Tuesday, March 24, 2026
Tuesday, March 24, 2026

ನವರಾತ್ರಿ ನವದುರ್ಗಾವತಾರ ಶ್ರೀಸಿದ್ಧಿದಾತ್ರಿ ದೇವಿ

Date:

ನವರಾತ್ರಿ(ಒಂಭತ್ತನೆಯದಿನ)


ಸಿದ್ಧಗಂಧರ್ವ ಯಕ್ಷಾದ್ಯೈಃ ಅಸುರೈರಮರೈರಪಿ
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿ
ದಾಯಿನೀ

ಇಂದು ಶರನ್ನವರಾತ್ರಿಯ ಒಂಭತ್ತನೆಯ ದಿನ.ಇಂದು
ನವಮಿ ತಿಥಿ,ಮಹಾನವಮಿ ಎಂದು ಕರೆಯುತ್ತಾರೆ.
ದುರ್ಗಾಮಾತೆಯನ್ನು ಇಂದು ತನ್ನ ಒಂಭತ್ತನೇ ರೂಪವಾದ ಸಿದ್ಧಿಧಾತ್ರಿಯ ರೂಪದಲ್ಲಿ ಆರಾಧಿಸುತ್ತಾರೆ.ಇದು ಆದಿಶಕ್ತಿಯ ವಿಶಿಷ್ಟ ರೂಪ.
ನವ ದುರ್ಗೆಯರಲ್ಲಿ ಕೊನೆಯರೂಪವಾಗಿರುವುದು
ಸಿದ್ಧಿಧಾತ್ರಿ ದೇವಿಯ ರೂಪ.ಸಿದ್ಧಿಧಾತ್ರಿ ಮಾರ್ಕಂಡೇಯ ಪುರಾಣಗಳ ಪ್ರಕಾರ ಈ ದೇವಿಯು ಎಲ್ಲಾರೀತಿಯಸಿದ್ಧಿಯನ್ನುಕರುಣಿಸುವಳು.ಆದ್ದರಿಂದಲೇ ಈ ದೇವಿಯನ್ನು ಸಿದ್ಧಿಧಾತ್ರಿ ಎಂದು ಕರೆಯಲಾಗುವುದು.ಈ ದೇವಿಯು
ಕಮಲದಮೇಲೆಕುಳಿತಿದ್ದಾಳೆ,ದೇವಿಗೆಚತುರ್ಭುಜ
ಗಳಿವೆ.ಶಂಖ,ಚಕ್ರ ಮತ್ತು ಕಮಲ ಪುಷ್ಪವನ್ನು ಕೈಗಳಲ್ಲಿ ಹಿಡಿದುಕೊಂಡಿದ್ದಾಳೆ.ಈ ದೇವಿಯು ಮಹಾಲಕ್ಷ್ಮಿಯ ಸ್ವರೂಪವನ್ನು ಹೊಂದಿರುತ್ತಾಳೆ.ನವರಾತ್ರಿಯ ಒಂಭತ್ತನೇ ದಿನ ಭಕ್ತಿಯಿಂದ ಆರಾಧಿಸಿ ಪೂಜಿಸುವುದರಿಂದ ಮಾತೆಯು ಭಕ್ತರ ಅಭೀಷ್ಟಗಳನ್ನು ಈಡೇರಿಸುವಳು ಎಂಬನಂಬಿಕೆಯಿದೆ.
ಈ ಮಹಾತಾಯಿ ಭಕ್ತರಿಗೆ ಇಷ್ಟಾರ್ಥ ಸಿದ್ಧಿಗಳನ್ನು
ನೀಡಿ,ಮೋಕ್ಷವನ್ನು ದಯಪಾಲಿಸುವ ಶಕ್ತಿಮಾತೆ ಈ ದೇವಿ.ನವರಾತ್ರಿಯಲ್ಲಿ ನವದುರ್ಗೆಯರನ್ನು
ಪೂಜಿಸುವ ಪದ್ಧತಿ ಅತ್ಯಂತ ಮಹತ್ವದ್ದು ಮತ್ತು
ವಿಶೇಷವಾಗಿದೆ.ಒಂಭತ್ತು ದಿನಗಳ ಕಾಲ ಒಂಭತ್ತು ದೇವಿಯರ ಆರಾಧನೆಯನ್ನು ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಮಾಡಿದರೆ ಯಶಸ್ಸು ಸಿಗುವುದು
ಖಚಿತ.ಮಹಾ ಶಕ್ತಿ ಸ್ವರೂಪಿಣಿ ದೇವಿಯರ ಆಶೀರ್ವಾದ ನಮ್ಮ ಮೇಲೆ ಇದ್ದರೆ ಜೀವನದಲ್ಲಿ
ಬರುವ ಕಷ್ಟಗಳು ಪರಿಹಾರವಾಗುತ್ತವೆ.ಶತೃಗಳ ಭಯವಿರುವುದಿಲ್ಲ.ಆತ್ಮವಿಶ್ವಾಸವನ್ನು ದೇವಿಯು ಕರುಣಿಸಿ ಕಾಪಾಡುತ್ತಾಳೆ.
ನವರಾತ್ರಿಯ ಒಂಭತ್ತುದಿವಸಗಳ ಕಾಲ ದೇವಿಯ ಪೂಜೆಯನ್ನು ಭಕ್ತಿಯಿಂದ ಮಾಡಿರುವ ನಾವು
ದೇವಿಯನ್ನು ಎಲ್ಲರಿಗೂ ಆಯುರಾರೋಗ್ಯ,ಸುಖ ಶಾಂತಿ ನೆಮ್ಮದಿಯನ್ನು ದಯಪಾಲಿಸಿ ಅನುಗ್ರಹಿಸುವಂತೆ ಪ್ರಾರ್ಥಿಸೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ. ಜಾ./ ಪ. ಪಂ. ರೈತರಿಂದ ಅರ್ಜಿ ಅಹ್ವಾನ

National Horticulture Mission Scheme 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್...

S.N. Channabasappa ಮತಪತ್ರ ಪದ್ಧತಿ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಿರೋಧ

S.N. Channabasappa ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ...

MESCOM ಸಾಗರ : ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...

Manasadhara Trust ಸರ್ಕಾರಿ ಶಾಲಾ ಮಕ್ಕಳಿಗಾಗಿ ಮನಃಸ್ಫೂರ್ತಿ ಬೇಸಿಗೆ ಶಿಬಿರ

Manasadhara Trust ಮಾನಸಾಧಾರ ಟ್ರಸ್ಟ್(ರಿ), ಮನಃಸ್ಫೂರ್ತಿ ವಿಶೇಷ ಶಾಲೆ(ರಿ) ಮತ್ತು ಕಲಿಕಾ...