Thursday, December 18, 2025
Thursday, December 18, 2025

ಬಡವಿದ್ಯಾರ್ಥಿಗಳಿಗೆ ಭೋದಿಸಲು ಉದ್ಯೋಗ ತೊರೆದ ಐಎಎಸ್ ಅಧಿಕಾರಿ

Date:

ಯುಪಿಎಸ್‌ಸಿ ಪರೀಕ್ಷೆಗಳೆಂದರೆ ಕಬ್ಬಿಣದ ಕಡಲೆ ಎಂಬ ಮಾತೇ ಇದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕೆಂದರೆ ಅಷ್ಟೇ ತಯಾರಿ ಕೂಡ ಮುಖ್ಯ.

ಐಎಎಸ್ ಅಧಿಕಾರಿಯಾಗಿರುವ ಅರುಣ್ ಕುಮಾರ್ ಅವರು ಹಿಂದುಳಿದ ಯುಪಿಎಸ್‌ಸಿ ಆಕಾಂಕ್ಷಿಗಳಿಗಾಗಿಯೇ ತಮ್ಮ ಐಎಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿ ಬೋಧಿಸುವ ಕಾಯಕಕ್ಕೆ ಮುನ್ನುಡಿ ಬರೆದಿದ್ದಾರೆ.

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಬೋಧಿಸಲು ಉದ್ಯೋಗವನ್ನೇ ತೊರೆದ ಐಎಎಸ್ ಅಧಿಕಾರಿ
ಸ್ವಂತ ಸುಖಕ್ಕಿಂತ ಸೇವೆಯೇ ಮೊದಲು ಎಂಬ ಮನೋಭಾವವನ್ನು ಮೈಗೂಡಿಸಿಕೊಂಡಿರುವ ಒಬ್ಬ ಅಸಾಧಾರಣ ವ್ಯಕ್ತಿ ಅರುಣ್ ಕುಮಾರ್. ಮಾಜಿ ಐಎಎಸ್ ಅಧಿಕಾರಿಯಾಗಿದ್ದ ಅರುಣ್ ಕುಮಾರ್ ಬಿಹಾರದ ಪಾಟ್ನಾದಲ್ಲಿರುವ ಹಿಂದುಳಿದ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಬೋಧಿಸುವ ಸಲುವಾಗಿ ತಮ್ಮ ಪ್ರತಿಷ್ಠಿತ ಕೆಲಸವನ್ನು ತೊರೆದರು. ಅವರ ನಿಸ್ವಾರ್ಥತೆ ಮತ್ತು ಪರಹಿತಚಿಂತನೆಯು ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಪ್ರಶಂಸೆ ಮತ್ತು ಮೆಚ್ಚುಗೆಯನ್ನು ಗಳಿಸುತ್ತಿದೆ.

ಯುಪಿಎಸ್‌ಸಿ ಕೋಚಿಂಗ್ ತರಗತಿಯ ಹೆಚ್ಚುವರಿ ಶುಲ್ಕವನ್ನು ಭರಿಸಲಾಗದೇ ಇರುವ ವಿದ್ಯಾರ್ಥಿಗಳಿಗೆ 1994 ರ ಬ್ಯಾಚ್‌ನ IAS ಅಧಿಕಾರಿ, ಅರುಣ್ ಕುಮಾರ್ ಉಚಿತ ತರಗತಿಗಳನ್ನು ನಡೆಸುತ್ತಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಪರೀಕ್ಷೆ ಬರೆಯಲು ಆರ್ಥಿಕ ಸ್ಥಿತಿ ಅಡಚಣೆಯಾಗಿರಬಾರದು ಎಂಬುದೇ ಇವರ ಉದ್ದೇಶವಾಗಿದೆ.
ಗಂಗಾ ನದಿಯ ದಡದಲ್ಲಿ ತಮ್ಮ ಪತ್ನಿ ರಿತು ಜೈಸ್ವಾಲ್ ಮುಕ್ತ ತರಗತಿಗಳನ್ನು ನಡೆಸುತ್ತಿದ್ದಾಗ ಅದರಿಂದ ಸ್ಫೂರ್ತಿ ಪಡೆದ ಅರುಣ್ ಕುಮಾರ್ ಯಾವುದೇ ವಿದ್ಯಾರ್ಥಿಗೂ UPSC ನಾಗರಿಕ ಸೇವೆಗಳ ಪರೀಕ್ಷೆಯನ್ನು ಭೇದಿಸಲು ಆರ್ಥಿಕ ಸ್ಥಿತಿ ಅಡಚಣೆಯಾಗಿರಬಾರದು ಎಂಬುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...