Saturday, April 4, 2026
Saturday, April 4, 2026

ಭೇಷ್… ಜಗ್ಗೇಶ್…ಭೇಷ್!

Date:

ಕನ್ನಡದ ಚಿತ್ರರಂಗವೇಕೆ ಇಡೀ ಕನ್ನಡಿಗರೇ ಸ್ಥಂಭೀಭೂತ. ಯುವ ತಾರಾ ಕಣ್ಮಣಿ,ಪುನೀತ್ ಹಠಾತ್ ನಿಧನಕ್ಕೆ ಗಾಢ ದುಃಖಕ್ಕೆ ಜಾರಿದ್ದಾರೆ‌. ಸಾವು ಕಟ್ಟಿಟ್ಟ ಬುತ್ತಿ.ಅದರೆ ಇಡೀ ಕಲಾವಿದ ಗಣವೇ ಗರಬಡಿದಂತಾಗಿದೆ.!
ಎಲ್ಲರ ಮನದಲ್ಲೂ ಕಟ್ಟುಮಸ್ತಾದ ಹುಡುಗ,ಪುನೀತ್ ಸುಮ್ಮಸುಮ್ಮನೇ
ವಿಧಿವಶನಾದನಲ್ಲ!. ಪುನೀತರ ಸಾವಿನ ಬಗ್ಗೆ ಹಲವಾರು ಗಣ್ಯರು,ವೈದ್ಯರು
ತಮ್ಮದೇ ವಿಶ್ಲೇಷಣೆ ನೀಡುತ್ತಿದ್ದಾರೆ.

ಗಮನ ಸೆಳೆಯುವುದೆಂದರೆ ನಮ್ಮ ದೈಹಿಕ ಕಸರತ್ತು ಮಾಡುವ ಯುವಜನ. ಅವರೀಗ ಈಗ ಆಸ್ಪತ್ರೆಗೆ ಹೃದಯ ತಪಾಸಣೆಗೆ ನುಗ್ಗುತ್ತಿರುವುದು.!
ಈಗಾಗಲೇ ತಜ್ಞ ಡಾ.ಮಂಜುನಾಥ್ ಅವರು ಸ್ಯಾಚುರೇಟೆಡ್ ಎಣ್ಣೆ ಬಳಸದೇ
ಗಾಣೋತ್ಪನ್ನ ಎಣ್ಣೆಯನ್ನ ಆಹಾರದಲ್ಲಿ ಬಳಸಲು ಸೂಚಿಸಿದ್ದಾರೆ.

ಭವಿಷ್ಯದಲ್ಲಿ ಪ್ರಜ್ವಲ ತಾರೆಯಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಪುನೀತ್
ಹೀಗೆ ಥಟ್ಟನೆ ಬಿಟ್ಟುಹೋಗಬಾರದಿತ್ತು.
ಈಗ ಅವರ ಸಾಮಾಜಿಕ ಸೇವಾಕಾರ್ಯಗಳು ಸಾರ್ವಜನಿಕರಿಗೆ ಗೊತ್ತಾಗುತ್ತಿವೆ. ಅವರ ಗೆಳೆಯ, ತಮಿಳು ಚಿತ್ರ ನಟ ವಿಶಾಲ್ ,ಮಿತ್ರ ಪುನೀತರ ಒಂದಿಷ್ಟು ಸೇವಾ ಹೊಣೆಯನ್ನ ಹೊತ್ತಿರುವುದು ಮಾದರಿಯಾಗಿದೆ.

ಈ ಸನ್ನಿವೇಶದಲ್ಲಿ ನವರಸನಾಯಕ ಜಗ್ಗೇಶ್ ಅವರ ಹೇಳಿಕೆ ಎಲ್ಲರ ಗಮನ ಸೆಳೆದಿದೆ. ” ನಾವೆಲ್ಲರೂ ಶಾರದೆಯ ಮಕ್ಕಳು. ಚಿತ್ರರಂಗವೇ ನಮ್ಮ ಮನೆ.ಕನ್ನಡಿಗರು ನಮ್ಮ ಬಂಧುಗಳು. ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿತ್ತು. ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು. ಈಗ ಇದನ್ನ ನೋಡಿ ಹಾಲು ಜೇನು ಸವಿದಂತೆ ಆಯಿತು. ಈ ಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೇ ಮುಂದುವರೆಯಲಿ ..ಲವ್ ಆಲ್..!”

ನಿಜಕ್ಕೂ ತಾರೆಯರು ಪರಸ್ಪರ ಮುನಿಸು ಮರೆಯಬೇಕು. ಚಿತ್ರರಂಗದಲ್ಲಿ ವ್ಯವಹಾರ ಕೇವಲ ಒಂದು ಮುಖ.ಅಷ್ಟೆ.! ಆದರೆ ಅದಕ್ಕೆ ಮಿತ್ರತ್ವ, ಬಂಧುತ್ವ,ಮಾನವೀಯತೆ ಎಂಬ ಹಿನ್ನೆಲೆಯೂ ಇದೆ. ಇಡೀ ಚಿತ್ರ ರಸಿಕರ ಅಭಿಮಾನವೇ ಎಲ್ಲರನ್ನ ಕಾಯುವ ಪ್ರಬಲ ಶಕ್ತಿ. ಇದನ್ನ ನಟ ಸಾರ್ವಭೌಮ ಡಾ.ರಾಜ್ ,ಆರಂಭದಿಂದಲೂ ಸಾಕ್ಷಾತ್ಕರಿಸಿಕೊಂಡು ಬಂದಿದ್ದಾರೆ. ಅವರನ್ನ ಮಾದರಿಯಾಗಿಸಿ ಮಿಕ್ಕ ತಾರಾವಳಿ ಮುನ್ನಡೆಯಬೇಕಿದೆ.ಅದೇ ಯುವರತ್ನ
ಪುನೀತ್ ಗೆ ನೀಡುವ ಶ್ರದ್ಧಾಂಜಲಿಯೂ ಹೌದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ನಗರದ ಜನತೆಗೆ ಕುಡಿಯುವ ನೀರಿನ ಸೌಲಭ್ಯದಲ್ಲಿ ಯಾವುದೇ ವ್ಯತ್ಯಯವಾಗಬಾರದು- ಎಸ್.ಎನ್.ಚನ್ನಬಸಪ್ಪ

S.N. Channabasappa ಕುಡಿಯುವ ನೀರಿನ ಪಂಪ್ ಹೌಸ್‌ಗೆ ಶಾಸಕ ಎಸ್.ಎನ್. ಚನ್ನಬಸಪ್ಪ...

Klive Special Article ಶ್ರೀಬಿಷ್ಟಪ್ಪಯ್ಯನವರು

ಲೇ: ಪ್ರಸಾದ್ ಶ್ರೀವತ್ಸ. Klive Special Article ಭಾರತವೆಂದರೆ ಅದು ಕೇವಲ ದೇಶವಲ್ಲ ಅದೆಷ್ಟೋ...

B.Y. Vijayendra ದಾವಣಗೆರೆ ಚುನಾವಣೆ: ಬಿಜೆಪಿ ಅಭ್ಯರ್ಥಿಗೇ ಗೆಲುವು- ಬಿ.ವೈ.ವಿಜಯೇಂದ್ರ.

B.Y. Vijayendra  ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾಧ್ಯಮ ಮಿತ್ರರೊಂದಿಗೆ...

Drinking water supply ಗಮನಿಸಿ!.ಏಪ್ರಿಲ್ 4 & 5 ರಂದುಶಿವಮೊಗ್ಗ ನಗರದಲ್ಲಿ ಹಲವೆಡೆ ನೀರು ಸರಬರಾಜು ವ್ಯತ್ಯಯ.

Drinking water supply ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ವಿದ್ಯುತ್ ಸರಬರಾಜು ಮಾಡುವ...