Wednesday, March 12, 2025
Wednesday, March 12, 2025

ಚೀನಾ : ಬೆಂಬಿಡದ ಕೋವಿಡ್

Date:

ಕಳೆದ ಮಂಗಳವಾರ ಜನನಿಬಿಡ ಲಾನ್ಸೋ ನಗರದಲ್ಲಿ 29 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಇಡೀ ನಗರವನ್ನು ಲಾಕ್ ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳ ಸರಬರಾಜು ಅಥವಾ ವೈದ್ಯಕೀಯ ಚಿಕಿತ್ಸೆಗೆ ನಾಗರೀಕರಿಗೆ ಬಂದು ಹೋಗಲು ಮಾತ್ರ ಅವಕಾಶವಿದೆ.

ಚೀನಾದ ಉತ್ತರಭಾಗದ 10 ಸಾವಿರಕ್ಕೂ ಹೆಚ್ಚು ಜನ ಮನೆಯಲ್ಲಿಯೇ ಇರಬೇಕೆಂದು ನಿರ್ಬಂಧಿಸಲಾಗಿದೆ. ಪ್ರವಾಸಿ ತಾಣಗಳ ಭೇಟಿಗೆ ಮಿತಿ ನಿರ್ಬಂಧ ಜಾರಿಗೊಳಿಸಿದೆ. ಅಗತ್ಯವಿಲ್ಲದೇ ಯಾರು ನಗರವನ್ನು ಬಿಟ್ಟು ಹೋಗಬಾರದೆಂದು ಎಚ್ಚರಿಸಿದೆ. ಡೆಲ್ಟಾ ವೈರಾಣು ಸೋಂಕಿನ ಶೀಘ್ರ ಹರಡುವಿಕೆಯಿಂದ ಚೀನಾದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಗುಂಪು-ಗುಂಪಾಗಿ ಬರುವ ದೇಶಿಯ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಆರೋಗ್ಯ ಸಿಬ್ಬಂದಿಗೆ ಜಾಗೃತಿ ವಹಿಸಲು ಸೂಚನೆ ನೀಡಲಾಗಿದೆ. ಬರುವ ದಿನಗಳಲ್ಲಿ ಈ ವೈರಾಣು ಹೆಚ್ಚು ಸೋಂಕನ್ನು ಹರಡಬಹುದೆಂದು ತಪಾಸಣೆಯನ್ನು ಕೂಡ ಶೀಘ್ರ ಕೈಗೊಳ್ಳಬೇಕೆಂದು ಆದೇಶಿಸಲಾಗಿದೆ.

ಚೀನಾ ರಾಜಧಾನಿ ಬೀಜಿಂಗ್ ನ ಚಾನ್ಸ್ ಪಿಂಗ್ ಜಿಲ್ಲೆಯಲ್ಲಿ ಸ್ಥಳೀಯವಾಗಿ 2 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ಸಂಗತಿಯನ್ನು ಬೀಜಿಂಗ್ ನ ರೋಗ ನಿಯಂತ್ರಣ ಕೇಂದ್ರದ ಉಪನಿರ್ದೇಶಕರಾದ ಪಾಂಗ್ ಜಿಂಗ್ ಹೊ ಹೇಳಿದ್ದಾರೆ. 55 ವರ್ಷ ಮೇಲಿನ ವ್ಯಕ್ತಿಗಳಿಗೆ ಈ ಹೊಸ ಸೋಂಕು ಉಂಟಾಗಿದ್ದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪಾಂಗ್ ಜಿಂಗ್ ಹೊ ತಿಳಿಸಿದ್ದಾರೆ. ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದಂತೆ ಮಂಗೋಲಿಯಾದ ಒಳನಾಡು, ಗೈಜೊ, ಗ್ಯಾನ್ ಸೂ, ಹೆಬೇ, ಹುನಾನ್ ಮತ್ತು ಶಾಂಜಿ ಮುಂತಾದ ನಗರಗಳಲ್ಲಿ ಈ ಹೊಸ ಪ್ರಕರಣ ಪತ್ತೆಯಾಗಿದೆ.

ಚೀನಾದ ಮುಖ್ಯ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು 96,797 ಆಗಿದ್ದು, ಕಳೆದ ಭಾನುವಾರ ಪತ್ತೆಯಾಗಿದೆ. ಇದರಲ್ಲಿ ಇನ್ನು ಚಿಕಿತ್ಸೆ ಪಡೆಯುತ್ತಿರುವ 573 ರೋಗಿಗಳನ್ನು ಕೂಡ ಒಳಗೊಂಡಿದೆ ಹಾಗೂ ಇದರಲ್ಲಿ 20 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Tarunodaya Shivamogga ನಿಸರ್ಗದಾನಂದ ಸವಿಯ ಬೇಕೆಂದರೆ ಚಾರಣ ಹೋಗಲೇ ಬೇಕು- ಜಿ.ವಿಜಯ ಕುಮಾರ್

Tarunodaya Shivamogga ಜರಿ, ತೊರೆ, ಹಕ್ಕಿ ಪಕ್ಷಿಗಳ ಕಲರವ, ಪ್ರಕೃತಿ...

JCI Shivamogga ಜೆಸಿಐ ನಲ್ಲಿ ತೊಡಗಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆ- ಸೂರ್ಯ ನಾರಾಯಣ ವರ್ಮ

JCI Shivamogga ಸಮಾಜಮುಖಿ ಚಟುವಟಿಕೆಗಳ ಜತೆಯಲ್ಲಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ...

Karnataka Lokayukta ಮಾರ್ಚ್ 18 ರಿಂದ 21 ವರೆಗೆ ರಾಜ್ಯ ಉಪಲೋಕಾಯುಕ್ತ ನ್ಯಾ.ಕೆ.ಫಣೀಂದ್ರ ಅವರ ಜಿಲ್ಲಾ ಕಾರ್ಯಕ್ರಮಗಳ ಮಾಹಿತಿ

Karnataka Lokayukta ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18...

CM Siddharamaih ಕುರ್ಚಿ ಉಳಿಸಿಕೊಳ್ಳುವ ಯತ್ನದಲ್ಲಿ ಸಿದ್ಧರಾಮಯ್ಯನವರ ಬಜೆಟ್…!

CM Siddharamaih ಕರ್ನಾಟಕದ ಅಭಿವೃದ್ಧಿಗೆ ಪೂರಕವೇ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ...