Sunday, August 23, 2026
Sunday, August 23, 2026

ಯುವಜನತೆಯಲ್ಲಿ ಅಂತರ್ಜಾಲ ವ್ಯಸನ-ವಿಷಯದ‌ ಬಗ್ಗೆ ಶಿವರಾಜ್ ಅವರಿಗೆ ಪಿಎಚ್ ಡಿ ಪದವಿ

Date:

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿ ಮನಶಾಸ್ತ್ರದ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ. ಶಿವರಾಜು ಸಿ. ಇವರು ಧಾರವಾಡ ವಿಶ್ವವಿದ್ಯಾಲಯದ ಮನೋವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಷಣ್ಮುಖ. ವಿ. ಕಾಂಬಳೆ ಅವರ ಮಾರ್ಗದರ್ಶನದಲ್ಲಿ ಎಮೋಷನಲ್ ಇಂಟೆಲಿಜೆನ್ಸ್, ಸೋಶಿಯಲ್ ಸ್ಕಿಲ್ಸ್ ಅಂಡ್ ಮೆಂಟಲ್ ಹೆಲ್ತ್ ಆಫ್ ಇಂಟರ್ನೆಟ್ ಆಡಿಕ್ಟೆಡ್ ಅಡೋ ಲೆಸೆಂಟ್ಸ್ ಮಂಡಿಸಿದ ಮಹಾ ಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿ ಎಚ್ ಡಿ ಪದವಿಯನ್ನು ಪ್ರಧಾನ ಮಾಡಲಾಗಿದೆ.

ಶ್ರೀ. ಶಿವರಾಜು .ಸಿ. ಅವರು ಮೂಲತಃ ಕನಕಪುರ ತಾಲೂಕಿನ ತಟ್ಟಿಗುಪ್ಪೆ ಗ್ರಾಮದ ದಿ. ಚಿಕ್ಕಯ್ಯ ಮತ್ತು ಲಕ್ಷ್ಮಮ್ಮರವರ ಪುತ್ರರಾಗಿದ್ದಾರೆ.

ಈ ಮಹಾಪ್ರಬಂಧದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಇಂದಿನ ಯುವ ಪೀಳಿಗೆಯು ನಿದ್ರಿಸುವ ಸಮಯಕ್ಕಿಂತ ಹೆಚ್ಚು ಸಮಯವನ್ನು ಮೊಬೈಲ್ ಎಂಬ ಮಾಯಜಾಲದಲ್ಲಿ ಕಳೆಯುತ್ತಿದ್ದಾರೆ.ಹೆಚ್ಚು ಹೆಚ್ಚು ಸಮಯವನ್ನು ಅಂತರಾಜಾಲದಲ್ಲಿ ಕಳೆಯುತ್ತಿದ್ದಾರೆ. ಹೀಗೆ, ದಾಸರಾಗುತ್ತಿದ್ದರೆ, ಅತಿಯಾದರೆ ಅಮೃತ ವಿಷವಾಗಿ ಪರಿಣಮಿಸು ವಂತೆಯೇ, ಇಂಟರ್ನೆಟ್ ನ ಅತಿಯಾದ ಬಳಕೆಯಿಂದ ಕಾಲಕ್ರಮೇಣ ಇಂಟರ್ನೆಟ್ ವ್ಯಸನವಾಗಿ ವ್ಯಕ್ತಿಯ ಕೌಟುಂಬಿಕ ಜೀವನ, ಜೀವನದ ಮೇಲೆ ಮತ್ತು ಶಾರೀರಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ.

ಈ ಸಂಶೋಧನಾ ವಿಷಯವು ತರುಣ ಹಾಗೂ ತರುಣಿಯರಲ್ಲಿನ ಮಾನಸಿಕ ಸಂವೇಗಗಳಲ್ಲಿನ ವ್ಯತ್ಯಾಸಗಳು, ಕೌಶಲ್ಯಗಳು ಹಾಗೂ ಅವರ ಮಾನಸಿಕ ಆರೋಗ್ಯದ ಮೇಲೆ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುವುದಾಗಿದೆ. ಪರಸ್ಪರ ಚರ್ಚಿಸುವುದು. ಸಂವಹನ ಮುಖಾಮುಖಿ ಭೇಟಿ, ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು. ಸಾಮಾಜಿಕ ಸನ್ನಿವೇಶಗಳಲ್ಲಿ ಭಾಗಿಯಾಗಿರುವುದರ ಮಹತ್ವ, ಆರೋಗ್ಯಕರ ಅಂತರ ವ್ಯಕ್ತಿ ಸಂಬಂಧಗಳನ್ನು ಗಟ್ಟಿ ಕಳುಹಿಸುವುದರ ಬಗ್ಗೆ ಗಮನ ಚೆಲ್ಲುತ್ತದೆ. ಮತ್ತು ಸಂಜ್ಯಾತ್ಮಕ ಬೆಳವಣಿಗೆಗಳ ಸವಾಲುಗಳ ಬಗ್ಗೆ ಅರಿವನ್ನು ತಿಳಿಸುತ್ತದೆ ಎಂದು ಶ್ರೀ. ಶಿವರಾಜು. ಸಿ. ಅವರು ತಿಳಿಸಿದ್ದಾರೆ.

ಮನಶಾಸ್ತ್ರದಲ್ಲಿ ಪಿ ಎಚ್ ಡಿ ಪದವಿ ಪಡೆದಿರುವ ಶ್ರೀ. ಶಿವರಾಜು ಸಿ ಇವರಿಗೆ ನಮ್ಮ ಕೆ ಲೈವ್ ಬಳಗದ ವತಿಯಿಂದ ಅಭಿನಂದನೆಗಳು…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Nataka Academy 2026-27 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ‌ ಘೋಷಣೆ

Karnataka Nataka Academy ಕರ್ನಾಟಕ ನಾಟಕ ಅಕಾಡೆಮಿಯ 2026-27ನೇ ಸಾಲಿನ ಜೀವಮಾನ...

Paripurna Educational Charitable Trust ನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವಿಸಿ. ಸದೃಢ ಆರೋಗ್ಯ ಸಾಧಿಸಿ- ಸತೀಶ್ ಚಂದ್ರ

ಮಕ್ಕಳು ಪ್ರತಿ ದಿನ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಬೇಕು. ಅಗತ್ಯವಿರುವಷ್ಟು...