Tuesday, March 24, 2026
Tuesday, March 24, 2026

ರೈಲ್ವೆ ಪ್ರಯಾಣದಲ್ಲಿ ಆಹಾರ ಪದಾರ್ಥಗಳ ಹಣಕ್ಕೆ ಡಿಜಿಟಲ್ ವರ್ಗಾವಣೆ ಸೌಲಭ್ಯ

Date:

ರೈಲಿನಲ್ಲಿ ಪ್ರಯಾಣಿಸುವಾಗ ಆಹಾರ ಪದಾರ್ಥಗಳ ಮೇಲೆ ಇರುವ ಬೆಲೆಗಿಂತ ಹೆಚ್ಚುವರಿ ಬೆಲೆಯನ್ನು ಮಾರಾಟಗಾರರು ಕೇಳುತ್ತಾರೆ. ಇದನ್ನು ಎಲ್ಲಾ ಪ್ರಯಾಣಿಕರ ಅನುಭವಕ್ಕೆ ಬಂದಿರುತ್ತದೆ.

ಇಂತಹ ಘಟನೆಗಳ ಬಗ್ಗೆ ಹಲವು ರೈಲು ಪ್ರಯಾಣಿಕರು ಕೂಡ ಇಲಾಖೆಗೆ ದೂರು ನೀಡಿದ್ದರು. ಕೊನೆಗೂ ಇಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೆಚ್ಚುವರಿ ಹಣ ಪಡೆಯುವುದಕ್ಕೆ ತಡೆ ಹಾಕಲಾಗಿದೆ.ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು ಈ ಮಾರಾಟಗಾರರನ್ನು ನಿಯಂತ್ರಿಸಲು ಸಿದ್ಧತೆಗಳನ್ನು ಮಾಡಿದೆ.

IRCTC ಮೆನು ಕಾರ್ಡ್‌ನಲ್ಲಿಯೇ QR ಕೋಡ್ ಅನ್ನು ಮುದ್ರಿಸಿದೆ. ಈ ಕ್ರಮದಿಂದಾಗಿ ಆಹಾರ ಪದಾರ್ಥ ಮಾರಾಟಗಾರರು ಹೆಚ್ಚಿನ ಶುಲ್ಕ ವಿಧಿಸಲು ಆಗುವುದಿಲ್ಲ.

ಕ್ರಮೇಣ, ಈ ವ್ಯವಸ್ಥೆಯನ್ನು IRCTC ಅಡುಗೆ ಸೌಲಭ್ಯವನ್ನು ಹೊಂದಿರುವ ಎಲ್ಲಾ ರೈಲುಗಳಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ. ರಾಜಧಾನಿ, ಶತಾಬ್ದಿ, ತೇಜಸ್‌ನಂತಹ ರೈಲುಗಳಲ್ಲಿ ಟಿಕೆಟ್ ಬುಕ್ಕಿಂಕ್ ಜೊತೆಗೆಯೇ ಆಹಾರದ ಆಯ್ಕೆ ಇದೆ. ಆದರೆ ಅನೇಕ ರೈಲುಗಳಲ್ಲಿ ಟಿಕೆಟ್ ಜೊತೆಗೆ ಆಹಾರವನ್ನು ಕಾಯ್ದಿರಿಸಲು ಅವಕಾಶವಿಲ್ಲ. ಆದರೆ, ಅಂತಹ ರೈಲುಗಳಲ್ಲಿ ಊಟದ ಸೇವೆ ನೀಡುವ ಅಡುಗೆ ಬೋಗಿಗಳನ್ನು( ಪ್ಯಾಂಟ್ರಿ ಕಾರ್) ಹೊಂದಿರುತ್ತವೆ.

ಅಡುಗೆ ಬೋಗಿ ಹೊಂದಿರದ ಮೂರನೇ ವಿಧದ ರೈಲುಗಳಿವೆ. ಇವುಗಳಲ್ಲಿ IRCTC ಮಾರಾಟಗಾರರು ಮೂಲ ಅಡುಗೆಮನೆಯಿಂದ ಆಹಾರವನ್ನು ಮಾರಾಟ ಮಾಡುತ್ತಾರೆ. ಈ ಮಾರಾಟಗಾರರು ಕೆಲವೊಮ್ಮೆ ಪ್ರಯಾಣಿಕರಿಂದ ಹೆಚ್ಚು ಶುಲ್ಕ ಪಡೆಯುತ್ತಾರೆ. ಪ್ರಯಾಣಿಕರು ಹೆಚ್ಚಾಗಿ ನಗದು ಮೂಲಕ ಪಾವತಿಸುತ್ತಾರೆ. ಇದು ಅಧಿಕ ಶುಲ್ಕ ವಿಧಿಸುವ ಸಾಧ್ಯತೆಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಬಿಜೆಪಿ ಒಡ್ಡುವ ಆಸೆ ಆಮಿಷಗಳಿಗೆ ಒಳಗಾಗಬೇಡಿ- ಸಿದ್ಧರಾಮಯ್ಯ

CM Siddharamaih ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ...

National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ. ಜಾ./ ಪ. ಪಂ. ರೈತರಿಂದ ಅರ್ಜಿ ಅಹ್ವಾನ

National Horticulture Mission Scheme 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್...

S.N. Channabasappa ಮತಪತ್ರ ಪದ್ಧತಿ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಿರೋಧ

S.N. Channabasappa ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ...

MESCOM ಸಾಗರ : ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...