ಉಪರಾಷ್ಟ್ರಪತಿ ಚುನಾವಣೆ ಆಗಸ್ಟ್ 6ರಂದು ನಡೆಯಲಿದ್ದು ರಾಜಸ್ಥಾನದ ಮಾಜಿ ಗವರ್ನರ್ ಮಾರ್ಗರೇಟ್ ಆಳ್ವ ಅವರನ್ನು ಭಾನುವಾರ ವಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಘೋಷಿಸಿವೆ. 80ರ ಹರೆಯದ ಆಳ್ವ ಅವರ ವಿರುದ್ಧ ಆಡಳಿತಾರೂಢ ಎನ್ಡಿಎ ಪ್ರಸ್ತುತ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಜಗದೀಪ್ ಧನ್ಖರ್ ಅವರನ್ನು ಕಣಕ್ಕಿಳಿಸಿದೆ.
ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ನನ್ನ ಹೆಸರನ್ನು ನಾಮನಿರ್ದೇಶನ ಮಾಡಿರುವುದು ಗೌರವ. ಈ ನಾಮನಿರ್ದೇಶನವನ್ನು ನಾನು ವಿನಯದಿಂದ ಒಪ್ಪಿಕೊಂಡಿದ್ದು, ನನ್ನ ಮೇಲೆ ಭರವಸೆ ಇರಿಸಿದ ವಿಪಕ್ಷದ ನೇತಾರರಿಗೆ ಧನ್ಯವಾದಗಳು ಎಂದು ಆಳ್ವ ಅವರು ಟ್ವೀಟ್ ಮಾಡಿದ್ದಾರೆ.