Thursday, February 5, 2026
Thursday, February 5, 2026

ಸಾಗರದಲ್ಲಿ ಸ್ವಸಹಾಯ ಸಂಘದ ಮಹಿಳೆಯರಿಗೆ ಪೈನಾಪಲ್ ಉತ್ಪನ್ನ ತಯಾರಿಕೆ ತರಬೇತಿ

Date:

ಶಿವಮೊಗ್ಗ: ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಮತ್ತು ಕೃಷಿ ಇಲಾಖೆ, ಸಾಗರದ ಆತ್ಮ ಯೋಜನೆಯಡಿ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಪೈನಾಪಲ್ ಹಣ್ಣಿನ ಜಾಮ್ ಮತ್ತು ಕ್ಯಾಂಡಿ ತಯಾರಿಕೆಯ ಬಗ್ಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಸ್ವಸಹಾಯ ಸಂಘದ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿತ್ತು.

ತರಬೇತಿಯನ್ನು ಸಾಗರ ಸಹಾಯಕ ಕೃಷಿ ನಿರ್ದೇಶಕ ಕಾಶೀನಾಥ್ ವೈ. ಒಂಟೆಕೋರ್ ಉದ್ಘಾಟಿಸಿದರು.

ತರಬೇತಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಗೃಹ ವಿಜ್ಞಾನಿ ಡಾ. ಜ್ಯೋತಿ ಎಂ. ರಾಠೋಡ್ ಪೈನಾಪಲ್ ಹಣ್ಣಿನ ಪೋಷಕಾಂಶಗಳು ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಶಿವಮೊಗ್ಗದ ಆರ್ಯ ಯೋಜನೆಯ ಹಿರಿಯ ಸಹಾಯಕ ಸಂಶೋಧಕಿ ಡಾ. ಪೂಜಾ. ಜಿ. ಕೆ., ಸಾಗರ ತಾಲೂಕಿನ ಕೃಷಿ ಇಲಾಖೆಯ ವಿನಾಯಕ್ ರಾವ್, ಪ್ರದೀಪ್ ಕುಮಾರ್, ಪಾಂಡುರಂಗ ನಾಗರತ್ನ ಹಾಗೂ ಜೋಗದಸಿರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಉಮಾದೇವಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...