ಚಿಕ್ಕಮಗಳೂರು: ತಾಲ್ಲೂಕಿನ ಧರಗುಣಿ ಗ್ರಾಮದಲ್ಲಿ ಜೈ ಭೀಮ್ ಯುವಕರ ಸಂಘದ ವತಿಯಿಂದ ಈಚೆಗೆ ನಡೆದ ವಾಲಿಬಾಲ್ ಕಪ್ ಪಂದ್ಯಾವಳಿಯಲ್ಲಿ ಮಲ್ಲಂದೂರು ತಂಡ ಪ್ರಥಮ, ಕದ್ರಿಮಿದ್ರಿ ತಂಡ ದ್ವಿತೀಯ, ವಳಗೇರನಹಳ್ಳಿ ತಂಡ ತೃತೀಯ ಹಾಗೂ ಭಕ್ತರಹಳ್ಳಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡು ಗೆಲುವನ್ನು ಮುಡಿಗೇರಿಸಿಕೊಂಡಿತು.
ಬಹುಮಾನ ವಿತರಿಸಿ ಮಾತನಾಡಿದ ಹಿರೇಕೊಳಲೆ ಗ್ರಾಮ ಪಂಚಾಯಿತಿ ಮಾಜಿ ವಿಶಾಲಾಕ್ಷಿ ಯಾವುದೇ ಕ್ರೀಡೆಗಳಲ್ಲಾಗಲೀ ಸೋಲು, ಗೆಲುವು ಸರ್ವೆ ಸಾಮಾನ್ಯವಾಗಿರುತ್ತದೆ.
ಕ್ರೀಡಾಪಟುಗಳು ಎಂದಿಗೂ ಎದೆಗುದದೇ ಸೋಲನ್ನೇ ಮುಂದಿನ ದಿನಗಳಲ್ಲಿ ಗೆಲುವಿನ ಮೆಟ್ಟಿಲುಗಳನ್ನಾಗಿ ರೂಪಿಸಿ ಕೊಂಡು ಯಶಸ್ಸಿನತ್ತ ಮುನ್ನಗ್ಗಬೇಕು ಎಂದು ತಿಳಿಸಿದರು.
ವಾಲಿಬಾಲ್ ಪಂದ್ಯಾವಳಿಯು ಆರೋಗ್ಯವೃದ್ದಿಯ ಉತ್ತಮ ಕ್ರೀಡೆ. ಇಂತಹ ಕ್ರೀಡೆಗಳಲ್ಲಿ ಅತಿಹೆಚ್ಚು ಯುವಕರು ಭಾಗವಹಿಸುವುದರಿಂದ ಆರೋಗ್ಯಯುತ ಸದೃಢರಾಗಲು ಸಾಧ್ಯ. ಕ್ರೀಡೆಗಳು ಮನುಷ್ಯನಿಗೆ ಮಾನಸಿಕ ಮತ್ತು ಆರೋಗ್ಯಪೂರ್ಣವಾಗಿ ಬದುಕಲು ಸಹಾಯ ಮಾಡುವ ಸಾಧನ ಎಂದು ಹೇಳಿದರು.
ಇದೇ ವೇಳೆ ಧರಗುಣಿ ಗ್ರಾಮದ ಹಿರಿಯರಿಗೆ, ಶಾಲೆ ಅಡುಗೆಯವರು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಹಿರಿಯರು ಮತ್ತು ವೀರಭದ್ರೇಶ್ವರ ಬಸ್ ಮಾಲೀಕರಿಗೆ ಚಾಲಕರು, ನಿರ್ವಾಹಕರು ಸೇರಿದಂತೆ ವಿವಿಧ ಗಣ್ಯರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಂದ್ಯಾವಳಿ ಆಯೋಜಕರಾದ ಸತೀಶ್, ರವಿ, ವಿಜಯ್, ಉಮೇಶ್ ಸಂತೋಷ್, ಮದು, ಕಿರಣ್, ಮಹೇಶ್, ಹರೀಶ್, ಪರಮೇಶ್, ಲೋಹಿತ್, ಚೇತನ್, ಶ್ರೀಕಾಂತ್, ಯುವಕರ ಸಂಘದ ಅರುಣ್ಕುಮಾರ್, ಗ್ರಾಮದ ಹಿರಿಯ ಪುಟ್ಟಸ್ವಾಮಿ, ಪಂಚಾಯಿತಿ ಬಿಲ್ ಕಲೆಕ್ಟರ್ ಚಂದ್ರಶೇಖರ್, ಹಂಪಾಪುರ ಮಂಜೇಗೌಡ, ಪ್ರಕಾಶ್, ಸುರೇಶ್, ಉಮೇಶ್ ಕುಮಾರ್, ಧರಗುಣಿ ಸುರೇಶ್, ಶಿವಕುಮಾರ್, ಮಂಜುನಾಥ್.ಕೆ.ಆರ್ ಮತ್ತಿತರರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
