Tuesday, October 1, 2024
Tuesday, October 1, 2024

ತರಬೇತಿ ಪಡೆದ ಸಿಬ್ಬಂದಿಗಳು ಸಹಕಾರಿ ಸಂಸ್ಥೆಗಳ ಆಸ್ತಿಯಾಗಬೇಕು-ಎ.ಆರ್. ಪ್ರಸನ್ನಕುಮಾರ್

Date:

ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಹಾಗೂ ಮುಖ್ಯಕಾರ್ಯನಿರ್ವಾಹಕರಿಗೆ ಎರಡು ದಿನದ “ಆಡಳಿತ ಪರಿಣ ತಿ ಅಭಿವೃದ್ಧಿ ತರಬೇತಿಯನ್ನು” ದಿನಾಂಕ 4,5, ಫೆಬ್ರವರಿ 2023 ರಂದು ಶ್ರೀ ಕ್ಷೇತ್ರ ಹೊಂಬುಜ, ಹುಂಚ, ಹೊಸನಗರ ತಾಲೂಕಿನಲ್ಲಿ ಜರುಗಿಸಲಾಯಿತು.

ನಿರ್ದೇಶಕರುಗಳು ಹಾಗೂ ಮುಖ್ಯಕಾರ್ಯನಿರ್ವಾಹಕರುಗಳು ಸಹಕಾರಿ ಸಂಸ್ಥೆಗಳ ಜ್ಞಾನದ ಆಸ್ತಿಯಾಗಬೇಕು.
ಸಹಕಾರ ಸಂಸ್ಥೆಗಳ ನಿರ್ದೇಶಕರುಗಳು ಹಾಗೂ ಮುಖ್ಯಕಾರ್ಯನಿರ್ವಾಹಕರುಗಳು ತರಬೇತಿಯಿಂದ ಪಡೆದ ಜ್ಞಾನದ ಮೂಲಕ ತಮ್ಮ ಸಹಕಾರಿ ಸಂಸ್ಥೆಗಳ ಜ್ಞಾನದ ಆಸ್ತಿಯಾಗಿ ರೂಪುಗೊಳ್ಳಬೇಕೆಂದು ಶ್ರೀ ಎ ಆರ್ ಪ್ರಸನ್ನಕುಮಾರ್ ರವರು ತಿಳಿಸಿದರು.

ಸಂಯುಕ್ತ ಸಹಕಾರಿ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇವರ ಸಂಯುಕ್ತಾಶ್ರಯದಲ್ಲಿ ನಡೆಸುತ್ತಿರುವ ಡಿಸಿಬಿಎಂ ಕೋರ್ಸ್ಗೆ ಸಹಕಾರಿಯ ಸಿಬ್ಬಂದಿಗಳು ಸೇರಿ ಸಹಕಾರ ಕ್ಷೇತ್ರ ಹೆಚ್ಚಿನ ಅರಿವನ್ನು ಪಡೆದು ಸಹಕಾರಿಯನ್ನು ಲಾಭದಾಯಕವಾಗಿ ಕಾರ್ಯನಿರ್ವಹಿಸಲಿ ಎಂದು ತಿಳಿಸಿದರು.

ಸಹಕಾರಿಗಳಲ್ಲಿ ಸುಸ್ತಿಯಾದ ಸಾಲಗಳನ್ನು ಕಾನೂನು ಮೂಲಕ ವಸೂಲಿ ಮಾಡಿ ಸಹಕಾರಿಯನ್ನು ಲಾಭದಾಯಕವಾಗಿಸಲು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.

ಸಹ್ಯಾದ್ರಿ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ., ಶಿವಮೊಗ್ಗದ ವತಿಯಿಂದ ಸಾಲ ವಸೂಲಾತಿಗೆ ಮಾರಾಟಾಧಿಕಾರಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಮಾರಾಟಾಧಿಕಾರಿಯ ಸೇವೆಯನ್ನು ಜಿಲ್ಲೆಯ ಸೌಹಾರ್ದ ಸಹಕಾರಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಸಂಯುಕ್ತ ಸಹಕಾರಿಯು ಸದಸ್ಯ ಸಹಕಾರಿಗಳ ಅಧ್ಯಕ್ಷರು, ನಿರ್ದೇಶಕರುಗಳಿಗೆ ಹಾಗೂ ಸಿಬ್ಬಂದಿಗಳಿಗೆ ವಿಭಿನ್ನವಾದ ಸಹಕಾರ ಕ್ಷೇತ್ರದ ಕುರಿತು, ಹಣಕಾಸು ಕ್ಷೇತ್ರದ ಕುರಿತು ತರಬೇತಿಗಳನ್ನು ಆಯೋಜನೆ ಮಾಡುಲಾಗುತ್ತದೆ. ಈ ರೀತಿಯ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಮಯದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವತಿಯಿಂದ ಉಪಾಧ್ಯಕ್ಷರಾದ ಶ್ರೀ ಪ್ರಸನ್ನಕುಮಾರ್ ರವರು ತರಬೇತಿಗೆ ಸ್ಥಳಾವಕಾಶವನ್ನು ಕಲ್ಪಿಸಿದ ಶ್ರೀ ಪದ್ಮಾಂಬಾ ಪ್ರೌಢಶಾಲೆ, ಹುಂಚ, ಹೊಸನಗರ ಈ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಶಾಲಾ ಕೊಠಡಿಗೆ ಎರಡು ಗ್ರೀನ್ ಬೋರ್ಡ್ನ್ ಅನ್ನು ನೆನಪಿನ ಕಾಣ ಕೆಯಾಗಿ ನೀಡಲಾಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಾದ ಕೋಡಚಾದ್ರಿ ಅಡಿಕೆ ಸೌಹಾರ್ದದ ನಿರ್ದೇಶಕರಾದ ಜಗದೀಶ್ ಹೆಚ್ ಪಿ, ಭದ್ರಾ ಬಸವೇಶ್ವರ ಸೌಹಾರ್ದದ, ಯಡೇಹಳ್ಳಿ ಇದರ ಮುಖ್ಯಕಾರ್ಯನಿರ್ವಾಹಕರಾದ ಶ್ರೀಮತಿ ಸುಮಾ ಕಿರಣ್‌ರವರು ರವರು ಎರಡು ದಿನದ ತರಬೇತಿಯ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಈ ಸಮಾರೋಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಹಾಸ್ಯ ಕಲಾವಿದರಾದ ಶ್ರೀ ವೈ ವಿ ಗುಂಡುರಾವ್‌ರವರು, ಸನ್ನದ್ದು ಲೆಕ್ಕಪರಿಶೋಧಕರಾದ ಶ್ರೀ ಮಧುಕರ ಹೆಗಡೆಯವರು, ಸಹ್ಯಾದ್ರಿ ಒಕ್ಕೂಟದ ನಿರ್ದೇಶರಾದ ಶ್ರೀ ಕಿರಣ್ ಜೆ ಪಿಯವರು, ಶಾಲೆಯ ಸಹ ಶಿಕ್ಷಕರಾದ ಶ್ರೀ ಪ್ರಶಾಂತ್‌ರವರು ಹಾಗೂ ಪ್ರಾಂತೀಯ ವ್ಯವಸ್ಥಾಪಕರಾದ ಶ್ರೀ ಸಂಜಯ್ ಕೋಟಕರ್‌ರವರು ಭಾಗವಹಿಸಿದ್ದರು.

ಎರಡು ದಿನದ ಕಾರ್ಯಕ್ರಮದ ನಿರ್ವಹಣೆಯನ್ನು ಮತ್ತು ವ್ಯವಸ್ಥೆಯನ್ನು ಸೌಹಾರ್ದ ಜಿಲ್ಲಾ ಸಂಯೋಜಕರಾದ ಶ್ರೀ ಶಶಿಕುಮಾರ್‌ರವರು ನಿರ್ವಹಿಸಿದರು.

ಸಮಾರೋಪದ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ಉಪಾಧ್ಯಕ್ಷರಾದ ಶ್ರೀ ಎ.ಆರ್ ಪ್ರಸನ್ನಕುಮಾರ್ ರವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...