Friday, October 4, 2024
Friday, October 4, 2024

ರಾಹುಲ್ ಗಾಂಧಿಯವರ ಹೇಳಿಕೆ ಅಸಮರ್ಪಕ ಪ್ರಸಾರ- ವಾರ್ತಾ ಟಿವಿಯಿಂದ ಕ್ಷಮಾಯಾಚನೆ

Date:

ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಗೂ ಉದಯಪುರ್ ಹತ್ಯೆಗೂ ಸಂಬಂಧವಿಲ್ಲದೇ ಇದ್ದರೂ ಅವರ ಹೇಳಿಕೆಯನ್ನು ಉದಯಪುರ್ ಹತ್ಯೆ ಘಟನೆಗೆ ಥಳಕು ಹಾಕಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಝೀ ನ್ಯೂಸ್ ವಾಹಿನಿ ಇಂದು ಕ್ಷಮೆಯಾಚಿಸಿದೆ.

ಕೇರಳದ ತಮ್ಮ ಸ್ವಕ್ಷೇತ್ರ ವಯನಾಡಿನಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ ದಾಂಧಲೆ ಕುರಿತು ರಾಹುಲ್ ಮಾತನಾಡುತ್ತಿರುವ ವೀಡಿಯೋವನ್ನು ಝೀ ನ್ಯೂಸ್ ತನ್ನ ಪ್ರೈಮ್ ಟೈಮ್ ಶೋ ಡಿಎನ್‍ಎ ಇದರಲ್ಲಿ ಪ್ರಸಾರ ಮಾಡಿ, ರಾಹುಲ್ ಅವರು ಉದಯಪುರ್ ಹತ್ಯೆ ಘಟನೆ ಕುರಿತು ಮಾತನಾಡುತ್ತಿದ್ದಾರೆ ಎಂದು ವಿವರಿಸಿತ್ತು.

ಉದಯಪುರ್ ಹತ್ಯೆ ಕುರಿತು ರಾಹುಲ್ ಅವರು ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ರಾಹುಲ್ ಅವರ ಹೇಳಿಕೆ ಪ್ರಸಾರ ಮಾಡುವ ಮುನ್ನ ನಿರೂಪಕ ರೋಹಿತ್ ರಂಜನ್ ಹೇಳಿದ್ದರು.

ರಾಹುಲ್ ಅವರು ಉದಯಪುರ್ ಹತ್ಯೆ ಪ್ರಕರಣದ ಆರೋಪಿಗಳನ್ನು ಮಕ್ಕಳು ಎಂದು ಹೇಳುವ ಮೂಲಕ ತಾವು ಅವರ ಬಗ್ಗೆ ಆಕ್ರೋಶ ಹೊಂದಿಲ್ಲ ಎಂದು ಹೇಳಿದ್ದಾರೆ ಎಂದು ರಂಜನ್ ವಿವರಣೆ ನೀಡಿದ್ದರು.

ವೀಡಿಯೋದಲ್ಲಿ ರಾಹುಲ್ ಆಡಿದ ಮಾತುಗಳು ಹೀಗಿದ್ದವು- ದೇಶದಲ್ಲಿರುವ ಈಗಿನ ವಾತಾವರಣವನ್ನು ಆಡಳಿತ ಪಕ್ಷ ಸೃಷ್ಟಿಸಿದೆ ಎಂದು ಹೇಳುವುದು ಕೇಳಿಸುತ್ತದೆ.

ಇದರ ಬಳಿಕ ಇನ್ನೊಂದು ತುಣುಕು ಪ್ರಸಾರ ಮಾಡಿದಾಗ ಅದರಲ್ಲಿ ರಾಹುಲ್ ಇದನ್ನು ಮಾಡಿದ ಮಕ್ಕಳು,ಅವರು ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ಅವರ ಬಗ್ಗೆ ನನಗೆ ಕೋಪವಿಲ್ಲ.ಅವರು ಮಕ್ಕಳು, ಇಂತಹ ಕೃತ್ಯಗಳ ಪರಿಣಾಮಗಳ ಬಗ್ಗೆ ಅವರಿಗೆ ತಿಳಿದಿಲ್ಲ ಎಂದಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...