ಇಲ್ಲಿಯವರೆಗೂ ತಾಳ್ಮೆಯಿಂದಿದ್ದ ಶಾಸಕ ಈಶ್ವರಪ್ಪನವರೀಗ ತಮ್ಮ ಪಕ್ಷದವರಿಗೆ ಮನದಾಳದ ನೋವು ಮುಟ್ಟಿಸಿದ್ದಾರೆ.
ಬೆಂಗಳೂರಿನಲ್ಲಿ ವಿಶೇಷ ಪತ್ರಿಕಾಗೋಷ್ಢಿಯಲ್ಲಿ
ಈ ಪ್ರತಿಕ್ರಿಯೆ ಅ ವರಿಂದ ವ್ಯಕ್ತವಾಗಿದೆ.
ಶೇಕಡ 4o ರ ಭ್ರಷ್ಟಾಚಾರ ಹಗರಣದಲ್ಲಿ ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ಸಿಕ್ಕಿದೆ.
ಇಷ್ಟು ತಿಂಗಳಾದರೂ ತಮ್ಮನ್ನ ಮತ್ತೆ ಸಂಪುಟಕ್ಕೆ ಸೇರ್ಪಡೆ ಗೊಳಿಸದೇ ಇರುವ ಬಗ್ಗೆ ಅವರು ಅಸಮಾಧಾನವನ್ನ ಹೊರಹಾಕಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಗೈರುಹಾಜರಾಗಲು ಇದೂ ಪ್ರಮುಖ ಕಾರಣವೆನ್ನಬಹುದು.
ಸಭಾಧ್ಯಕ್ಷರಿಗೆ ಸಕಾರಣ ತಿಳಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.
ಪ್ರಭಾವೀ ಸಮುದಾಯದ ಮುಖಂಡರಾಗಿ ಅವರು ವ್ಯಕ್ತಪಡಿಸಿದ
ಅತೃಪ್ತಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅರ್ಥವಾಗಿದೆ. ತಕ್ಷಣ ಸೀಎಂ ಈಶ್ವರಪ್ಪನವರಿಗೆ ಸೂಕ್ತ ಸಂದೇಶ ಕಳಿಸಿದ್ದಾರೆ. ತೃಪ್ತಗೊಂಡ ಈಶ್ವರಪ್ಪನವರು
ಸಂಪುಟಕ್ಕೆ ಸೇರ್ಪಡೆಮಾಡಿಕೊಳ್ಳಲು ಸೀಎಂ ಭರವಸೆ
ನೀಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.