Sunday, December 7, 2025
Sunday, December 7, 2025

ವರ್ಕ್ ಫ್ರಂ ಹೋಮ್ ಪಾಲಿಸಿ ಎಂಎನ್ ಸಿಗಳಿಗೆ ಈಗೀಗ ಇಷ್ಟವಾಗುತ್ತಿದೆ

Date:

ಕೊರೊನಾ ವೈರಸ್ ನಿಂದ ಕೋಟ್ಯಾಂತರ ಜನರು ವೈರಸ್​ಗೆ ಬಲಿಯಾಗಿದ್ದಾರೆ.ಇದರ ನಡುವೆಯೇ ಕೊರೋನಾದಿಂದಾಗಿ ಕೆಲ ಒಳ್ಳೆಯ ಬದಲಾವಣೆಗಳು ಕೂಡಾ ಆಗಿವೆ ಎಂಬುವುದಕ್ಕೆ ಅನೇಕ ಉದಾಹರಣೆಗಳಿವೆ. ಅದರಲ್ಲಿ ವಿಶೇಷವಾಗಿ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳಿಂದ ಮನೆಯಿಂದಲೇ ಕೆಲಸ ಮಾಡುವ ಹೊಸ ದಾರಿಯನ್ನ ಕಂಡುಕೊಂಡಿವೆ.

ಮನೆಯಿಂದಲೇ ಕೆಲಸ ಮಾಡುವ ವಿಧಾನದಿಂದಾಗಿ ಉದ್ಯೋಗಿಗಳು ಇನ್ನಷ್ಟು ಕೆಲಸ ಮಾಡಲು ಸಮರ್ಥರಾಗಿರುತ್ತಾರೆ. ಅನ್ನೊದು ಕಂಪನಿಗೂ ಕೂಡಾ ಅರಿವಾಗುತ್ತಿದೆ. ಇದರಿಂದ ಕಂಪನಿಗೆ ಖರ್ಚು ಕೂಡ ಕಡಿಮೆಯಾಗಿದೆ.

ಈಗ ಇದೇ ರೀತಿ ಮುಂದಿನ ದಿನಗಳಲ್ಲಿಯೂ ಮನೆಯಿಂದಲೇ ಉದ್ಯೋಗಿಗಳಿಂದ ಕೆಲಸ ಮಾಡಿಸಿಕೊಳ್ಳುವ ಬಗ್ಗೆ ಚಿಂತನೆ ಕಂಪನಿ ಮಾಡುತ್ತಿದೆ. ಇದೇ ದಿಕ್ಕಿನಲ್ಲಿ ಒಂದು ದೊಡ್ಡ ಎಂಎನ್ ಸಿ ಕಂಪನಿ ಭಾರತದ 9000 ಉದ್ಯೋಗಿಗಳಿಗೆ ಉದ್ಯೋಗ ನೀಡಲು ನಿರ್ಧಾರ ಮಾಡಿದೆ. ಅವರು ಎಲ್ಲಿಂದಾದರೂ ಕೆಲಸ ಮಾಡಬಹುದು. ಟಾರ್ಗೆಟ್ ಕಂಪ್ಲಿಟ್ ಮಾಡಿದರೆ ಸಾಕು ಎಂದು ಕಂಪನಿ ಹೇಳುತ್ತಿದೆ.

ಈಗಾಗಲೇ ಉದ್ಯೋಗಿಗಳ ಹುಡುಕಾಟದಲ್ಲಿರುವ ಕಂಪನಿಗಳು ಶ್ರೇಣಿ 2 ಹಾಗೂ ಶ್ರೇಣಿ 3 ರೀತಿಯಲ್ಲಿ ಹಂತ ಹಂತವಾಗಿ ಉದ್ಯೋಗಿಗಳ ಇಂಟರ್ವ್ಯೂ ನಡೆಸುತ್ತಿದೆ.

ಜಾಗತಿಕ ಗ್ರಾಹಕ ಸೇವಾ ಸಾಫ್ಟ್‌ ವೇರ್‌ ಮತ್ತು ಸೇವೆಗಳ ಕಂಪನಿ ಇದೇ ಮಂಗಳವಾರ 9000 ಉದ್ಯೋಗಿಗಳ ನೇಮಕವನ್ನು ಪ್ರಕಟಿಸಿದೆ. ಈ ಉದ್ಯೋಗಿಗಳಿಗೆ ಎಲ್ಲಿಂದಾದರೂ ಕೆಲಸ ಮಾಡಬಹುದು, ಅನ್ನೋ ಆಯ್ಕೆ ಅವರಿಗೆ ಕೊಟ್ಟಿದೆ. ಈಗಾಗಲೇ ಫೋನ್ ಮತ್ತು ಚಾಟ್​ಗಳ ಮೂಲಕ ಉದ್ಯೋಗಿಗಳ ಜೊತೆ ಕಂಪನಿ ಮಾತುಕತೆ ನಡೆಸುತ್ತಿದೆ. ಇದರಿಂದ ಗ್ರಾಹಕರಿಗೂ ಅನಕೂಲವಾಗಲಿದೆ.

ಮಿಂಟ್ ವರದಿಯ ಪ್ರಕಾರ, ಭಾರತ ಮತ್ತು ಅಮೇರಿಕಾ ಎಸ್ವಿಪಿ ಮತ್ತು ಎಚ್‌ಆರ್ಡಿ ಹೆಡ್ ನೀನಾ ನಾಯರ್ ಅವರು ಭಾರತವು ಉತ್ತಮ ಮತ್ತು ಸಂಘಟಿತ ಪ್ರತಿಭಾಶಾಲಿ ಉದ್ಯೋಗಿಗಳನ್ನ ಹೊಂದಿದೆ.

ಇದೇ ರೀತಿಯ ಉದ್ಯೋಗಿಗಳ ಹುಡುಕಾಟದಲ್ಲಿ ಇರುವ ಕಂಪನಿ ಭಾರತದ ಉದ್ಯೋಗಾಂಕ್ಷಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿರುವುದು ವಿಶೇಷ.
ಕಂಪನಿ, ಕಳೆದ ವರ್ಷ ಭಾರತದಿಂದಲೇ 5000 ಜನರನ್ನು ನೇಮಿಸಿಕೊಂಡಿದೆ. ವ್ಯಾಪಾರದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಅವಶ್ಯಕತೆಗಳನ್ನು ಪೂರೈಸಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳುವ ಬಗ್ಗೆ ಆಲೋಚನೆ ನಡೆಸಲಾಗುತ್ತಿದೆ.

ಗ್ರಾಹಕರಿಗೆ ವೈಯಕ್ತೀಕರಿಸಿದ ಮತ್ತು ತೃಪ್ತಿಕರ ಅನುಭವವನ್ನು ಒದಗಿಸುವ ಗುರಿ ಕಂಪನಿ ಹೊಂದಿದೆ. ಕೃತಕ ಬುದ್ಧಿಮತ್ತೆಯು ಲಂಬ ಪರಿಣತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಾಗ ಮತ್ತು ಅದಕ್ಕೆ ಹೊಸ ಆಯಾಮವನ್ನು ನೀಡಿದಾಗ ಮಾತ್ರ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೇ ಈಗಾಗಲೇ ಕಂಪನಿಗಳ ಎಐ ತಂತ್ರಜ್ಞಾನವು ವ್ಯಾಪಾರ ಹಾಗೂ ಸಾಮಾನ್ಯ ಗ್ರಾಹಕರ ನಡುವಿನ ವಹಿವಾಟುಗಳನ್ನು ಇನ್ನಷ್ಟು ಸುಲಭಗೊಳಿಸುವುದಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...