Wednesday, October 2, 2024
Wednesday, October 2, 2024

ನಷ್ಟದ ಸ್ಥಿತಿಯಿಂದ ಬ್ಯಾಂಕನ್ನ ಪ್ರಗತಿಯತ್ತ ಒಯ್ಯಬೇಕು-ಎಂ.ಕೆ.ದ್ಯಾವಪ್ಪ

Date:

ನಷ್ಟದಲ್ಲಿದ್ದ ಬ್ಯಾಂಕನ್ನು ಪ್ರಗತಿಯತ್ತ ಕೊಂಡೊಯ್ಯಬೇಕು. ಸರ್ಕಾರದಿಂದ ಮಂಜೂರಾದ 1.5 ಕೋಟಿ ಹಣವನ್ನು ರೈತರಿಗೆ ಶೇ.3ರ ದರದಲ್ಲಿ ಸಾಲ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ವಿರುದ್ಧ ಮಾಜಿ ಅಧ್ಯಕ್ಷ ಪಿ. ಎನ್. ಸುಬ್ರಾವ್ ಷಡ್ಯಂತರ ರೂಪಿಸಿ ಬ್ಯಾಂಕಿಗೆ ನಷ್ಟ ಉಂಟು ಮಾಡಿದ್ದಲ್ಲದೆ, ರೈತರಿಗೆ ಸಕಾಲಕ್ಕೆ ಸಾಲ ಸಿಗದಂತೆ ಮಾಡಿದ್ದಾರೆ ಎಂದು ಸಾಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಂ.ಕೆ. ದ್ಯಾವಪ್ಪ ಅವರು ಹೇಳಿದರು.

ಸಾಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬ್ಯಾಂಕಿಗೆ ಅಧ್ಯಕ್ಷರಾಗಿದ್ದರು. ಆದರೆ ಈ ಹಿಂದೆ ಸತತ ಮೂರು ಬಾರಿ ರಾಜ್ಯ ಬ್ಯಾಂಕಿನಿಂದ ರೈತರ ಕೃಷಿ ಅಭಿವೃದ್ಧಿಗೆ ಮಂಜೂರಾದ ಹಣವನ್ನ ರೈತರಿಗೆ ಸಾಲವಾಗಿ ನೀಡದೆ, ರಾಜ್ಯ ಬ್ಯಾಂಕಿಗೆ ವಾಪಸ್ ಕಳುಹಿಸಿ, ರೈತರಿಗೆ ಅನ್ಯಾಯ ಮಾಡಿರುವುದಲ್ಲದೆ ಬ್ಯಾಂಕಿಗೂ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಬ್ಯಾಂಕಿನಿಂದ ಈ ಸಾಲಿನಲ್ಲಿ 1.50 ಕೋಟಿ ರೂಪಾಯಿ ನಮ್ಮ ಬ್ಯಾಂಕಿಗೆ ಬಂದಿದೆ. ಈ ಬಾರಿ ರಾಜ್ಯ ಬ್ಯಾಂಕಿನವರು ರೈತರಿಗೆ ಸಾಲ ನೀಡಲು ರಾಜ್ಯ ಬ್ಯಾಂಕಿನಿಂದ ನಿಯೋಜಿಸಲ್ಪಟ್ಟ ವ್ಯವಸ್ಥಾಪಕರುಗಳು ನಮ್ಮ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಮಾತ್ರ ಎಲ್ಲಾ ವ್ಯವಸ್ಥಾಪಕರಿಗೆ ರೈತರ ಸಾಲದ ಅರ್ಜಿಗಳನ್ನ ಕಳುಹಿಸಬೇಕೆಂದು ಶರತ್ತು ವಿಧಿಸಿ, ರೈತರಿಗೆ ಸಾಲ ನೀಡಲು ದಿನಾಂಕ ನಗದಿಗೊಳಿಸಿ ರೂ.1.5 ಕೋಟಿ ರೂಪಾಯಿ ಮಂಜೂರು ಮಾಡಿರುತ್ತಾರೆ. ಈ ವಿಚಾರದ ಬಗ್ಗೆ ನವೆಂಬರ್ 7ರಂದು ಆಡಳಿತ ಮಂಡಳಿ ಸಭೆ ಕರೆದು ತಿಳಿಸಿದ್ದೇನೆ. ಈ ಸಂದರ್ಭದಲ್ಲಿ ಕೆಲವು ನಿರ್ದೇಶಕರು ಈ ಶರತ್ತಿನ ಅನ್ವಯ ರಾಜ್ಯ ಅಧ್ಯಕ್ಷರಲ್ಲಿ ಕೇಳಿಕೊಳ್ಳುವುದು ಸೂಕ್ತ ಎಂದು ತಿಳಿಸಿದರು. ಆದರೆ, ಸುಬ್ರಾವ್ ಅವರು ಇನ್ನು ಸ್ವಲ್ಪ ದಿನ ಕಾದು ನೋಡೋಣ ಎಂದರು ಎಂದು ವಿವರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...