Friday, March 20, 2026
Friday, March 20, 2026

ಜಿ೨೦ ರಾಷ್ಟ್ರಗಳ ಸಂಘಟನೆಗೆ ಭಾರತದ ಸಾರಥ್ಯ.

Date:

ಇಂದಿನಿಂದ ಭಾರತಕ್ಕೆ ಜಿ20 ರಾಷ್ಟ್ರಗಳ ಒಕ್ಕೂಟದ ಅಧ್ಯಕ್ಷಗಿರಿ.
ಏನಿದು ಜಿ 20 ?
ವಿಶ್ವದ ದೇಶಗಳ ಒಂದು ಸಂಘಟನೆ.
ಅಂದರೆ ಆರ್ಥಿಕ ಸಂಕಷ್ಟಗಳ ಬಗ್ಗೆ
ದೇಶಗಳಲ್ಲಿರುವ ಸಮಸ್ಯೆಗಳು ಅದಕ್ಕೆ ತಹುಲಿದಂತೆ ಬರುವ ಇತರ ದೇಶಗಳ ವ್ಯಾಪಾರ ವಹಿವಾಟು, ಸಹಕಾರ‌, ವಿನಿಮಯ ಹೀಗೆ ಪರಸ್ಪರ ಚರ್ಚಿಸಿ ಪರಿಹಾರ ಹುಡುಕುವುದೇ ಇದರ ಮೂಲ ಧ್ಯೇಯ.
ಮುಖ್ಯವಾಗಿ 2008 ರಲ್ಲಿ ಉಂಟಾದ ಆರ್ಥಿಕ ಹಿಂಜರಿತದಿಂದ ಜಿ20 ರಾಷ್ಟ್ರಗಳ ಸಂಘಟನೆ ಹೊಸತಾಗಿ ಯೋಚನೆ ಮಾಡುವಂತಾಯಿತು.
ಅಲ್ಲಿಂದ ಎರಡು ತಿಂಗಳಿಗೊಮ್ಮೆ
ಸಭೆ ನಡೆಯುತ್ತಿತ್ತು.


ಇದರಲ್ಲಿ ದೇಶದೇಶಗಳ ವಾಣಿಜ್ಯ ಒಪ್ಪಂದಗಳಷ್ಟೇ ಅಲ್ಲ ಜಾಗತಿಕ ಹವಾಮಾನ ವೈಪರೀತ್ಯ,ಮುಕ್ತ ಮತ್ತು ಸ್ವತಂತ್ರ ಸಮುದ್ರಯಾನ, ಭಯೋತ್ಪಾದನೆ ತಡೆ,ಪ್ರಾದೇಶಿಕ ಶಾಂತಿ ಇತ್ಯಾದಿ ಗಂಭೀರ ವಿಷಯಗಳ ಚರ್ಚಿಸಲಾಗುತ್ತದೆ.ಅದಲ್ಲದೇ ರಾಷ್ಟ್ರಗಳ ನಡುವೆ ನಡೆಯುವ ಯುದ್ಧಗಳ ಭೀಕರತೆಯ ಬಗ್ಗೆಯೂ ವಿವೇಚನೆ ನಡೆಯುತ್ತದೆ.

ಒಂದು ಸಂಘಟನೆಯೆಂದರೆ ನಾಯಕತ್ವ ಇರಕೇಬೇಕಲ್ಲವೆ?
ಆದರೆ ಈ ಸಂಘಟನೆ ನಾಯಕರಾರೂ ಇಲ್ಲ. ಒಂದರ್ಥದಲ್ಲಿ ಸಾಮೂಹಿಕ ನಾಯಕತ್ವ.
ಪ್ರತೀ ಒಂದು ವರ್ಷಕ್ಕೆ ಒಂದೊಂದು ದೇಶ ನಾಯಕತ್ವ ವಹಿಸಿಕೊಳ್ಳುತ್ತದೆ.

ಹಾಗಾದರೆ ಈ ಸಂಘಟನೆಯಲ್ಲಿ ಎಷ್ಟು ದೇಶಗಳಿವೆ?. ಒಟ್ಟು ಹತ್ತೊಂಬತ್ತು ಮತ್ತು ಐರೋಪ್ಯ ರಾಷ್ಡ್ರಗಳ ಒಕ್ಕೂಟವೇ ಇದೆ.
ಜಿ20 ಅಂತ ಕರೆದರೂ 19 ದೇಶಗಳು ಮತ್ತು ಐರೋಪ್ಯ ಒಕ್ಕೂಟದ 27 ದೇಶಗಳಿವೆ. ಹಾಗಾಗಿ 19 ದೇಶಗಳು ಮತ್ತು ಒಂದು ಒಕ್ಕೂಟ ಸೇರಿ 20 ಆಗಿವೆ.

ಈ ವರ್ಷ ಭಾರತಕ್ಕೆ ಅಧ್ಯಕ್ಷತೆಯ ಗೌರವ ಲಭಿಸಿದೆ.15 ಸಭೆಗಳನ್ನ ನಡೆಸಬೇಕಿದೆ. 25 ನಗರಗಳ ಆಯ್ಕೆಯೂ ನಡೆದಿದೆ.ಕೊನೆಯದೇ ಶೃಂಗ ಸಭೆಯಾಗಿ ಮಾರ್ಪಟ್ಟು ಅಧ್ಯಕ್ಷತೆ ಅವಧಿ ಮುಗಿಯುತ್ತದೆ.

“ಒಂದು ಭೂಮಿ,ಒಂದು ಕುಟುಂಬ,ಒಂದು ಭವಿಷ್ಯ” ಇದು ಈ ವರ್ಷದ ಧ್ಯೇಯ ವಾಕ್ಯ.

ಅದಕ್ಕೆ ಅರ್ಥಗರ್ಭಿತವಾಗಿ ನಮ್ಮ ಪ್ರಧಾನಿ ಮೋದಿಯವರು ಹೇಳಿಕೆ ಬಂದಿದೆ.
ಜೀವಿಗಳು ಹಾಗೂ ವಸ್ತುಗಳು ಪಂಚತತ್ವ ಆಧರಿಸಿವೆ.ಇದು ನಮ್ಮ ಪರಿಸರ ,ದೈಹಿಕ,ಸಾಮಾಜಿಕ ಯೋಗಕ್ಷೇಮಕ್ಕೆ ಅಗತ್ಯ.ಭಾರತದ ನೇತೃತ್ವದಲ್ಲಿ ನಡೆಯಲಿರುವ ಶೃಂಗಸಭೆಯು ಏಕತ್ವ ಪ್ರಜ್ಞೆಯನ್ನು ಉತ್ತೇಜಿಸಲು ಯತ್ನಿಸುತ್ತದೆ.

ಪ್ರಧಾನಿ ಅವರ ಮನವಿ ಹೀಗಿದೆ.
“ಸಾಮರಸ್ಯ,ಭರವಸೆ ಹಾಗೂ ಸ್ವಾಸ್ಥ್ಯ ಸಾಧಿಸುವ ನಿಟ್ಟಿನಲ್ಲಿ ಭಾರತದ ನೇತೃತ್ವದ ನಾಯಕತ್ವದ ಜೊತೆ ಎಲ್ಲರೂ ಕೈ ಜೋಡಿಸಿ”.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...