Saturday, June 20, 2026
Saturday, June 20, 2026

ಭದ್ರಾವತಿಯಲ್ಲಿ ಆರೋಗ್ಯ ಶಿಬಿರ

Date:

ರೋಟರಿ ಕ್ಲಬ್ ಭದ್ರಾವತಿ,
ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ಭದ್ರಾವತಿ ಮತ್ತು ಸಹ್ಯಾದ್ರಿ
ನಾರಾಯಣ ಆಸ್ಪತ್ರೆ ಶಿವಮೊಗ್ಗ ಸಹಯೋಗದಲ್ಲಿ
ಭದ್ರಾವತಿಯ ರೋಟರಿ ಸಮುದಾಯ ಭವನದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ’ದ
ಅಂಗವಾಗಿ ಆರೋಗ್ಯ ಶಿಬಿರವನ್ನು
ಆಯೋಜಿಸಲಾಗಿತ್ತು.

ಬಿ.ಪಿ, ಶುಗರ್ ತಪಾಸಣೆ, ಕೋವಿಡ್ ಲಸಿಕೆ ಬೂಸ್ಟರ್ ಡೋಸ್,
ಮೂಳೆ, ದಂತ ತಪಾಸಣೆಯನ್ನು ಮೂಳೆ ತಜ್ಞವೈದ್ಯರಾದ
ಡಾ|| ಎಮ್.ವೈ.ಸುರೇಶ್ ಮತ್ತು ದಂತ ವೈದ್ಯರಾದ ಎಸ್.ಎನ್. ಸುರೇಶ್ ಚಿಕಿತ್ಸೆ ನೀಡಿದರು . ಹೃದಯ
ಸಮಸ್ಯೆಗಳ ತಪಾಸಣೆಯನ್ನು ಸಹ್ಯಾದ್ರಿ
ನಾರಾಯಣ ಹೃದಯಾಲದ ಹೃದ್ರೋಗ ತಜ್ಞವೈದ್ಯರಾದ ಡಾ||
ಶರತ್ ಮತ್ತು ಡಾ|| ಹಂಸಲೇಖ ಮಾಡಿದರು.

ಕಾರ್ಯಕ್ರಮವನ್ನು ಎಸ್ ಎ ಐ ಎಲ್, ವಿಐಎಸ್ ಎಲ್ ನ ಕಾರ್ಯಪಾಲಕ
ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ ಅವರು ಉದ್ಘಾಟಿಸಿದರು. ಶ್ರೀ
ಎಸ್. ಅಡವೀಶಯ್ಯ, ಅಧ್ಯಕ್ಷರು, ಮತ್ತು ಶ್ರೀ ಸುರೇಶ್
ಕುಮಾರ್, ಕಾರ್ಯದರ್ಶಿಗಳು ರೋಟರಿ ಕ್ಲಬ್, ಡಾ||
ಎಮ್.ವೈ.ಸುರೇಶ್, ಮುಖ್ಯ ವೈದ್ಯಾಧಿಕಾರಿಗಳು ಮತ್ತು ಶ್ರೀ
ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು
ಸಾರ್ವಜನಿಕ ಸಂಪರ್ಕ), ಶ್ರೀಮತಿ ಕೆ.ಎಸ್.ಶೋಭ, ಸಹಾಯಕ
ಪ್ರಬಂಧಕರು (ಸಿಬ್ಬಂದಿ) ಉಪಸ್ಥಿತರಿದ್ದರು.

ಎಸ್ ಎ ಐ ಎಲ್ – ವಿ ಐ ಎಸ್ ಎಲ್ ಆಸ್ಪತ್ರೆಯಿಂದ ಉಚಿತ ಔಷಧಿಗಳನ್ನು
ವಿತರಿಸಲಾಯಿತು. ಒಟ್ಟು 48 ಮಂದಿ ಶಿಬಿರದ ಪ್ರಯೋಜನ
ಪಡೆದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಪಿಎಂ- ವಿಬಿಆರ್ ವೈ ಯೋಜನೆಯಿಂದ ಉದ್ಯೋಗ ಸೃಷ್ಠಿ- ಬಿ.ವೈ.ರಾಘವೇಂದ್ರ

B.Y. Raghavendra ಪ್ರಧಾನ ಮಂತ್ರಿ ವಿಕಸಿತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ...

Rotary Organization ಸಮಾಜಮುಖಿ ಸೇವೆಗಳ ಮೂಲಕ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ- ರೋಟರಿ ಗೌರ್ನರ್ ಕೆ.ಫಾಲಾಕ್ಷ

Rotary Organization ಮನುಕುಲದ ಮಾನವೀಯ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ ಪ್ರಪಂಚಾದ್ಯಂತ...

DC Shivamogga ಹುಲಿಕಲ್ ಘಾಟಿಯಲ್ಲಿ ಮಜಲು ಬಸ್ ವಾಹನಗಳ ಸಂಚಾರಕ್ಕೆ ಅವಕಾಶ- ಪ್ರಭುಲಿಂಗ ಕವಳಿಕಟ್ಟಿ

DC Shivamogga ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜೂ. 18 ರಿಂದ ರಾಜ್ಯ...