಡಿನ ಕಥೆಗಳು ಪ್ರಥಮ ಸ್ಥಾನ ಪಡೆದಿದೆ.

ಡಿ.ಎಂ. ರಾಜಕುಮಾರ್‌ಅವರ ಬಿಡುಗಡೆಕಿರುಚಿತ್ರ ದ್ವಿತೀಯ, ಜನಾರ್ಧನ್ ಶೆಟ್ಟಿಅವರ ಮಾತಾಡಿಕಿರುಚಿತ್ರತೃತೀಯ ಬಹುಮಾನ ಪಡೆಯಿತು.ಸಂತೋಷ್ ಶೆಟ್ಟಿ ಅವರ ಕಜನಿ ಚಿತ್ರವು ವಿಶೇಷ ಪುರಸ್ಕಾರ ಪಡೆಯಿತು. ಪ್ರಥಮ ಬಹುಮಾನ 25ಸಾವಿರರೂ., ದ್ವಿತೀಯ-15 ಸಾವಿರರೂ. ಮತ್ತು ತೃತೀಯ-10 ಸಾವಿರರೂ.ಮತ್ತು ಸ್ಮರಣಿಕೆ ನೀಡಲಾಯಿತು.
ಈ ಬಾರಿ 8ರಿಂದ 10 ನಿಮಿಷಗಳ ಸ್ಪರ್ಧೆಯಲ್ಲಿ ಪ್ರಾಜೆಕ್ಟ್ ವಿಜನ್, ಮಾಯಾ ಬಜಾರ್, ಆಲಂ, ಆಂತರ್ಯ, ಅಂದರಿಕಿ ನಮಸ್ಕಾರಂ, ವೇದ-ದರಿಯಲ್ ವಾರಿಯರ್, ದಟೈನ್, ದಗಿಫ್ಟ್, ಬಿಡುಗಡೆ, ಕಜನಿ, ದೇವರೆಲ್ಲಿದ್ದಾನೆ, ಮಾತಾಡಿ, ವರ್ಜ್ಯಂ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...