Wednesday, October 2, 2024
Wednesday, October 2, 2024

ಎಂ-ಸ್ಯಾಂಡ್ ಬಂತು : ನದಿ ಮರಳಿಗೆ ಬೆಲೆ ಇಲ್ಲ

Date:

ರಾಜ್ಯದಲ್ಲಿ ಮರಳಿನ ಬೇಡಿಕೆ ಮತ್ತು ಪೂರೈಕೆ ವ್ಯವಸ್ಥೆಗಳೇ ಕೃತಕ ಅಭಾವ ಸೃಷ್ಟಿಸಿ ವ್ಯವಹಾರ ಕುದುರಿಸುವ ಕಾರಣದಿಂದ ದರ ಗಗನಕ್ಕೇರಿದೆ. ಈ ವ್ಯಾಪಾರ ದಂದೆಯಾಗಿ ಮಾರ್ಪಟ್ಟಿದೆ. ನಿರ್ಮಾಣ ವಲಯ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ನದಿ ಮರಳಿನಿಂದ ಬೇಡಿಕೆ ನೀಗಿಸಲು ಎಂ-ಸ್ಯಾಂಡ್ ಪರ್ಯಾಯ ಆಯ್ಕೆಯಾಗಿದೆ. ನಿರ್ಮಾಣ ವಲಯ ಈಗ ನದಿ ಮರಳು ಆಶ್ರಯಿಸಿಲ್ಲ ಎಂದು ಭಾರತೀಯ ಬಿಲ್ಡರ್ ಗಳ ಒಕ್ಕೂಟದ ಅಧ್ಯಕ್ಷರಾಗಿರುವ ಜಿ.ಎಂ.ರವೀಂದ್ರ ಅವರು ತಿಳಿಸಿದ್ದಾರೆ.
2018ರಲ್ಲಿ 11 ಕೋಟಿ ರೂಪಾಯಿ ಹೂಡಿಕೆ ಮಾಡಿ ಮಲೇಷಿಯಾದಿಂದ 56,400 ಟನ್ ಮರಳನ್ನು ನವ ಮಂಗಳೂರು ಬಂದರಿಗೆ ತರಿಸಿದ್ದೆವು. ಟನ್ ಗೆ 2,200ರೂ. ವೆಚ್ಚವಾಗಿದೆ. ಬೇಡಿಕೆ ಇಲ್ಲದ್ದರಿಂದ ಟನ್ ಗೆ 1,400ಕ್ಕೆ ಮಾರಿದೆವು. ಅಷ್ಟೂ ಮರಳು ಖಾಲಿ ಮಾಡಲು ಎರಡು ವರ್ಷ ಬೇಕಾಯಿತು. 5ಕೋಟಿ ರೂ. ನಷ್ಟ ಆಗಿದೆ ಎಂದು ಮರಳು ಆಮದು ಮಾಡಿದ್ದ ಚೆನ್ನೈನ ಇಂಟಿಗ್ರೇಟೆಡ್ ಸರ್ವಿಸ್ ಪಾಯಿಂಟ್ ಕಂಪನಿಯ ನಿರ್ದೇಶಕರೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಗುರುತಿಸಿದ ನೈಸರ್ಗಿಕ ಮರುಳು ನಿಕ್ಷೇಪಗಳ ಪೈಕಿ 251ನ್ನು ಹರಾಜು ಮಾಡಲಾಗಿದೆ. ಉಳಿದ 102 ನಿಕ್ಷೇಪಗಳನ್ನು ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ (ಎಚ್ ಜಿಎಂಲ್) ಮತ್ತು ಕರ್ನಾಟಕ ರಾಜ್ಯ ಖನಿಜ ನಿಗಮಕ್ಕೆ ವಹಿಸಿ ಗ್ರಾಹಕರಿಗೆ ಪೂರೈಸಲು ಹೊಸ ಮರಳು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.
ಮರಳು ಗಣಿಗಾರಿಕೆಗೆ ಗುತ್ತಿಗೆ ಪಡೆದ ಸಂಸ್ಥೆಗಳ ಅವಧಿ ಮುಗಿದ ಬಳಿಕ ಆ ನಿಕ್ಷೇಪಗಳಲ್ಲಿ ಮರಳು ಗಣಿಗಾರಿಕೆ ಮತ್ತು ಸಾಗಣೆ ಹೊಣೆಯನ್ನು ಈ ಸಂಸ್ಥೆಗಳೇ ವಹಿಸಿಕೊಳ್ಳಲಿದೆ ಎಂಬ ಮಾಹಿತಿ ದೊರೆತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...

CM Siddharamaih ಸಿದ್ಧರಾಮಯ್ಯ ರಾಜಿನಾಮೆ ಬೇಡ.ಬೆಂಬಲಿಸಿ ಜನಜಾಥಾ-‘ಅಹಿಂದ’ ಮಹೇಶ್

CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಬೇಡ....