Sunday, December 7, 2025
Sunday, December 7, 2025

ನಮ್ಮ ಕೈಲಾದಮಟ್ಟಿಗೆ ಗಾಂಧಿ ವಿಚಾರಧಾರೆಗಳನ್ನ ಹರಡಬೇಕು- ಕಿಮ್ಮನೆ ರತ್ನಾಕರ್

Date:

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ರವರು ಕನ್ಯಾಕುಮಾರಿಯಿಂದ ಕಾಶ್ಮೀರವರಿಗೆ 3970 ಕಿಲೋಮೀಟರ್ ಪಾದಯಾತ್ರೆ ಮಾಡಿ ಐತಿಹಾಸಿಕ ಭಾರತ್ ಜೋಡೋ ಯಾತ್ರೆ ಪೂರ್ಣವಾದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ನಗರ ಬ್ಲಾಕ್ ನಿಂದ ದಿನಾಂಕ : 30-1-2023 ಸೋಮವಾರ ಬೆಳಿಗ್ಗೆ ಹತ್ತು ಘಂಟೆಗೆ ತೀರ್ಥಹಳ್ಳಿಯ ಪಕ್ಷದ ಕಛೇರಿಯಲ್ಲಿ ಗಾಂಧಿಜಿಯವರ ಪುಣ್ಯಸ್ಮರಣೆಯ ಅಂಗವಾಗಿ ಮಹಾತ್ಮ ಗಾಂಧಿಯವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾಜಿ ಸಚಿವ ಶ್ರೀಯುತ ಕಿಮ್ಮನೆ ರತ್ನಾಕರ್ ರವರು ದೇಶದ ತ್ರಿವರ್ಣ ಧ್ವಜಾರೋಹಣ ಮಾಡಿದರು.

ಈ ಸಮಾರಂಭದಲ್ಲಿ ಭಾಗವಹಿಸಿದ ಮಾಜಿ ಸಚಿವ ಶ್ರೀಯುತ ಕಿಮ್ಮನೆ ರತ್ನಾಕರ್ ರವರು ಮಾತನಾಡಿ ಮಹಾತ್ಮ ಗಾಂಧಿ ಇಂದಿಗೂ ಎಂದಿಗೂ ಪ್ರಸ್ತುತ, ಅವರ ಬದುಕೆ ಒಂದು ಸತ್ಯದರ್ಶನ, ನಾವು ಅವರು ಬದುಕಿದ ರೀತಿ ಒಂದು ದಿನವೂ ಇರಲಾಗದು, ಆದರೆ ನಮ್ಮ ಕೈಲಾದ ಮಟ್ಟಿಗೆ ಗಾಂಧಿ ವಿಚಾರಧಾರೆಗಳನ್ನು ಹರಡಿಸಬೇಕಿದೆ‌ ಎಂದರು.

ದೇಶವನ್ನು ಬಿಜೆಪಿ ಆರ್ ಎಸ್ ಎಸ್ ಜಾತಿ ಧರ್ಮಗಳಡಿ ವಿಭಾಗಿಸುತ್ತಿರುವ ಘಳಿಗೆಯಲ್ಲಿ ರಾಜಕೀಯ ಸಂತನಂತೆ ಗೋಚರಿಸುವ ನಮ್ಮ ನಾಯಕ ಶ್ರೀಯುತ ರಾಹುಲ್ ಗಾಂಧಿ ಹಮ್ಮಿಕೊಂಡ ಐಕ್ಯತಾ ಯಾತ್ರೆ ಜನರನ್ನು ಬೆಸೆಯುವಲ್ಲಿ ಯಶಸ್ವಿಯಾಗಿದೆ ಎಂದರು.

ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರ್ ಮಂಜುನಾಥ್ , ಪಟ್ಟಣ ಪಂಚಾಯತ್ ಸದಸ್ಯರಾದ ಗಣಪತಿ,ಮಂಜುಳಾ, ಗೀತಾ ರಮೇಶ , ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ವಿಲಿಯಮ್ ಮಾರ್ಟಿಸ್,
ಕಾಂಗ್ರೆಸ್ ಪಕ್ಷದ
ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ತೀರ್ಥಹಳ್ಳಿ ಗ್ರಾಮಾಂತರ ಬ್ಲಾಕ್ ನ ಆಚರಣೆಯೂ ಗಾಜನೂರಿನ ಕಡೆಕಲ್ ನಲ್ಲಿ ಬ್ಲಾಕ್ ಅಧ್ಯಕ್ಷರಾದ ಮುಡುಬ ರಾಘವೇಂದ್ರರವರ ನೇತೃತ್ವದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಹಾಪಕಾಮ್ಸ್ ಅಧ್ಯಕ್ಷರಾದ ಸಂತೇಕಡೂರ್ ವಿಜಯಕುಮಾರ, ಯುವ ಕಾಂಗ್ರೆಸ್ ಅಧ್ಯಕ್ಷರಾದ ರಾಘವೇಂದ್ರ ಪುಟ್ಟೋಡ್ಲು ನಿಧಿಗೆ ಹೋಬಳಿ ಅಧ್ಯಕ್ಷ ಮುನಿಸ್ವಾಮಿ, ಗಾಜನೂರು ,ಮುತ್ತೂರು ಘಟಕದ ಅಧ್ಯಕ್ಷರಾದ ಪುಟ್ಟಣ್ಣ, ಮಂಜುನಾಥ್, ಗ್ರಾಮ ಪಂಚಾಯತ್ ಸದಸ್ಯರಾದ ನಾನಾ ನಾಯ್ಕ್, ಶಿವಕುಮಾರ್, ರಾಜಣ್ಣ, ತ್ಯಾಗು, ಅಲ್ಪಸಂಖ್ಯಾತ ಘಟಕದ ಪ್ರಮುಖರಾದ ಅಜೀಜ್ ಕಡೆಕಲ್, ಒಬಿಸಿ ಘಟಕದ ಪ್ರದಾನ ಕಾರ್ಯದರ್ಶಿ ಅನಿಲ್ ಉಂಬ್ಳೆಬೈಲು , ಬಿಎಲ್ಒ ರಘು
ಕಾಂಗ್ರೆಸ್ ಪಕ್ಷದ
ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...