Sunday, May 24, 2026
Sunday, May 24, 2026

ಸಾರಿಗೆ ಇಲಾಖೆಯ 58 ಸೇವೆಗಳು ಮಧ್ಯವರ್ತಿಗಳಿಲ್ಲದೇಆನ್ ಲೈನ್ ಮೂಲಕ ಮನೆಬಾಗಿಲಿಗೆ

Date:

ಸಾರಿಗೆ ಇಲಾಖೆಯು ಒದಗಿಸುವ ಹಲವು ಸೇವೆಗಳನ್ನು ಈಗ ಸುಲಭವಾಗಿ ಮನೆಗಳಲ್ಲಿ ಇದ್ದೇ ಪಡೆದುಕೊಳ್ಳಬಹುದಾಗಿದೆ.
ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಈ ಹೊಸ ಅಧಿಸೂಚನೆಯ ಪ್ರಕಾರ ಚಾಲನಾ ಪರವಾನಗಿ, ಕಂಡಕ್ಟರ್ ಲೈಸೆನ್ಸ್, ವಾಹನ ನೋಂದಣಿ, ಪರ್ಮಿಟ್, ಮಾಲೀಕತ್ವ ವರ್ಗಾವಣೆ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದ 58 ನಾಗರಿಕ ಸೇವೆಗಳನ್ನು ಸಂಪೂರ್ಣವಾಗಿ ಆನ್​ಲೈನ್​ನಲ್ಲಿಯೇ ಪಡೆಯಬಹುದಾಗಿದೆ.

ಸಾರಿಗೆ ಇಲಾಖೆ ಕಚೇರಿಗಳಿಗೆ ಜನರು ಭೇಟಿ ನೀಡಲೇಬೇಕು ಎನ್ನುವ ಅನಿವಾರ್ಯತೆಗೆ ಈ ನಿಯಮಗಳು ರಿಯಾಯ್ತಿ ನೀಡಿವೆ.ಸಾರಿಗೆಗೆ ಸಂಬಂಧಿಸಿದ ಸೇವೆಗಳನ್ನು ಸುಲಭವಾಗಿ ಒದಗಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರಿಗೆ ಸೇವೆಗಳನ್ನು ಕಾಂಟ್ಯಾಕ್ಟ್​ಲೆಸ್, ಫೇಸ್​ಲೆಸ್ ರೀತಿಯಲ್ಲಿ ಒದಗಿಸುವುದರಿಂದ ನಾಗರಿಕರ ಸಮಯವನ್ನು ಉಳಿಸುವಲ್ಲಿ ಮತ್ತು ಕಾಯುವಿಕೆಯ ಹೊರೆ ಕಡಿಮೆ ಮಾಡುವಲ್ಲಿ ಈ ಕ್ರಮಗಳು ನೆರವಾಗುತ್ತವೆ.

ಈ ಸುಧಾರಣೆಗಳಿಂದಾಗಿ ಆರ್​ಟಿಒ ಕಚೇರಿಗಳಲ್ಲಿ ಜನದಟ್ಟಣೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ. ಇಲಾಖೆಯ ಕಾರ್ಯನಿರ್ವಹಣೆಯಲ್ಲಿ
ಹೆಚ್ಚಿನ ದಕ್ಷತೆಗೆ ಕಾರಣವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಸಾರಿಗೆ ಇಲಾಖೆಯು ಈ ಸಂಬಂಧ ಸೆಪ್ಟೆಂಬರ್ 16ರಂದು ಅಧಿಸೂಚನೆ ಹೊರಡಿಸಿದೆ. ಈವರೆಗೆ 18 ನಾಗರಿಕ ಸೇವೆಗಳನ್ನು ಸಾರಿಗೆ ಇಲಾಖೆಯು ಆನ್​ಲೈನ್​ನಲ್ಲಿ ಒದಗಿಸುತ್ತಿತ್ತು. ಇದೀಗ ಈ ಸೇವೆಗಳ ಸಂಖ್ಯೆಯು 58ಕ್ಕೆ ಹೆಚ್ಚಾಗಲಿದೆ. ಈ ಎಲ್ಲ ಸೇವೆಗಳಿಗೆ ಆಧಾರ್ ದೃಢೀಕರಣ ಕಡ್ಡಾಯವಾಗಿದೆ.

ಜನರು ಯಾವುದೇ ಮಧ್ಯವರ್ತಿಗಳ ಅಗತ್ಯ ಇಲ್ಲದಂತೆ ಈ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಲರ್ನರ್ ಲೈಸೆನ್ಸ್​ (ಎಲ್​ಎಲ್​), ನಕಲಿ ಚಾಲನಾ ಪರವಾನಗಿ, ಚಾಲನಾ ಪರವಾನಗಿ ನವೀಕರಣಕ್ಕಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ ಅಂತರರಾಷ್ಟ್ರೀಯ ಚಾಲನಾ ಪರವಾನಗಿ, ಕಂಡಕ್ಟರ್ ಪರವಾನಗಿಯಲ್ಲಿ ವಿಳಾಸದ ಬದಲಾವಣೆ, ಮೋಟಾರು ವಾಹನದ ಮಾಲೀಕತ್ವದ ವರ್ಗಾವಣೆಗೆ ಅರ್ಜಿ ಸೇರಿದಂತೆ ಹಲವು ಸೇವೆಗಳನ್ನು ಆಧಾರ್ ದೃಢೀಕರಣದ ಮೂಲಕ ಪಡೆದುಕೊಳ್ಳಬಹುದು.

ಸಾರಿಗೆಗೆ ಸಂಬಂಧಿಸಿದ ಸೇವೆಗಳನ್ನು ಸುಲಭವಾಗಿ ಒದಗಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರಿಗೆ ಸೇವೆಗಳನ್ನು ಕಾಂಟ್ಯಾಕ್ಟ್​ಲೆಸ್, ಫೇಸ್​ಲೆಸ್ ರೀತಿಯಲ್ಲಿ ಒದಗಿಸುವುದರಿಂದ ನಾಗರಿಕರ ಸಮಯವನ್ನು ಉಳಿಸುವಲ್ಲಿ ಮತ್ತು ಕಾಯುವಿಕೆಯ ಹೊರೆ ಕಡಿಮೆ ಮಾಡುವಲ್ಲಿ ಈ ಕ್ರಮಗಳು ನೆರವಾಗುತ್ತವೆ. ಈ ಸುಧಾರಣೆಗಳಿಂದಾಗಿ ಆರ್​ಟಿಒ ಕಚೇರಿಗಳಲ್ಲಿ ಜನದಟ್ಟಣೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ. ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ದಕ್ಷತೆಗೆ ಕಾರಣವಾಗುತ್ತದೆ ಎಂದು ಸಚಿವಾವಾಲಯ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dinesh Gundu Rao ಎಬೊಲಾ ಸೋಂಕು ಬಾರದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ.- ದಿನೇಶ್ ಗುಂಡೂರಾವ್

Dinesh Gundu Rao ಎಬೋಲಾ ಸೋಂಕು ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ...

Madhu Bangarappa ಶಿವಮೊಗ್ಗಕ್ಕೆ ಜೂನ್ 1 ರಂದು ಸೀಎಮನ ಭೇಟಿ: ಮಧು ಬಂಗಾರಪ್ಪ ಅವರಿಂದ ಪೂರ್ವಸಿದ್ಧತೆ ಪರಿಶೀಲನೆ

Madhu Bangarappa ಜೂನ್ 01 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ನೆರವೇರಿಸಲಿರುವ...

Madhu Bangarappa ಜಿಲ್ಲಾ ಪ್ರಗತಿ ಪರಿಶಿಲನಾ ಸಭೆ. ವಿವಿಧ ಸಮಸ್ಯೆಗಳ ಬಗ್ಗೆ ಪಕ್ಷಾತೀತ ನಿರ್ಣಯ- ಮಧು ಬಂಗಾರಪ್ಪ.

Madhu Bangarappa ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ...

CM Siddharamaiah ಸಮಗ್ರ ಅಭಿವೃದ್ಧಿಗೆ ನಾವು ಮುಂದಡಿ ಇಟ್ಟಿದ್ದೇವೆ- ಸಿದ್ಧರಾಮಯ್ಯ

CM Siddharamaiah ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ,...