Sunday, August 23, 2026
Sunday, August 23, 2026

ತೀವ್ರ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾಗೆ ಭಾರತದಿಂದ ರಸಗೊಬ್ಬರ ಪೂರೈಕೆ

Date:

ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾಗೆ ಭಾರತ ಮತ್ತೆ ನೆರವಿನ ಹಸ್ತಚಾಚಿದೆ. 21 ಸಾವಿರ ಟನ್​ ರಾಸಾಯನಿಕ ಗೊಬ್ಬರವನ್ನು ಕಳುಹಿಸಿ ಸಹಾಯಕ್ಕೆ ಬಂದಿದೆ.

ವಿಶೇಷ ಬೆಂಬಲದಡಿ ಭಾರತದ ಹೈಕಮಿಷನ್​ ಆ ದೇಶಕ್ಕೆ ನಿನ್ನೆ ರಾಸಾಯನಿಕ ಗೊಬ್ಬರವನ್ನು ಹಸ್ತಾಂತರಿಸಿತು. ಕಳೆದ ತಿಂಗಳು 44 ಸಾವಿರ ಟನ್​ ರಾಸಾಯನಿಕ ಗೊಬ್ಬರವನ್ನು ಪೂರೈಸಲಾಗಿತ್ತು. ಒಟ್ಟಾರೆ ಈ ವರ್ಷ ದ್ವೀಪರಾಷ್ಟ್ರಕ್ಕೆ ಭಾರತ 4 ಬಿಲಿಯನ್​ ಡಾಲರ್​ ನೆರವು ನೀಡಿದಂತಾಗಿದೆ.

ಶ್ರೀಲಂಕಾದ ಕೃಷಿ ಕ್ಷೇತ್ರ ಮತ್ತೆ ಚೇತರಿಕೆ ಕಾಣಲು ಈ ನೆರವು ನೀಡಲಾಗಿದೆ. ದೇಶದ ಆಹಾರ ಭದ್ರತೆಗೂ ಇದು ಬೆಂಬಲವಾಗಿರಲಿದೆ. ಉಭಯ ರಾಷ್ಟ್ರಗಳ ನಿಕಟ ಬಾಂಧವ್ಯವನ್ನೂ ಇದು ತೋರಿಸುತ್ತದೆ” ಎಂದು ಕೊಲಂಬೊದಲ್ಲಿರುವ ಭಾರತ ಹೈಕಮಿಷನ್​ ಸರಣಿ ಟ್ವೀಟ್​ ಮಾಡಿದೆ.

ಶ್ರೀಲಂಕಾದ ಅವಶ್ಯಕತೆಗಳಿಗೆ ಅನುಗುಣವಾಗಿ ಆರ್ಥಿಕ ಸಹಾಯವನ್ನು ನೀಡುವಲ್ಲಿ ಭಾರತ ಮುಂದಿದೆ. ಅಗತ್ಯವಿರುವ ಸಮಯದಲ್ಲಿ ಗರಿಷ್ಠ ಪ್ರಮಾಣದ ಸಹಾಯವನ್ನು ಒದಗಿಸಿದ ದೇಶವಾಗಿದೆ. ಈ ವರ್ಷದ ಆರಂಭದಿಂದ ದ್ವೀಪರಾಷ್ಟ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ನಲುಗಿದೆ. ವಿದೇಶಿ ಸಾಲಗಳನ್ನು ಮರುಪಾವತಿ ಮಾಡುವುದನ್ನು ಮುಂದೂಡಿದೆ. ದೇಶದ 5.7 ಮಿಲಿಯನ್​ ಜನರ ರಕ್ಷಣೆಗಾಗಿ ಲಂಕಾಡಳಿತ ಹಲವು ದೇಶಗಳ ನೆರವು ಬಯಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...