Saturday, March 28, 2026
Saturday, March 28, 2026

ಕೃತಕ ಬುದ್ದಿಮತ್ತೆ ಬಳಕೆ ಮಾನವಸಮುದಾಯಕ್ಕೆ ಸಂಚಕಾರ ತರಬಾರದು

Date:

“ಕೃತಕ ಬುದ್ಧಿಮತ್ತೆಯು ಮಾನವ ಉದ್ಯೋಗಗಳಿಗೆ ಸಂಚಕಾರ ತರಬಾರದು” -ವಿಜ್ಞಾನ ವಿಚಾರ ಸಂಕಿರಣದ ಸಮಾರೋಪದಲ್ಲಿ ಬಿಇಎ ಖಜಾಂಚಿ ನಿರಂಜನ್- ದಾವಣಗೆರೆ.ಡಿ.5. ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಈಗಿನ ಕಂಪ್ಯೂಟರ್ ಯುಗದಲ್ಲಿ ಅನುಷ್ಠಾನಕ್ಕೆ ಬರುತ್ತಿದ್ದು ಇದು ಯಾವುದೇ ಕಾರ್ಯಗಳ ನೈಪುಣ್ಯತೆಯನ್ನು ಹೆಚ್ಚಿಸಬೇಕೇ ಹೊರತು ಮಾನವೀಯ ಉದ್ಯೋಗಗಳಿಗೆ, ಕೆಲಸ ಮಾಡುವ ಕೈಗಳಿಗೆ ಸಂಚಕಾರ ತರಬಾರದು ಎಂದು ಬಾಪೂಜೆ ವಿದ್ಯಾ ಸಂಸ್ಥೆಯ ಖಜಾಂಚಿ ಎ.ಎಸ್.ನಿರಂಜನ ಅಭಿಪ್ರಾಯಪಟ್ಟರು. ಅವರು ದಿ.ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ 14ನೇ ವಿಜ್ಞಾನ ವಿಚಾರ ಸಂಕಿರಣದ ಸಮರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಆರೋಗ್ಯ ಕ್ಷೇತ್ರ, ಬ್ಯಾಂಕಿಂಗ್, ಕೃಷಿ, ಶಿಕ್ಷಣ, ಮಾರ್ಕೆಟಿಂಗ್,ಕೈಗಾರಿಕೆ, ರೋಬೋಟ್ಗಳ ತಯಾರಿಕೆ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆಯ ಪ್ರಯೋಜನ ಪಡೆಯುವಲ್ಲಿ ಮುಂದಾಗಿದೆ, ಇವುಗಳ ಬಳಕೆ ಹೆಚ್ಚಾದಂತೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಬಾರದು, ದುಡಿಯುವ ಕೈಗಳಿಗೆ ಎಂದಿನಂತೆ ಕೆಲಸ ಇರಬೇಕು, ಕೃತಕ ಬುದ್ಧಿಮತ್ತೆಯಿಂದ ಕೆಲಸದಲ್ಲಿನ ಕೌಶಲ್ಯ ಹೆಚ್ಚಿ ಗುಣಮಟ್ಟ ವೃದ್ಧಿಯಾಗಬೇಕು ಎಂದರು. ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿದ್ದು ದೇಶದಲ್ಲಿ ಕರ್ನಾಟಕ ಸೈಬರ್ ಅಪರಾಧ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿದೆ, ವಾಟ್ಸಾಪ್ ಬಳಕೆದಾರರು ಆನ್ಲೈನ್ ವ್ಯವಹಾರ ಮಾಡುವವರು ಹಿಂದೆಂದಿಗಿಂತಲೂ ಈಗ ಬಹಳ ಜಾಗರೂಕರಾ ಗಿರಬೇಕಾಗಿದೆ ಈ ನಿಟ್ಟಿನಲ್ಲೂ ಸಹ ವಿಶೇಷ ಚಿಂತನೆಗಳನ್ನು ನಡೆಸಲು ಈ ವಿಜ್ಞಾನ ವಿಚಾರ ಸಂಕಿರಣ ಸಹಕಾರಿಯಾಗಿರುವುದು ಸ್ವಾಗತಾರ್ಹ ಎಂದರು.

ಮುಖ್ಯ ಅತಿಥಿಗಳಾಗಿ ಬಾಪೂಜಿ ಪ್ರೌಢಶಾಲೆಯ ಪ್ರಾಚಾರ್ಯ ಜೆ ಪದ್ಮನಾಭ, ಗುತ್ತೂರು ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಶ್ರೀಧರ ಮಯ್ಯ ಉಪಸ್ಥಿತರಿದ್ದು ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಪಿ. ರುದ್ರಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಣಿತ ಉಪನ್ಯಾಸಕ ಕೆ.ಸಿ. ಶಿವಶಂಕರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಕಾವ್ಯ ಮತ್ತು ಸಂಗಡಿಗರು ಹಾಡಿದರು. ರಸಾಯನ ಶಾಸ್ತ್ರ ಉಪನ್ಯಾಸಕ ಶಿವಕುಮಾರ್ ಬಿ.ಎಂ. ಸ್ವಾಗತ ಕೋರಿದರು. ವಿದ್ಯಾರ್ಥಿಗಳು ಕಾರ್ಯಕ್ರಮದ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಉಪನ್ಯಾಸಕಿ ಶರ್ಮಿಳ ಎಲ್.ಎಸ್.ಹಾಗೂ ಶ್ರುತಿ ಕೆ.ಎಸ್. ಮಾಡಿದರು. ಉಪನ್ಯಾಸಕ ಕೆ ಸಿ ವಿಜಯಕುಮಾರ್ ವಂದನೆ ಸಲ್ಲಿಸಿದರು.

ವರದಿ ಕೃಪೆ – -ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ-

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa 2026-27 ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ವಯೋಮಿತಿಯಲ್ಲಿ 60 ದಿನ ಸಡಿಲಿಕೆ- ಮಧು ಬಂಗಾರಪ್ಪ.

Madhu Bangarappa “ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಆರು ವರ್ಷ ತುಂಬಿರಲೇಬೇಕು...

MADHU BANGARAPPA ಶಿಕ್ಷಣದಲ್ಲಿ ಹಿಂದಿ ಹೇರಿಕೆ ವಿರೋಧ ಮತ್ತು ‘ಪಾಸ್ ವಿಥೌಟ್ ಹಿಂದಿ’ ಜಾರಿ ಕುರಿತು ಚರ್ಚೆ

MADHU BANGARAPPA ರಾಜ್ಯದ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಮಂತ್ರಿಗಳಾದ ಮಧುಬಂಗಾರಪ್ಪ...

Morarji Desai Residential School ಜಿಲ್ಲೆಯ ಮೊರಾರ್ಜಿ ದೇಸಾಯಿ‌ ವಸತಿ ಶಾಲೆ 6 ನೆ ತರಗತಿಗೆ ಪ್ರವೇಶ ಪರೀಕ್ಷೆ.

Morarji Desai Residential School ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ...

Mylaralingeshwara Temple Shimoga ಮಾರ್ಚ್ 29. ಮೈಲಾರೇಶ್ವರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

Mylaralingeshwara Temple in Shimoga ಶಿವಮೊಗ್ಗ ನಗರದಲ್ಲಿನ ಶ್ರೀ ಮೈಲಾರೇಶ್ವರ ದೇವಸ್ಥಾನನಲ್ಲಿ...