Tuesday, December 16, 2025
Tuesday, December 16, 2025

ರಾಹುಲ್ ಗಾಂಧಿಯವರ ಹೇಳಿಕೆ ಅಸಮರ್ಪಕ ಪ್ರಸಾರ- ವಾರ್ತಾ ಟಿವಿಯಿಂದ ಕ್ಷಮಾಯಾಚನೆ

Date:

ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಗೂ ಉದಯಪುರ್ ಹತ್ಯೆಗೂ ಸಂಬಂಧವಿಲ್ಲದೇ ಇದ್ದರೂ ಅವರ ಹೇಳಿಕೆಯನ್ನು ಉದಯಪುರ್ ಹತ್ಯೆ ಘಟನೆಗೆ ಥಳಕು ಹಾಕಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಝೀ ನ್ಯೂಸ್ ವಾಹಿನಿ ಇಂದು ಕ್ಷಮೆಯಾಚಿಸಿದೆ.

ಕೇರಳದ ತಮ್ಮ ಸ್ವಕ್ಷೇತ್ರ ವಯನಾಡಿನಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ ದಾಂಧಲೆ ಕುರಿತು ರಾಹುಲ್ ಮಾತನಾಡುತ್ತಿರುವ ವೀಡಿಯೋವನ್ನು ಝೀ ನ್ಯೂಸ್ ತನ್ನ ಪ್ರೈಮ್ ಟೈಮ್ ಶೋ ಡಿಎನ್‍ಎ ಇದರಲ್ಲಿ ಪ್ರಸಾರ ಮಾಡಿ, ರಾಹುಲ್ ಅವರು ಉದಯಪುರ್ ಹತ್ಯೆ ಘಟನೆ ಕುರಿತು ಮಾತನಾಡುತ್ತಿದ್ದಾರೆ ಎಂದು ವಿವರಿಸಿತ್ತು.

ಉದಯಪುರ್ ಹತ್ಯೆ ಕುರಿತು ರಾಹುಲ್ ಅವರು ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ರಾಹುಲ್ ಅವರ ಹೇಳಿಕೆ ಪ್ರಸಾರ ಮಾಡುವ ಮುನ್ನ ನಿರೂಪಕ ರೋಹಿತ್ ರಂಜನ್ ಹೇಳಿದ್ದರು.

ರಾಹುಲ್ ಅವರು ಉದಯಪುರ್ ಹತ್ಯೆ ಪ್ರಕರಣದ ಆರೋಪಿಗಳನ್ನು ಮಕ್ಕಳು ಎಂದು ಹೇಳುವ ಮೂಲಕ ತಾವು ಅವರ ಬಗ್ಗೆ ಆಕ್ರೋಶ ಹೊಂದಿಲ್ಲ ಎಂದು ಹೇಳಿದ್ದಾರೆ ಎಂದು ರಂಜನ್ ವಿವರಣೆ ನೀಡಿದ್ದರು.

ವೀಡಿಯೋದಲ್ಲಿ ರಾಹುಲ್ ಆಡಿದ ಮಾತುಗಳು ಹೀಗಿದ್ದವು- ದೇಶದಲ್ಲಿರುವ ಈಗಿನ ವಾತಾವರಣವನ್ನು ಆಡಳಿತ ಪಕ್ಷ ಸೃಷ್ಟಿಸಿದೆ ಎಂದು ಹೇಳುವುದು ಕೇಳಿಸುತ್ತದೆ.

ಇದರ ಬಳಿಕ ಇನ್ನೊಂದು ತುಣುಕು ಪ್ರಸಾರ ಮಾಡಿದಾಗ ಅದರಲ್ಲಿ ರಾಹುಲ್ ಇದನ್ನು ಮಾಡಿದ ಮಕ್ಕಳು,ಅವರು ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ಅವರ ಬಗ್ಗೆ ನನಗೆ ಕೋಪವಿಲ್ಲ.ಅವರು ಮಕ್ಕಳು, ಇಂತಹ ಕೃತ್ಯಗಳ ಪರಿಣಾಮಗಳ ಬಗ್ಗೆ ಅವರಿಗೆ ತಿಳಿದಿಲ್ಲ ಎಂದಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 16 & 17 ಶಿವಮೊಗ್ಗದ ರವೀಂದ್ರನಗರಕ್ಕೆ ವಿದ್ಯುತ್ ಸರಬರಾಜು ಇಲ್ಲ, ಮೆಸ್ಕಾಂ ಪ್ರಕಟಣೆ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯ ರವೀಂದ್ರ ನಗರದಲ್ಲಿ ಓವರ್...

Shamanur Shivashankarappa ವಿಧಾನ ಸಭಾ ಕಲಾಪ: ಅಗಲಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

Shamanur Shivashankarappa ಎಲ್ಲ ರಾಜಕಾರಣಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಶಾಮನೂರು ಶಿವಶಂಕರಪ್ಪ...

Dr. G.S. Shivarudrappa ರಾಷ್ಟ್ರಕವಿ ಜಿ.ಎಸ್.ಎಸ್. ರಚಿತ ಕವನಗಳ ಆನ್ ಲೈನ್ ಗಾಯನ ಸ್ಪರ್ಧೆ

Dr. G.S. Shivarudrappa ಶಿವಮೊಗ್ಗದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್ . ಶಿವರುದ್ರಪ್ಪ...

ಸಿಗಂದೂರು ಸೇತುವೆ: ಆತ್ಮಹತ್ಯೆಗೆ ಯತ್ನಿಸಿದಾತನ ಜೀವವುಳಿಸಿದ ಇಂಜಿನಿಯರ್ ಮಾತಿನ ಕೌಶಲ

ಮೈಸೂರಿನ ವ್ಯಕ್ತಿಯೊಬ್ಬರು ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂಜಿನಿಯರ್ ಒಬ್ಬರ...