Tuesday, March 11, 2025
Tuesday, March 11, 2025

ಸಂಗೊಳ್ಳಿ ರಾಯಣ್ಣ ಯುವಕರಿಗೆ ಸ್ಫೂರ್ತಿ- ಮಹೇಶ್

Date:

Book Your Advertisement Now.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ದೇಶಕ್ಕಾಗಿ ಬಲಿದಾನಗೊಂಡ ದಿನವಾದ ಇಂದು ಜಿಲ್ಲಾ ಹಾಲುಮತ ಮಹಾಸಭಾ ವತಿಯಿಂದ ಜಿ.ಪಂ. ಸಮೀಪದ ಕನಕ ಕಟ್ಟಡ ಭವನದಲ್ಲಿ 192ನೇ ಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಬ್ರಿಟಿಷರ ವಿರುದ್ಧ ನಾಡು ಹಾಗೂ ದೇಶದ ರಕ್ಷಣೆ ದೃಷ್ಟಿಯಿಂದ ಕೆಂಚದೆಯಿಂದ ಹೋರಾಡಿದ ಅಪ್ರತಿಮ ನಾಯಕ ಸಂಗೊಳ್ಳಿ ರಾಯಣ್ಣ ಎಂದ ಅವರು ಕಿತ್ತೂರು ಠಾಣಿ ಚೆನ್ನಮ್ಮ ಅವರ ನಂಬಿಕಾರ್ಹ ಬಲಗೈ ಬಂಟನಾಗಿ ಕಾರ್ಯನಿರ್ವಹಿಸಿ ವೀರಯೋಧ ಎನಿಸಿಕೊಂಡವರು ಎಂದರು.

ರಾಯಣ್ಣನವರು ಸ್ವಾತಂತ್ರ್ಯ ಭೂಮಿಕೆಯಲ್ಲಿ ತನ್ನದೇಯಾದ ಕೊಡುಗೆ ನೀಡಿದವರು. ಕೆಲವು ಕಿಡಿಗೇಡಿಗಳು ನಾಡಿನ ಮೇಲೆ ದ್ವೇಷವನ್ನು ಬಿತ್ತುವ ಹಾಗೂ ಚೆನ್ನಮ್ಮನ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಬ್ರಿಟಿಷರಿಂದ ರಾಯಣ್ಣ ಹತನಾದ ಎಂಬ ಸುಳ್ಳು ಸಂದೇಶ ರವಾನಿಸಿ ಚೆನ್ನಮ್ಮನ ಸಾವಿಗೂ ಕಾರಣರಾಗಿದ್ದರು ಎಂದು ಹೇಳಿದರು.

ನೇರ ಹೋರಾಟದ ಮೂಲಕ ಸಂಗೊಳ್ಳಿ ರಾಯಣ್ಣನನ್ನು ಸೆರೆ ಹಿಡಿಯಲು ಅಸಾಧ್ಯವಾದ ಕಾರಣ ಸಂಚು ಮಾಡಿ ಸೆರೆ ಹಿಡಿಯಲು ಬ್ರಿಟಿಷ್ ಅಧಿಕಾರಿಗಳು ತೀರ್ಮಾನಿಸಿ ಕೆಲವು ಕಿಡಿಕೇಡಿಗಳಿಗೆ ಜಮೀನು, ನಗದು ಬಹುಮಾನ ನೀಡುವ ಆಮಿಷವೊಡ್ಡಿ ಮೋಸದಿಂದ ಬಂಧಿಸಲಾಗಿತ್ತು ಎಂದರು.

ರಾಜ್ಯ ಕುರುಬರ ಸಂಘದ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಮಾತನಾಡಿ ರಾಯಣ್ಣ ಅವರ ಜನ್ಮದಿನ ಆಗಸ್ಟ್ 15 ಅವರ ಬಲಿದಾನದ ದಿನ ಜನವರಿ 26. ಗಣರಾಜ್ಯೋತ್ಸವ ಸಂದರ್ಭದಲ್ಲಿ ಅವರ ತ್ಯಾಗ, ಬಲಿದಾನಗಳನ್ನು ಪ್ರತಿಯೊಬ್ಬರು ಸ್ಮರಿಸಿ ಅವರ ಮಾರ್ಗದರ್ಶದಲ್ಲಿ ನಡೆಯಬೇಕು ಎಂದು ಹೇಳಿದರು.

ರಾಯಣ್ಣ ಶೂರತನ ಮತ್ತು ಪ್ರಾಮಾಣಿಕತೆಗೆ ಮೆಚ್ಚಿ ಕಿತ್ತೂರು ರಾಣಿ ಚೆನ್ನಮ್ಮ ತಮ್ಮ ಅಂಗ ರಕ್ಷಕರ ನಾಯಕನ್ನಾಗಿ ಮಾಡಿಕೊಂಡರು. ಅವರ ಪ್ರಾಮಾಣಿಕತೆ ಇಂದಿನ ಯುವಕರಿಗೆ ಸ್ಪೂರ್ತಿಯಾಗಿ ದೇಶದಲ್ಲಿ ಭ್ರಷ್ಟಾಚಾರ ಅಡಗಿಸಲು ಯುವಕರ ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಲುಮತ ಮಹಾಸಭಾ ಅಧ್ಯಕ್ಷ ಮೂರ್ತಿ ಅಡವೇಗೌಡ, ಕನಕ ಜಯಂತಿ ಸಮಿತಿ ಅಧ್ಯಕ್ಷ ಬಿ.ಸಿ.ಗಂಗಾಧರ್, ಮುಖಂಡರುಗಳಾದ ನಾಗೇಶ್, ಜಗದೀಶ್, ಡಿ.ಜಿ.ರಂಗನಾಥ್, ತಾರಾನಾಥ್ ಮತ್ತಿತರರು ಉಪಸ್ಥಿತರಿದ್ದರು.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಜೆಸಿಐ ನಲ್ಲಿ ತೊಡಗಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆ- ಸೂರ್ಯ ನಾರಾಯಣ ವರ್ಮ

JCI Shivamogga ಸಮಾಜಮುಖಿ ಚಟುವಟಿಕೆಗಳ ಜತೆಯಲ್ಲಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ...

Karnataka Lokayukta ಮಾರ್ಚ್ 18 ರಿಂದ 21 ವರೆಗೆ ರಾಜ್ಯ ಉಪಲೋಕಾಯುಕ್ತ ನ್ಯಾ.ಕೆ.ಫಣೀಂದ್ರ ಅವರ ಜಿಲ್ಲಾ ಕಾರ್ಯಕ್ರಮಗಳ ಮಾಹಿತಿ

Karnataka Lokayukta ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18...

CM Siddharamaih ಕುರ್ಚಿ ಉಳಿಸಿಕೊಳ್ಳುವ ಯತ್ನದಲ್ಲಿ ಸಿದ್ಧರಾಮಯ್ಯನವರ ಬಜೆಟ್…!

CM Siddharamaih ಕರ್ನಾಟಕದ ಅಭಿವೃದ್ಧಿಗೆ ಪೂರಕವೇ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ...

Guarantee Scheme ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ.‌ ಊಹಾಪೋಹಗಳಿಗೆ ಬೆಲೆಕೊಡಬೇಡಿ- ಸಿ.ಎಸ್.ಚಂದ್ರಭೂಪಾಲ್

Guarantee Scheme ಕರ್ನಾಟಕ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ,...