ಹಿಮಾಚಲ ಪ್ರದೇಶದಲ್ಲಿ ಸುಖ್ವಿಂದರ್ ಸಿಂಗ್ ಸುಖ್ಖು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇಲ್ಲಿಯವರೆಗೂ ಹೆಸರಾಂತ ರಾಜಕಾರಣಿಗಳನ್ನೇ ಕಾಂಗ್ರೆಸ್ ಆಶ್ರಯಿಸುತ್ತಿತ್ತು.ಈಗ ಈ ದೊಡ್ಡ ಪರಿವರ್ತನೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ವೀರಭದ್ರ ಸಿಂಗ್ ಹಿಮಾಚಲ ಪ್ರದೇಶದ ಕಾಂಗ್ರೆಸ್ ಕಟ್ಟಾಳು.
ಮುಖ್ಯಮಂತ್ರಿಯಾಗಿ ಸುದೀರ್ಘ
ಆಳಿದವರು. ಕಾಂಗ್ರೆಸ್ ಅವರ ಜನಪ್ರಿಯತೆಯ ನೆರಳಲ್ಲೇ ಇತ್ತು. ಈಗ ಅವರ ಮರಣಾನಂತರ ಆಪ್ತರೇ ಮುಖ್ಯಮಂತ್ರಿಗಳಾಗಲು ಅರ್ಹರು ಎಂಬ ಸಾರ್ವಜನಿಕ ಅಭಿಪ್ರಾಯವಿದೆ.ಇದೆಲ್ಲದರ ನಡುವೆ
ರಾಜ್ಯ ಕಾಂಗ್ರೆಸ್ ಅಧ್ಯಕ್ಷೆಯಾಗಿ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಅವರ ಬಗ್ಗೆ ಬಹಳ ಬೆಂಬಲ,ಲಾಬಿ ವ್ಯಕ್ತವಾಗಿತ್ತು.
ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ
ಸುಖ್ಖು ಆಯ್ಕೆ ಅಚ್ಚರಿಯೇ ಆಗಿದೆ.
ನಾಲ್ಕು ಬಾರಿ ಆಯ್ಕೆಯಾಗಿರುವ ಸುಖ್ಖು ಅವರಿಗೆ ಸಂತೋಷವೇನೋ ಆಗಿದೆ.ಆದರೆ ಒಳಗೇ ಅತೃಪ್ತಿ ಕಿಡಿಯಾಡುತ್ತಿದ್ದರೆ ಅವರ ಗಾದಿಯೂ ಮುಳ್ಳಿನ ಕುರ್ಚಿಯಾಗಬಹುದು.
ಮಾಧ್ಯಮಗಳಲ್ಲಿ ಈ ಬಗ್ಗೆ ಊಹಾಪೋಹಗಳು ಬಿಂಬಿತವಾಗಿವೆ.
ಯುವ ಕಾಂಗ್ರೆಸ್ ನಾಯಕರಾಗಿದಾಗಿನಿಂದಲೂ ವೀರಭದ್ರ ಸಿಂಗ್ ಅವರ ನಡೆಯನ್ನ
ಮೆದುವಾಗಿಯೇ ವಿರೋಧಿಸುತ್ತಾ ಬಂದ ಸುಖು ಈಗ ಅಷ್ಟೇ ಕಸಿವಿಸಿಯಿಂದ ಕಾಲನೂಕ ಬೇಕೇನೋ. ಏಕೆಂದರೆ ಸದ್ಯ ಮೂಖ್ಯಮಂತ್ರಗಳು ಠಾಕೂರ್ ಸಮುದಾಯದವರು.ಉಪ ಮುಖ್ಯಮಂತ್ರಿ ಅಗ್ನಿಹೋತ್ರಿ ಅವರು ಬ್ರಾಹ್ಮಣರು.ಆದರೆ ಕಾಂಗ್ರೆಸ್ ಗೆ ಮತಚಾಲಾಯಿಸಿರುವ ಸಮುದಾಯದ ಸಂಖ್ಯೆಯಲ್ಲಿ ದಲಿತರ ಮತಗಳೇ ಅಧಿಕವಿವೆ ಎಂದು ಸಮೀಕ್ಷೆ ವರದಿಯಿದೆ.
ಮಂತ್ರಿ ಮಂಡಲದಲ್ಲಿ ಈ ಬಗ್ಗೆ ದಲಿತರಿಗೂ ಸ್ಥಾನ ಕೊಡುವ ಬಗ್ಗೆ
ಆದ್ಯತೆ ನೀಡಬೇಕಿದೆ.
ರಾಹುಲ್ ಅವರಿಗೆ ಸುಖ್ಖು ಆಪ್ತರೇನೋ ಹೌದು.ಈ ಅಂಶವನ್ನ ವೀರಭದ್ರ ಸಿಂಗ್ ಆಪ್ತ ವಲಯ
ಪರವಾಗಿ ಸ್ವೀಕರಿಸುವುದು ಕಷ್ಟಸಾಧ್ಯ. ಮುಕೇಶ್ ಅಗ್ನಿಹೋತ್ರಿ ಮೂಲತಃ ಪತ್ರಕರ್ತರಾಗಿದ್ದರು. ಅವರನ್ನ ರಾಜಕೀಯಕ್ಕೆ ತಂದವರೇ ವೀರಭದ್ರಸಿಂಗ್. ಆದರೆ ಅದೇ ವೀರಭದ್ರಸಿಂಗ್ ಅವರು ಈ ತರಹೆಯ ಕೆಲಸಗಳಿಂದ ಪ್ರಸಿದ್ಧಿಪಡೆಲಿಲ್ಲ.ಏಕೆಂದರೆ ಅವರ ಮೇಲೆ ಬಂದ ಆರೋಪವೆಂದರೆ ಎರಡನೇ ಸಾಲಿನಲ್ಲಿ ಮತ್ತೆ ನಾಯಕರನ್ನ ಅವರು ಬೆಳೆಸಲಿಲ್ಲ.
ಮೂರು ದಶಕಗಳ ಪ್ರಭಾವ ಬೀರಿದ್ದ ವೀರಭದ್ರ ಸಿಂಗ್ ಅವರ ಪ್ರಭಾವಳಿಯಿಂದ ಹೊರಬಂದ ಈಗಿನ ಕಾಂಗ್ರೆಸ್ ನಾಯಕತ್ವ ಹೇಗೆ ಯಶಸ್ವಿಯಾಗುತ್ತದೆ ಕಾದು ನೋಡಬೇಕಿದೆ. ಏಕೆಂದರೆ ಮಂತ್ರಿ ಮಂಡಲ ವಿಸ್ತರಣೆಯಾಗಬೇಕಿದೆ.
ವೀರಭದ್ರ ಸಿಂಗ್ ಅವರ ಪತ್ರ ವಿಕ್ರಮಾದಿತ್ಯ ಸಿಂಗ್ ಶಾಸಕರಾಗಿ ಗೆದ್ದಿದ್ದಾರೆ.ಅಷ್ಟೇ ಅಲ್ಲ ದಿ.ವೀರಭದ್ರ ಸಿಂಗ್ ಅವರ ಪತ್ನಿಯೂ ಗೆದ್ದುಬಂದಿದ್ದಾರೆ. ಮತ್ರಿಗಳ ಸ್ಥಾನ ಹಂಚಿಕೆ ಈಗ ಸಿಕ್ಕುಸಿಕ್ಕಾಗುತ್ತಿದೆ.
ಓರ್ವ ಬಸ್ ಚಾಲಕರ ಪುತ್ರ ಎಂಬ ಸಾಮಾನ್ಯ ಹಿನ್ನೆಲೆ ಮುಖ್ಯಮಂತ್ರಿ ಸುಖ್ಖು ಅವರಿಗಿದೆ. ಆದರೆ ಈಗ ಅವರೇ ಚಾಲಕರಾಗಿರುವ ಆಡಳಿತದ ಬಸ್ ಗೆ ಸ್ಟಿಯರಿಂಗ್ ಹಿಡಿಯಲು
ಅನೇಕ ಕೈಗಳು ಹಾತೊರೆಯುತ್ತಿವೆ
ಎಂಬುದಂತೂ ಸತ್ಯ.