Thursday, February 5, 2026
Thursday, February 5, 2026

ಪಟ್ಟುಬಿಡದ ಕೆಎಂಎಫ್ ಹಾಲಿನ ಉತ್ಪನ್ನಗಳ ದರ ಹೆಚ್ಚಳ

Date:

ನಂದಿನಿ ಬ್ರಾಂಡ್ ನ ಎಲ್ಲಾ ಮಾದರಿಯ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚಿಸಲಾಗಿದೆ.

ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಹಾಲು ಮಹಾಮಂಡಳದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ನ. 14ರಂದು ಕೆಎಂಎಫ್ ಪ್ರತಿ ಲೀಟರ್ ಗೆ ಮೂರು ರೂಪಾಯಿ ಹೆಚ್ಚಿಸಲು ನಿರ್ಧರಿಸಿತ್ತು. ಆದರೆ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಹಾಲಿನ ದರ ಹೆಚ್ಚಿಸದಂತೆ ಸೂಚಿಸಿದ್ದರು. ರೈತರಿಗೆ ಹಾಗೂ ಗ್ರಾಹಕರಿಗೆ ಇದರಿಂದ ಹೊರೆಯಾಗದಂತೆ ನಿರ್ಣಯ ಕೈಗೊಳ್ಳಲು ಸೂಚಿಸಿದ್ದರು. ಈ ಸೂಚನೆಯನ್ನು ನೆನಪಿನಲ್ಲಿಟ್ಟುಕೊಂಡು ಕರ್ನಾಟಕ ಹಾಲು ಮಹಾಮಂಡಲದ ಆಡಳಿತ ಮಂಡಳಿ ಸಭೆಯಲ್ಲಿ ಈ ದರವನ್ನು ಪರಿಷ್ಕರಿಸಲಾಗಿದೆ.

ಹಾಲು ಒಕ್ಕೂಟಗಳಲ್ಲಿ ಹಳೆಯ ದರ ಮುದ್ರಿತವಾಗಿರುವ ಪಾಕೆಟ್ಗಳ ದಾಸ್ತಾನಿದೆ. ಈ ದಾಸ್ತಾನು ಮುಗಿಯುವವರೆಗೂ ಹಳೆಯ ದರ ಮುದ್ರಿತ ಪ್ಯಾಕೆಟ್ ಗಳಲ್ಲಿ ಹಾಲು ಪೂರೈಕೆ ಯಾಗಲಿದೆ ಎಂದು ಕೆಎಂಎಫ್ ಮಾಹಿತಿ ನೀಡಿದೆ.

ಕೆಎಂಎಫ್ ನಿರ್ಧಾರ ಪರಿಷ್ಕೃತ ದರ ಇಂದಿನಿಂದ ಜಾರಿಯಾಗಿದೆ. ಹಾಲು, ಮೊಸರಿನ ದರ ಪರಿಷ್ಕರಣಿ ಹೀಗಿದೆ…

ಟೋನ್ಡ್ ಹಾಲು ಪ್ರಸ್ತುತ 37, ಪರಿಷ್ಕೃತ 39.

ಹೋಮೋಜಿನೈಸ್ಡ್ ಟೋನ್ಡ್ ಹಾಲು ಪ್ರಸ್ತುತ 38, ಪರಿಷ್ಕೃತ 40.

ಹೋಮೋಜಿನೈಸ್ಡ್ ಹಸುವಿನ ಹಾಲು ಪ್ರಸ್ತುತ 42, ಪರಿಷ್ಕೃತ 44.

ಸ್ಪೆಷಲ್‌ ಹಾಲು ಪ್ರಸ್ತುತ 43, ಪರಿಷ್ಕೃತ 45.

ಶುಭಂ ಹಾಲು ಪ್ರಸ್ತುತ 43, ಪರಿಷ್ಕೃತ 45.

ಹೋಮೋಜಿನೈಸ್ಡ್ ಸ್ಟ್ಯಾಂಡಡೈ ರ್ಸ್ಡ್ ಹಾಲು ಪ್ರಸ್ತುತ 44, ಪರಿಷ್ಕೃತ 46.

ಸಮೃದ್ಧಿ ಹಾಲು ಪ್ರಸ್ತುತ 48
ಪರಿಷ್ಕೃತ 50.

ಸಂತೃಪ್ತಿ ಹಾಲು ಪ್ರಸ್ತುತ 50, ಪರಿಷ್ಕೃತ 52.

ಡಬಲ್‌ಟೋನ್ಡ್ ಹಾಲು ಪ್ರಸ್ತುತ 36, ಪರಿಷ್ಕೃತ 38.

ಮೊಸರು (ಪ್ರತಿ ಕೆ.ಜಿ.ಗೆ) ಪ್ರಸ್ತುತ 45,
ಪರಿಷ್ಕೃತ 47.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...