ಜನಪ್ರಿಯ ಚಿತ್ರನಟ ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಿಹಿ ಸುದ್ದಿ.ಇದೇ ಜನವರಿ 29 ರಂದು ಬಹುನಿರೀಕ್ಷಿತ ಚಿತ್ರನಟನ ಸ್ಮಾರಕ ಕಣ್ಣೆದುರು ನಿಲ್ಲಲಿದೆ.
ಡಾ.ರಾಜ್ ನಂತರ ಅಪಾರ ಅಭಿಮಾನಿಗಳನ್ನ ಪಡೆದಿದ್ದ ಸಾಹಸ ಸಿಂಹ ವಿಷ್ಣುವರ್ಧನ್ ಅವರ ನಿಧನಾನಂತರ ಸ್ಮಾರಕ ನಿರ್ಮಾಣ ನೆನೆಗುದಿಗೆ ಬಿದ್ದಿತ್ತು.ಹದಿಮೂರು ವರ್ಷಗಳ ದೀರ್ಘ ಹೋರಾಟ ಈಗ ನನಸಾಗಿದೆ.
ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ರಸ್ತೆಯಲ್ಲಿ ಹಾಲಾಳು ಗ್ರಾಮದಲ್ಲಿ ಸ್ಮಾರಕ ತಲೆಯೆತ್ತಿದೆ.
ಆಗಿನ ಮುಖ್ಉಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಸ್ಮಾರಕಕ್ಕೆ ಭೂಮಿಪೂಜೆಯನ್ನ 2020 ರ ಸೆ 15. ರಂದು ನೆರವೇರಿಸಿದ್ದರು.
ಸ್ಮಾರಕದ ಆವರಣದಲ್ಲಿ ವಿಷ್ಣುವರ್ಧನ್ ಅವರ ನಿಲುವಿನ ಶಿಲಾ ಪ್ರತಿಮೆ,ಸಭಾಂಗಣ,ಥಿಯೇಟರ್
ಕಲಾವಿದರ ಕೊಠಡಿ,
ಇತ್ಯಾದಿ ವಿನ್ಯಾಸನ್ನೊಳಗೊಂಡಿದೆ.
ಜನವರಿ 29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು.
ದೀರ್ಘತಪಸ್ಸಿನ ಫಲವೆಂಬಂತೆ ವಿಷ್ಣುವರ್ಧನ್ ಅಳಿಯ. ನಟ ಅನಿರುಧ್ ಸಂತಸ ವ್ಯಕ್ತಪಡಿಸಿದ್ದಾರೆ.