Sunday, May 17, 2026
Sunday, May 17, 2026

ರಾಹುಲ್ ತಾಳ್ಮೆ ಬ್ಯಾಟಿಂಗ್ ಲಂಕನ್ನರ ವಿರುದ್ಧ ಏಕದಿನ ಸರಣಿಗೆದ್ದ ಭಾರತ

Date:

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯವನ್ನು ರಾಹುಲ್ ಅವಿಸ್ಮರಣೀಯವನ್ನಾಗಿಸಿದ್ದಾರೆ. ಸಹಜವಾಗಿ ಆರಂಭಿಕ ಬ್ಯಾಟರ್ ಆಗಿರುವ ರಾಹುಲ್ ಎರಡನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದಿದ್ದರು.

ಆಟದ ಕೊನೆಯ ತನಕ ಅವರು ತೋರಿದ ಸಹನೆ, ಜವಾಬ್ದಾರಿ ಮರೆಯುವಂತಿಲ್ಲ. ರಾಹುಲ್ ಗಳಿಸಿದ ಅಜೇಯ 64 ರನ್ ಗಳಲ್ಲಿ 06 ಬೌಂಡರಿಗಳಿದ್ದವು.

ರೋಹಿತ್ ಶರ್ಮಾ 17, ಗಿಲ್ 21, ಕೊಹ್ಲಿ 4, ಶ್ರೇಯಸ್ 28 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. 86 ರನ್ ಗಳಿಗೆ ನಾಲ್ಕು ವಿಕೆಟ್ ಕಬಳಿಸಿದ ಶ್ರೀಲಂಕಾ ಗೆ ಈ ಪಂದ್ಯ ಬಾಯಿಗೆ ಬಂದ ತುತ್ತಾಗಿದ್ದಂತೆ ಕಂಡುಬಂದಿತು.

ಆದರೆ ರಾಹುಲ್ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ರನ್ ಗತಿ ಹೆಚ್ಚಿಸಿದರು .53 ಬಾಲ್ ಗಳಲ್ಲಿ 35 ರನ್ ಗಳಿಸಿದ ಹಾರ್ದಿಕ್ ಬ್ಯಾಟಿಂಗ್ ಜಯದತ್ತ ಶೀಘ್ರ ಮುಖ ಮಾಡಿತ್ತು.

ಆದರೆ ಕರುಣಾ ರತ್ನೆ ಅವರ ಬೌಲಿಂಗ್ ನಲ್ಲಿ ಕಾಟ್ ಬಿಹೈಂಡ್ ಆದರು. ಮತ್ತೆ ಆಟಕ್ಕೆ ಮಂಕು ಕವಿಯಬಹುದೇನೋ ಅನ್ನಿಸಿತ್ತು. ಅಕ್ಸರ್ ಪಟೇಲ್ ಅವರು 21 ಬಾಲ್ ಗಳಲ್ಲಿ 21 ರನ್ ಸೇರಿಸಿದರು. ಬ್ಯಾಟಿಂಗ್ ಅದೇ ಬಿಸಿಯಲ್ಲಿತ್ತು.

ಅವರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಡಿಸಿಲ್ವ ಅವರ ಬೌಲಿಂಗ್ ನಲ್ಲಿ ಔಟಾದರು. 191 ರನ್ ಗೆ 6 ವಿಕೆಟ್ ಸ್ಕೋರ್ ಆಗಿತ್ತು.
ಜಯ ಇನ್ನೇನು ಸಮೀಪವಿತ್ತು. ಕುಲದೀಪ್ ಯಾದವ್ ತಮ್ಮ ಬ್ಯಾಟಿಂಗ್ ಸಾಥ್ ನೀಡಿದರು. ಜಯದ ಬೌಂಡರಿ ಬಾರಿಸಿದರು.

ಅಂತೂ ರಾಹುಲ್ ಆತ್ಮವಿಶ್ವಾಸ ಕುದುರಿಸಿಕೊಂಡು ಶ್ರೀಲಂಕಾ ತಂಡದಿಂದ ಜಯ ಕಸಿದುಕೊಂಡರು.

ಶ್ರೀಲಂಕಾ -215 (39-4)
ಭಾರತ-219-06 (43.2)

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಶಿವಮೊಗ್ಗ ಮಿಳಘಟ್ಟದಲ್ಲಿ ಮನೆಗೆ ಬೆಂಕಿ.ಶಾಸಕ ಚನ್ನಬಸಪ್ಪ‌ ಭೇಟಿ- ನೊಂದವರಿಗೆ ಸಾಂತ್ವನ.

S.N. Channabasappa ನಗರದ ಮಿಳಘಟ್ಟದ 1ನೇ ಕ್ರಾಸ್‌ನಲ್ಲಿರುವ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ...

DC Shivamogga ತ್ಯಾಜ್ಯ ಉತ್ಪಾದನೆ ನಿಯಂತ್ರಿಸಿ, ವಿಲೇವಾರಿಗೆ ಅಧಿಕಾರಿಗಳು ವಿಶೇಷ ಗಮನ ಹರಿಸಿ, ಸಾರ್ವಜನಿಕರೂ ಸಹಕರಿಸಿ- ಪ್ರಭುಲಿಂಗ ಕವಳಿಕಟ್ಟಿ

DC Shivamogga ನಗರೀಕರಣ ಮತ್ತು ಕೈಗಾರಿಕೀಕರಣದಿಂದಾಗಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯದ ಪ್ರಮಾಣ ದಿನೇದಿನೇ...

MESCOM ಮೇ19. ಶಿವಮೊಗ್ಗದ ಚಿಕ್ಕಲ್ಲು,ಗುರುಪುರ, ಪುರಲೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಎಂ.ಆರ್.ಎಸ್. 110/11 ಕೆ.ವಿ. ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು,...