Tuesday, December 9, 2025
Tuesday, December 9, 2025

ಚಿಕ್ಕಮಗಳೂರು ನಗರದಲ್ಲಿ ಆಮ್ ಆದ್ಮಿ ಪಕ್ಷದ ಪಾದಯಾತ್ರೆ

Date:

ಚಿಕ್ಕಮಗಳೂರು: ದೇಶದಲ್ಲಿ ಭ್ರಷ್ಟಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರು ತೊಡಗಿ ಶ್ರೇಷ್ಟ ಭಾರತ ನಿರ್ಮಾಣಕ್ಕೆ ಮುಂದಾಗಬೇಕೆಂದು ಎಎಪಿ ಮುಖಂಡರುಗಳು ನಗರದ ಹನುಮಂತಪ್ಪ ಸರ್ಕಲ್‌ನಿಂದ ಆಜಾದ್‌ ಪಾರ್ಕ್ವರೆಗೆ ಪಾದಯಾತ್ರೆ ನಡೆಸಿ ಅಂಗಡಿ ಮುಂಗಟ್ಟುದಾರರಿಗೆ ಕರಪತ್ರ ಹಂಚುವ ಮೂಲಕ ಒತ್ತಾಯಿಸಿದರು.

ಪಾದಯಾತ್ರೆ ಮೆರವಣಿಗೆಯು ಆಜಾದ್‌ಪಾರ್ಕ್ ಸಮಾವೇಶಗೊಂಡು ನಂತರ ಮಾತನಾಡಿದ ಎಎಪಿ ಮುಖಂಡ ಡಾ. ಕೆ.ಸುಂದರಗೌಡ ಭ್ರಷ್ಟಚಾರ ಮುಕ್ತಗೊಳಿಸಲು ಸಾರ್ವಜನಿಕರು ಪಣ ತೊಡದಿದ್ದ ಪಕ್ಷದಲ್ಲಿ ನೆರೆಯ ದೇಶಗಳು ಮೂಲಭೂತ ಸೌಲಭ್ಯಗಳು ದೊರಕದೇ ದಿವಾಳಿಯಾದಂತೆ ಭಾರತವು ಮುಂದಿನ ದಿನಗಳಲ್ಲಿ ದಿವಾಳಿಯ ಹಂಚಿಗೆ ತಲುಪುವಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಭಾರತವು ಈಗಾಗಲೇ 150ಲಕ್ಷ ಕೋಟಿ ಹಾಗೂ ರಾಜ್ಯ 4.5 ಲಕ್ಷ ಕೋಟಿ ಸಾಲ ಮಾಡಿ ಆಡಳಿತ ನಡೆಸುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸರ್ಕಾರವು ಎಲ್ಲವು ಉಚಿತವಾಗಿ ನೀಡಿದರೆ ಮನುಷ್ಯ ದುಡಿಯದೇ ಸೋಮಾರಿಯಾಗುವ ಜೊತೆಗೆ ಭವಿಷ್ಯದ ದಿನಗಳಲ್ಲಿ ಭಿಕ್ಷಾಟನೆ ಮಾಡುವ ಸಂಭವ ಎದು ರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭ್ರಷ್ಟಚಾರ ಮುಕ್ತಗೊಳಿಸುವ ಸಲುವಾಗಿ ದೇಶ ಹಾಗೂ ರಾಜ್ಯದ ನಿವಾಸಿಗಳು ಈ ಬಾರಿ ಎಎಪಿ ಯನ್ನು ಬೆಂಬಲಿಸಿದ್ದಲ್ಲಿ ಪ್ರತಿ ಕುಟುಂಬಕ್ಕೂ ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ, ಆಶ್ರಯ ಹಾಗೂ ಶುದ್ಧಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಭಿಕ್ಷೆ ಸರ್ಕಾರ ರಚಿಸುವ ಸಲುವಾಗಿ ಸಾರ್ವಜನಿಕರು ಮತವನ್ನು ಓಟಿಗಾಗಿ ಮಾರಿ ಕೊಳ್ಳುವ ಬದಲು, ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಲ್ಲಿಟ್ಟುಕೊಂಡು ಎಎಪಿಯನ್ನು ಬೆಂಬಲಿಸಿದ್ದಲ್ಲಿ ಸದೃಢ ಸರ್ಕಾರ ರಚಿಸಿ ಸಾರ್ವಜನಿಕ ಸೇವೆಗೆ ಮುಂದಾಗುವುದು.

ಇದರೊಂದಿಗೆ ರಾಜ್ಯದಲ್ಲಿ ಭ್ರಷ್ಟಚಾರ ಮುಕ್ತವಾಗಿ ಕಾರ್ಯನಿರ್ವಹಿಸಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಈರೇಗೌಡ, ಹೇಮಂತ್, ರಂಗನಾಥ್, ಪರಮೇಶ್, ಜಮೀರ್ ಅಹ್ಮದ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

L.B. Colleges ಸಾಗರದ ಎಲ್ .ಬಿ‌.ಕಾಲೇಜಿನ ಮುಖ್ಯದ್ವಾರಕ್ಕೆ ಶಿಲಾನ್ಯಾಸ.

L.B. Colleges ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ನೆಡೆಸುತ್ತಿರುವ ಲಾಲ್ ಬಹದ್ದೂರ್ ಕಲಾ,...

Shimoga News ಮಕ್ಕಳು ಉತ್ಸಾಹದ ಚಿಲುಮೆಗಳು.ಉತ್ತಮ ಊಟ ಆಟ ಪಾಠದೊಂದಿಗೆ ಸಮಾಜದ ಅಭಿವೃದ್ಧಿ- ನ್ಯಾ.ಎಂ.ಎಸ್.ಸಂತೋಷ್

Shimoga News ಮಕ್ಕಳು ಉತ್ಸಾಹದ ಚಿಲುಮೆಗಳಾಗಿದ್ದು, ಉತ್ತಮ ಊಟ-ಆಟ-ಪಾಠದೊಂದಿಗೆ ಪ್ರಗತಿ ಹೊಂದಿ...

YADAV School Of Chess ಆನ್ ಲೈನ್ ಮೂಲಕಹಿಂದುಳಿದ & ಬಡಮಕ್ಕಳಿಗೆಒಂದು ತಿಂಗಳ ಚೆಸ್ ಕ್ರೀಡಾ ತರಬೇತಿ

YADAV School Of Chess ರಾಜೇಂದ್ರ ನಗರದಲ್ಲಿರುವ ಪ್ರತಿಷ್ಠಿತ ಯಾದವ ಸ್ಕೂಲ್...

Vallabhbhai Patel ಭ್ರಷ್ಟಾಚಾರವು ದೇಶದ ಆಂತರಿಕ ಶತ್ರು.- ಡಾ.ಹೆಚ್.ಬಿ.ಮಂಜುನಾಥ್

ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್ ಸ್ಮರಣೆಯಲ್ಲಿ ಹಿರಿಯ ಪತ್ರಕರ್ತ ಡಾ ಎಚ್...