ಚಿಕ್ಕಮಗಳೂರು : ವಿಶ್ಚಕರ್ಮ ಅಮರಶಿಲ್ಪಿ ಜಕಣಚಾರಿ ದಿನಾಚರಣೆ ಹಾಗೂ ಹೊಸವರ್ಷದ ಹಿನ್ನೆಲೆಯಲ್ಲಿ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ಜಿಲ್ಲಾ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಭಾ ವತಿಯಿಂದ ಮಕ್ಕಳಿಗೆ ಭಾನುವಾರ ರಾತ್ರಿ ವಿಶೇಷ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಸಭಾದ ಅಧ್ಯಕ್ಷ ಉಮಾಶಂಕರ್ ಮಾತನಾಡಿ ಮನುಷ್ಯ ಜೀವನದಲ್ಲಿ ಎಷ್ಟೇ ಸಂಪಾದಿಸಿದರೂ ಸಾವಿನ ಜೊತೆಗೆ ಏನನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಆದರೆ ಇರುವಷ್ಟು ದಿನಗಳಲ್ಲಿ ಮಾಡಿರುವ ಮಾನವೀಯ ಸೇವೆಗಳು ಶಾಶ್ವತ ಉಳಿಯುವ ನಿಟ್ಟಿನಲ್ಲಿ ಸಭಾದ ವತಿಯಿಂದ ಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸಿ ಅಳಿಲು ಸೇವೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಉಮಾಶಂಕರ್, ಉಪಾಧ್ಯಕ್ಷ ಎಂ.ಜೆ.ಚಂದ್ರಶೇಖರ್, ಕಾರ್ಯದರ್ಶಿ ಬಿ.ಟಿ.ರತೀಶ್, ಸಹ ಕಾರ್ಯದರ್ಶಿ ಎಲ್.ಪಿ.ಪ್ರಸನ್ನ, ಖಜಾಂಚಿ ಚಂದ್ರಶೇಖರ್, ನಿರ್ದೇಶಕರಾದ ಸಂಧ್ಯಾರಾಣಿ, ಕೆ.ರಾಮಪ್ಪಚಾರ್, ಜಗದೀಶ್ ಕುಲಬಾಂಧವರಾದ ಸುಮಾ, ರಶ್ಮಿ, ಯಶೋಧ, ಪೂರ್ವಾಚಾರ್, ಗೋಪಾಲಚಾರ್, ಶಶಿಧರ್, ನಾಗಶೇಖರ್, ಶಂಕರ್, ನಾಗಭೂಷಣ್ ಮತ್ತಿತರರು ಉಪಸ್ಥಿತರಿದ್ದರು.