ತುಂಗಭದ್ರಾ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ 26 ವರ್ಷ ನಂತರ ಬಾಕಿ ಪರಿಹಾರ ವಿತರಿಸಲಾಯಿತು. ಪರಿಹಾರಕ್ಕಾಗಿ ಹತ್ತಾರು ವರ್ಷದಿಂದ ಕಾದಿದ್ದ ಕಾರ್ಮಿಕರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.
ಪರಿಹಾರ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಂಎಲ್ಸಿ ಆಯನೂರು ಮಂಜುನಾಥ್ ಅವರು ಮಾತನಾಡಿ, 26ವರ್ಷ ನಂತರ ಕಾರ್ಮಿಕರ ಹೋರಾಟಕ್ಕೆ ಜಯಸಿಕ್ಕಿದೆ. ಇದಕ್ಕಾಗಿ ಶ್ರಮಿಸಿದ ಆಡಳಿತ ಮಂಡಳಿ, ಕಾರ್ಮಿಕ ಇಲಾಖೆ, ಕಾರ್ಮಿಕ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಮಿಕ ಇಲಾಖೆ ಆಯುಕ್ತ ನಾಗರಾಜ್ ಮಾತನಾಡಿ, ಪರಿಹಾರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದೇನೆ. 26 ವರ್ಷ ನಂತರ ಪರಿಹಾರ ಮಂಜುರಾಗಿರುವುದು ಸಂತಸ ತಂದಿದೆ ಎಂದರು.
ಕಾರ್ಖಾನೆ ಮಾಲೀಕ ಮಣಿವೇಲನ್, ನಿರ್ದೇಶಕರಾದ ಸುರೇಶ್, ರವಿಚಂದ್ರನ್, ಮಂಗಳೂರು ವಲಯದ ಕಾರ್ಮಿಕ ಆಯುಕ್ತ ಶಿವಕುಮಾರ್ ಇತರರು ಹಾಜರಿದ್ದರು.
ಮೊದಲ ದಿನವೇ ಸುಮಾರು 500 ಮಂದಿಗೆ ಪರಿಹಾರ ಚೆಕ್ ವಿತರಿಸಲಾಯಿತು. ಒಟ್ಟು 926 ಮಂದಿಗೆ 19 ಕೋಟಿ ಪರಿಹಾರ ವಿತರಿಸಬೇಕಿದ್ದು ವಿತರಣೆ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಮುಂದುವರೆಯಲಿದೆ.