ಭಾರತೀಯ ಮೂಲದ ಸಿಂಗಾಪುರ ರೋಟರಿ ಕ್ಲಬ್ ಯುವ ಸದಸ್ಯ ಮುಕುಂದನ್ ಅವರು ಶಿವಮೊಗ್ಗ ನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ವೈಶಿಷ್ಟ್ಯತೆಗಳ ಬಗ್ಗೆ ಮಾತನಾಡಿದರು.
ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿಶ್ವದಾದ್ಯಂತ ಸದಸ್ಯತ್ವ ಹೊಂದಿರುವುದು ಪ್ರತಿಷ್ಠೆಯ ಸಂಗತಿಯಾಗಿದೆ. ವೃತ್ತಿ ಜೀವನದ ಜತೆಯಲ್ಲಿ ಸೇವೆಯು ಪ್ರಮುಖ ಎಂಬುದನ್ನು ಅರಿವು ಮೂಡಿಸುತ್ತದೆ. ಉಳಿತಾಯದ ಹಣದಲ್ಲಿ ಸ್ವಲ್ಪ ಹಣವನ್ನು ಸಮಾಜದ ಒಳಿತಿಗೆ ಹಾಗೂ ಮಾನವೀಯ ಸೇವೆಗೆ ಸಂಸ್ಥೆ ಶ್ರಮಿಸುತ್ತಿದೆ. 13 ಲಕ್ಷ ಸ್ವಯಂ ಸೇವಾ ಸದಸ್ಯರನ್ನು ಹೊಂದಿರುವ ಏಕೈಕ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಎಂದು ಮುಕುಂದನ್ ಹೇಳಿದರು.
ಸಿಂಗಾಪುರದಲ್ಲಿ ರೋಟರಿ ಸಂಸ್ಥೆ ಸದಸ್ಯರಾಗಿ ಯುವಕರಿಗೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ 28 ಸೇವಾ ಯೋಜನೆಯನ್ನು ಮಾಡಿದ ಕೀರ್ತಿ ಇವರದ್ದಾಗಿದೆ. ಭಾರತೀಯ ಮೂಲದವರಾದ ಮುಕುಂದನ್ ಅವರು ಶಿವಮೊಗ್ಗದಲ್ಲಿ ರೋಟರಿ ಪೂರ್ವದ ಸದಸ್ಯರೊಂದಿಗೆ ಸೇರಿ ಗ್ಲೋಬಲ್ ಗ್ರಾಂಟ್ ಮೂಲಕ ಉತ್ತಮ ಸಮಾಜ ಮುಖಿ ಸೇವೆ ಮಾಡಲು ಉತ್ಸುಕರಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಸದಸ್ಯರ ಪ್ರೀತಿ, ವಿಶ್ವಾಸ, ಸ್ನೇಹ ಸಂಬಂಧವನ್ನು ಹಂಚಿಕೊಳ್ಳವ ಸಂಕೇತವಾಗಿ ಕ್ಲಬ್ ಧ್ವಜ ವಿನಿಮಯ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ರೋಟರಿ ಮಾಜಿ ಗವರ್ನರ್ ಎಚ್.ಎಲ್. ರವಿ ಅವರು ಅತಿಥಿಗಳ ಪರಿಚಯ ಮಾಡಿಕೊಡುವುದರೊಂದಿಗೆ ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ರೋಟರಿ ಜಿಲ್ಲೆಯ ವಿವರ ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಕ್ಲಬ್ ಕಾರ್ಯದರ್ಶಿ ಕುಮಾರಸ್ವಾಮಿ, ಡಾ. ಪರಮೇಶ್ವರ ಶಿಗ್ಗಾಂ, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ರವೀಂದ್ರನಾಥ ಐತಾಳ, ಓಂ ಪ್ರಕಾಶ್ ತೇಲಕರ್ ಮತ್ತು ಮಾಜಿ ಅಧ್ಯಕ್ಷ ಕಡಿದಾಳ ಗೋಪಾಲ ಮತ್ತು ಶ್ರೀಮತಿ ನಾಗವೇಣಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶಿವಮೊಗ್ಗಕ್ಕೆ ಭೇಟಿ ನೀಡಿದ ಸಿಂಗಾಪೂರ್ ನ ರೋಟರಿ ಯುವ ಪ್ರತಿನಿಧಿ
Date: